ನವರಾತ್ರಿ ದೇವಿ ಮೂರ್ತಿ ಎದುರು ಡಾನ್ಸ್ ವಿಚಾರ: ಮಾರಕಾಸ್ತ್ರಗಳಿಂದ ಹೊಡೆದಾಟ
Team Udayavani, Oct 8, 2019, 10:13 AM IST
ವಿಜಯಪುರ: ನವರಾತ್ರಿ ದೇವಿ ಮೂರ್ತಿ ಎದುರು ಡಾನ್ಸ್ ವಿಚಾರದಲ್ಲಿ ಯುವಕರ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು, ಮಾರಕಾಸ್ತ್ರಗಳಿಂದ ಹೊಡೆದಾಟ ಮಾಡಿಕೊಂಡು ಇಬ್ಬರು ಗಾಯಗೊಂಡ ಘಟನೆ ಜರುಗಿದೆ.
ವಿಜಯಪುರ ನಗರದ ಆಶ್ರಮ ಬಳಿಯ ಪಾರೇಖ ನಗರದ ಪುಡಾರಿ ಯುವಕರು ಸೋಮವಾರ ರಾತ್ರಿ 8 ಗಂಟೆ ಸುಮರಿಗೆ ದೇವರ ಮುಂದೆ ಹಾಡಿಗೆ ತಕ್ಕಂತೆ ಕುಣಿಯವ ವಿಷಯದಲ್ಲಿ ನಡೆದ ಜಗಳವೇ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಳ್ಳಲು ಕಾರಣವಾಗಿದೆ.
ಘಟನೆಯಲ್ಲಿ ಜಗಳ ಬಿಡಿಸಲು ಬಂದ ರಮೇಶ ಮೇತ್ರಿ ಎಂಬ 35 ವರ್ಷದ ಯುವಕನ ಮೇಲೆ ಹಾಗೂ ಓರ್ವ ಬಾಲಕನ ಮೇಲೆ ದೊಣ್ಣೆಯಿಂದ ದಾಳಿ ಮಾಡಿದ್ದರಿಂದ ಇಬ್ಬರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ಬು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವಕರ ಗುಂಪು ಮಾರಕಾಸ್ತ್ರ ಗಳಿಂದ ಹೊಡಿದಾಡಿಕೊಂಡ ದೃಶ್ಯ ಸಿ.ಸಿ. ಟಿವಿ ಕೆಮೆರಾದಲ್ಲಿ ದಾಖಲಾಗಿದೆ. ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ