ವಿಷ ಬೀಜ ಬಿತ್ತುವವರ ಆಟ ನಡೆಯಲ್ಲ


Team Udayavani, Mar 4, 2018, 1:39 PM IST

vij-6.jpg

ಬಸವನಬಾಗೇವಾಡಿ: ಬಸವಣ್ಣನವರು ಜಾತಿರಹಿತ ನವ ಸಮಾಜ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಯಾರೆ ಬಂದು ಜಾತಿ, ಧರ್ಮದ ವಿಷ ಬೀಜ ಬಿತ್ತಿದರು ಕೂಡಾ ಅದು ನಾಟಿಯಾಗಿ ಬೆಳೆದು ಹೆಮ್ಮರವಾಗುವ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

ತಾಲೂಕಿನ ಮಸಿಬಿನಾಳ ಗ್ರಾಮದಲ್ಲಿ ದರ್ಗಾ ಹಜರತ್‌ ಮೈಹಿಬೂಸುಬಾನಿ ಮತ್ತು ಜಾಮೀಯಾ ಮಸಜಿದ್‌ ಕಮಿಟಿ ವತಿಯಿಂದ ನಿರ್ಮಿಸಲಾದ ನೂತನ ಶಾದಿಮಹಲ್‌ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾತದಲ್ಲಿ ಅಣ್ಣ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಜಾತಿ ರಹಿತ ಸಮಾಜ ಕಟ್ಟಿದ್ದಾರೆ. ಇಂತಹ ದೇಶದಲ್ಲಿ ಜಾತಿ ಧರ್ಮದ ಬಗ್ಗೆ ವಿಷ ಬೀಜ ಬಿತ್ತುವರ ಆಟ ನಡೆಯುವುದಿಲ್ಲ. ಆ ಆಟಕ್ಕೆ ಕಡಿವಾಣ ಹಾಕುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದರು.

ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ಹಿಂದೂಗಳು ನೆನಪಾಗುತ್ತಾರೆ. ಹಿಂದೂ ಧರ್ಮದ ಮಾತುಗಳನ್ನು ಬಳಸುತ್ತಾರೆ. ಚುನಾವಣೆ ಬಳಿಕ ಅನಂತಕುಮಾರ ಮುಂದೆ ಮುಂದೆ ಯಡಿಯೂರಪ್ಪ ಹಿಂದೆ ಹಿಂದೆ ಧರ್ಮ ಹೋಗುತ್ತದೆ ಎಂದು ಟೀಕೆ ಮಾಡಿದ ಅವರು, ಭಾರತ ದೇಶದಲ್ಲಿ ಬದುಕುವ ಪ್ರತಿಯೊಬ್ಬ ಹಿಂದು ಮುಸ್ಲಿಂರು ಒಂದೇ ತಾಯಿ ಮಕ್ಕಳ ಹಾಗೆ ಬಾಳಬೇಕು. ಅಂದಾಗ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಾನು ಯೋಜನಾ ಆಯೋಗದ ಊಪಾಧ್ಯಕ್ಷನಾಗಿದ್ದಾಗ ಬಳಿಕ ಬಸವತತ್ವ ಆಧಾರದ ಮೇಲೆ ನಡೆದುಕೊಂಡಿದ್ದೇನೆ. ನಾನು ಮುಸ್ಲಿಂ ಧರ್ಮದಲ್ಲಿ ಜನಿಸಿದರು ಕೂಡಾ ಬಸವ ತತ್ವದ ಪ್ರತಿಪಾದಕ. ಹೀಗಾಗಿಯೇ ನಾನು ಯೋಜನಾ ಆಯೋಗದ ಅಧ್ಯಕ್ಷನಾದ ಬಳಿಕ ಮಠ, ಮಂದಿರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ 400 ರೂ. ಇದ್ದ ಭತ್ಯೆಉನ್ನು 5 ಸಾವಿರ ರೂ.ಗೆ ಏರಿಸಿದ್ದೇನೆ ಮತ್ತು ಮಠ, ಮಂದಿರಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದ್ದೇನೆ ಎಂದರು.
 
ಬಿಜೆಪಿಯವರು ಸಂವಿಧಾನ ಬದಲು ಮಾಡಲು ಬಂದಿದ್ದೇವೆ ಎಂದು ಹೇಳುತ್ತಿರುವುದು ತಪ್ಪು. ಸಂವಿಧಾನ ಬದಲಾದರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ. ನಿನ್ನ ಧರ್ಮ ಇಷ್ಟ ಪಡು ಪರ ಧರ್ಮ ಗೌರವಿಸಬೇಕು ಹೊರತು ಬೇರೆ ಧರ್ಮದ ಬಗ್ಗೆ ಅ ಗೌರವ ತೋರಬಾರದು. ಅದು ಮನುಷ್ಯನ ಧರ್ಮವೇ ಅಲ್ಲ. ಅದಕ್ಕಾಗಿಯೇ ಬಸವಣ್ಣನವರ ತತ್ವಗಳು ಅವರ ಆಚಾರ ವಿಚಾರಗಳು. ಪ್ರತಿಯೊಬ್ಬರು ಪಠಣ ಮಾಡಿದ ವ್ಯಕ್ತಿ ಬಾಯಲ್ಲಿ ಇಂತಹ ಮಾತುಗಳು ಬರುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಹಿಂದ ಮಾಡುವ ಮೊದಲು ನಾನು ಅವರಿಗೆ ಒಂದು ಸಲಹೆ ನೀಡಿದ್ದೆ. ನೀವು ಅಹಿಂದ ಸ್ಥಾಪಿಸಿ ಆದರೆ ಅದರಲ್ಲಿ ಬಸವಣ್ಣನವರ ತತ್ವ ಇರಲಿ ಎಂದು ಹೇಳಿದ್ದೆ. ನಾನು ಹೇಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ 5 ವರ್ಷದಿಂದ ರಾಜ್ಯದಲ್ಲಿ ಬಸವತತ್ವದ ಆಧಾರದ ಮೇಲೆ ಆಡಳಿತ ನಡೆಸುತ್ತಿದ್ದಾರೆ ಎಂದರು. 

ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕಿ ಬಾತ್‌ ಹೇಳುವ ಬದಲು ಕಾಯಕ ಮಾಡಲಿ, ಅಂದಾಗ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಕೇವಲ ಮಾತಿನಲ್ಲಿ ಹೊಟ್ಟೆ ತುಂಬಲ್ಲ. ಈ ದೇಶದ ಬೆನ್ನೆಲಬುವಾದ ರೈತರ ಸಾಲ ಮನ್ನಾ ಮಾಡಲಿ, ಅದನ್ನು ಬಿಟ್ಟು ದೇಶದ ಉದ್ಯಮಿಗಳ ಸಾಲ ಮನ್ನಾ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಯರನಾಳ ಮಠದ ಸಂಗನಬಸವ ಶ್ರೀಗಳು, ಮಸಬಿನಾಳದ ವಿರಕ್ತಮಠದ ಸಿದ್ದರಾಮ ಶ್ರೀಗಳು ಸಾನ್ನಿಧ್ಯ, ಶಾಸಕ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೊಲ್ಹಾರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಬಿ. ಪಕಾಲಿ, ಬಸವನಬಾಗೇವಾಡಿ ಬ್ಲಾಕ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ರಾಜುಗೌಡ ಪಾಟೀಲ, ಹನಿಫ್‌ ಮಕಾನದಾರ, ಉಸ್ಮಾನ ಪಟೇಲ್‌, ಎಸ್‌.ಎಂ. ಪಟೇಲ್‌ (ಗಣಿಯಾರ), ಎ.ಬಿ. ಪಾಟೀಲ, ಸಲೀಂ ನಾಗಠಾಣ, ಎಂ.ಸಿ. ಮುಲ್ಲಾ, ಬೀರಪ್ಪ ಸಾಸನೂರ, ಬಾಬುಗೌಡ ಪಾಟೀಲ, ಜಿ.ಎಂ. ದೊಡ್ಡಮನಿ, ಎ.ಎಂ. ಹಿಪ್ಪರಗಿ, ಬಸವರಾಜ ಸೋಮಪು, ಡಿ.ಎಂ. ಬಡಿದಾಳ, ಈರನಗೌಡ ಪಾಟೀಲ, ಎಂ.ಎಚ್‌.
ಹತ್ತರಕಿಹಾಳ, ಐ.ಎನ್‌. ಕರ್ನಾಳ, ಮೌಲಾಸಾಬ ಅತ್ತಾರ, ಶಾಂತಪ್ಪ ಬೈಚನಳ, ಬಾಬಾಗೌಡ ಪಾಟೀಲ, ದಾನಪ್ಪ ತೋಟದ, ಮೈಬೂಬಸಾಬ ಗಣಿ, ಎ.ಎಲ್‌. ಗಂಗೂರ, ಕೆ.ಸಿ. ಕಾರಜೋಳ ಇದ್ದರು. ಜಮೀರ ಸೈಯದ್‌ ಸ್ವಾಗತಿಸಿದರು. ಬಿ.ಎಸ್‌. ಅಗಸಬಾಳ ನಿರೂಪಿಸಿದರು. ದಾದಾಪಿರ್‌ ಜೌರಸಂಗ ವಂದಿಸಿದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.