ಸರ್ಕಾರೇತರ ಸಂಸ್ಥೆಗಳು ಜಿಲ್ಲೆ ಸಮಸ್ಯೆಗೆ ಆದ್ಯತೆ ನೀಡಲಿ
Team Udayavani, May 26, 2018, 5:00 PM IST
ವಿಜಯಪುರ: ಸರ್ಕಾರೇತರ ಸಾಮಾಜಿಕ ಸೇವಾ ಸಂಸ್ಥೆಗಳು ವಿಜಯಪುರ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚಲ್ಲಿ, ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಆಂಜನೇಯರೆಡ್ಡಿ ಸಲಹೆ ನೀಡಿದರು.
ನಗರದ ನವರತ್ನ ಹೊಟೇಲ್ನಲ್ಲಿ ನಡೆದ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 37 ಸ್ವಯಂ ಸೇವಾ ಸಂಸ್ಥೆಗಳು ಪಾಲ್ಗೊಂಡು ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ
ಹೊರ ವಲಸೆ, ದೇವದಾಸಿ ಪದ್ಧತಿ, ಬರಗಾಲ, ಆರ್ಥಿಕ ಅಭಿವೃದ್ಧಿ, ಮಹಿಳೆ-ಮಕ್ಕಳ ಅಭಿವೃದ್ಧಿ, ಬಾಲ್ಯ ವಿವಾಹ
ಪದ್ಧತಿ, ಪರಿಸರ ಸಂರಕ್ಷಣೆಗಾಗಿ ಮರ ಬೆಳೆಸುವ ಮೂಲಕ ಸಮಾಜಿಕ ಹೊಣೆಗಾರಿಕೆ ನಿಭಾಯಿಸಬೇಕು ಎಂದು
ಸಲಹೆ ನೀಡಿದರು. ಜಿಲ್ಲೆಯ ಸಮಸ್ಯೆ, ಸಂಕಲ್ಪ ಹಾಗೂ ದೃಷ್ಟಿಕೋನ ಗಮನದಲ್ಲಿಟ್ಟುಕೊಂಡು ಸಂಸ್ಥೆಗಳು ಸೇವೆ
ನೀಡಲು ಮುಂದಾಗಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಕೊನೆಯಲ್ಲಿ ಸೇವಾರಂಗ
ಐದನೇ ರಂಗ ಎಂಬುದನ್ನು ಮರೆಯಬಾರದು. ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕ್ರಮ ಹಾಗೂ ಸೇವಾ
ಬದ್ಧತೆ ತೋರಬೇಕು ಎಂದು ಕಿವಿಮಾತು ಹೇಳಿದರು. ಇದೇ ವೇಳೆ ವಿಜಯಪುರ ಜಿಲ್ಲೆಯ ಸ್ಥಿತಿಗತಿ, ಸ್ವಯಂ
ಸೇವಾ ಸಂಸೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಇದೇ ವೇಳೆ ಸ್ವಯಂ ಸೇವಾ ಸಂಸ್ಥೆ ಒಕ್ಕೂಟ ಕರ್ನಾಟಕ ಫೆವಾರ್ಡ್-ಕೆ ಅಡಿಯಲ್ಲಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ
ಒಕ್ಕೂಟ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷೆಯಾಗಿ ಡಾ| ಮಲ್ಲಮ್ಮ ಯಾಳವಾರ, ಕಾರ್ಯಾಧ್ಯಕ್ಷರಾಗಿ
ವಾಸುದೇವ ತೋಳಬಂದಿ, ಸದಸ್ಯರಾಗಿ ಶಿವಕುಮಾರ ತೇಲಿ, ಸಬಿಯಾ ಮರ್ತೂರ, ಅನುಸೂಯಾ ಪರಗೊಂಡ,
ಬಸವರಾಜ ನವಲೆ, ಸರೋಜಾ ಬಿರಾದಾರ, ಬಾಬು ಸಜ್ಜನ, ಲತಾ ಪಾಟೀಲ, ಮಹಾದೇವ ದೇವರ, ಸಿದ್ದು
ಪೂಜಾರಿ, ಮಹಾದೇವಿ ಹುಲ್ಲೂರ ಅವರನ್ನು ಆಯ್ಕೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ