ವರ್ಷದ ಹಿಂದೆ ಬಾಲ ಮಂದಿರದಿಂದ ಬಾಲಕಿ ನಾಪತ್ತೆ:ಬೆನ್ನುಬಿದ್ದ ಪೊಲೀಸರು
Team Udayavani, Jul 9, 2021, 6:25 PM IST
ವಿಜಯಪುರ:ನಗರದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಿಂದ ವರ್ಷದ ಹಿಂದೆ ಕಾಣೆಯಾಗಿರುವ ಬಾಲಕಿಯೊಬ್ಬಳ ಶೋಧಕ್ಕಾಗಿ ಪೊಲೀಸರು ಬೆನ್ನುಬಿದ್ದಾರೆ.
2020 ಏಪ್ರಿಲ್ 12 ರಂದು ನಗರದ ಮನಗೂಳಿ ರಸ್ತೆಯಲ್ಲಿರುವ ಬಾಲಕಿಯರ ಬಾಲ ಮಂದಿರದಿಂದ 17 ವರ್ಷದ ಶೃತಿ ಶಂಕರ ಶಿತೋಳಿ ಎಂಬ ಬಾಲಕಿ ಕಾಣೆಯಾಗಿದ್ದಾಳೆ.
ಈ ಕುರಿತು ಕಳೆದ ವರ್ಷ ಎಪ್ರೀಲ್ 23 ರಂದು ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಬಾಲಕಿ ನಾಪತ್ತೆ ಹಿಂದೆ ಅಪಹರಣ ಮಾಡಿರುವ ಶಂಕೆಯೂ ಇದೆ ಎಂದು ಸರಕಾರಿ ಬಾಲಕಿಯರ ಬಾಲ ಮಂದಿರದ ಅಂದಿನ ಪ್ರಭಾರ ಅಧೀಕ್ಷಕಿ ಅತೀಕ ಸಿದ್ದಿ ದೂರು ನೀಡಿದ್ದರು.
ಬಾಲಕಿ ಕಾಣೆಯಾಗಿ 15 ತಿಂಗಳಾಗುತ್ತ ಬಂದರೂ ಎಲ್ಲಿಯೂ ಆಕೆಯ ಸುಳಿವು ಸಿಕ್ಕಿಲ್ಲ. ಹೀಗಾಗಿ ಕಳೆದ ವಾರದ ಹಿಂದಷ್ಟೇ ಜಲನಗರ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಎಸೈ ಎಸ್ಐ ಎಸ್.ಎಂ.ಶಿರಗುಪ್ಪಿ ವಿಶೇಷ ಆಸಕ್ತಿ ತೋರಿ ಬಾಲಕಿಯ ಶೋಧಕ್ಕೆ ಬೆನ್ನು ಬಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ