ಬಸವನಾಡಿನಲ್ಲಿ ಶತ ವಚನ ಸಂಗೀತ ಕ್ರಾಂತಿ

ಅಕ್ಟೋಬರ್‌-ಡಿಸೆಂಬರ್‌ ತಿಂಗಳಲ್ಲಿ ಸಿಡಿಗಳು ಲೋಕಾರ್ಪಣೆಗೊಳ್ಳಲಿವೆ

Team Udayavani, Sep 9, 2021, 6:35 PM IST

ಬಸವನಾಡಿನಲ್ಲಿ ಶತ ವಚನ ಸಂಗೀತ ಕ್ರಾಂತಿ

ವಿಜಯಪುರ: ಏಕಕಾಲಕ್ಕೆ ನೂರು ವಚನಗಳಿಗೆ ಧ್ವನಿಮುದ್ರಣ ನಡೆಯಲಿದ್ದು, ವಚನ ಸಂಗೀತ ಕ್ಷೇತ್ರದಲ್ಲಿ ದಾಖಲೆ ಬರೆಯಲು ವೇದಿಕೆಯೊಂದು ಸೃಷ್ಟಿಯಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ “ಸಂಗೀತ ಕ್ರಾಂತಿ’ಗೆ ಬಸವಜನ್ಮಭೂಮಿ ವಿಜಯಪುರ ಸಾಕ್ಷಿಯಾಗಲಿದೆ.

ಧಾರವಾಡದ ಹಿರಿಯ ಸಂಗೀತ ಕಲಾವಿದೆ ಡಾ|ನಂದಾ ಪಾಟೀಲ ಅವರು ತಮ್ಮ ಶಿಷ್ಯ ಡಾ|ಹರೀಶ ಹೆಗಡೆ ಸಹಕಾರದಲ್ಲಿ ತಲಾ 10 ವಚನಗಳ 10 ಧ್ವನಿಸುರುಳಿಯಂತೆ 100 ವಚನಗಳಿಗೆ ರಾಗ ಸಂಯೋಜಿಸಿ, ಏಕಕಾಲಕ್ಕೆ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದಾರೆ. ಕೋವಿಡ್‌ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯಲ್ಲೇ ಕುಳಿತಿದ್ದ ಡಾ|ನಂದಾ ಅವರು ತಮ್ಮ ಪತಿ ಡಾ|ಮಲ್ಲಿಕಾರ್ಜುನ ಅವರೊಡನೆ ಚರ್ಚಿಸಿ, ಶಿಷ್ಯ ಡಾ|ಹರೀಶ ಪಾಟೀಲ ಹಾಗೂ ವಿಜಯಪುರದ ಸಂಗೀತ ಕಲಾವಿದರೊಂದಿಗೆ ಗೂಗಲ್‌ ಮೀಟ್‌ನಲ್ಲಿ ಸಂವಾದ ನಡೆಸಿ ಈ ಯೋಜನೆಗೆ ಅಂತಿಮ ರೂಪ ಕೊಟ್ಟಿದ್ದಾರೆ.

ಐತಿಹಾಸಿಕ ದಾಖಲೆ: ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ಧರಾಮ ಶರಣರ ತಲಾ 10 ವಚನಗಳು, ಶಿವಶರಣೆಯರ 10, ಜನಪದಗಳಲ್ಲಿ ಬಸವಾದಿ ಶರಣರ 10, ಹರಿಹರ, ಚಾಮರಸ, ಕುವೆಂಪು, ಜಿ.ಎಸ್‌.ಶಿವರುದ್ರಪ್ಪ , ಚನ್ನವೀರ ಕಣವಿ ‌ ಕವಿಗಳಂಥ ಮೇರು ಪ್ರತಿಭೆಗಳು ಕಂಡಂತೆ ಶರಣರ ಕುರಿತ 10 ವಚನಗಳು, ಬಸವೋತ್ತರ ಯುಗದ 10 ವಚನಗಳು ಹೀಗೆ ವರ್ಗೀಕರಣ ಮಾಡಿಕೊಂಡು ವಚನಗಳು ಇದೇ ಮೊದಲ ಬಾರಿಗೆ ರಾಗದ ತೆಕ್ಕೆಗೆ ಸಿಗುತ್ತಿರುವುದೂ ಐತಿಹಾಸಿಕ ದಾಖಲೆಯೇ ಸರಿ. ಈ ನೂರು ವಚನಗಳಿಗೆ ಯುವ ಪ್ರತಿಭೆಗಳಾದ ಯಲ್ಲಾಪುರದ ಕವಿತಾ ಹೆಗಡೆ, ಡಾ|ಹರೀಶ ಹೆಗಡೆ, ಗಂಗಾವತಿಯ ವಿದ್ಯಾಶ್ರೀ ಸಾಲಿಮಠ, ಬೆಂಗಳೂರಿನ ದೀಪ್ತಿ ಭಟ್‌, ವಿಜಯಪುರದ ಗೀತಾ ಕುಲಕರ್ಣಿ, ಸಾಕ್ಷಿ ಹಿರೇಮಠ, ದರ್ಶನ ಮೆಳವಂಕಿ, ಗಣೇಶ ವಾರದ ಅವರು ಈ ಶತ ವಚನಗಳಿಗೆ ಧ್ವನಿಯಾಗಿದ್ದಾರೆ.

ನಾಲತವಾಡದ ಯುವಪ್ರತಿಭೆ ವೀರೇಶ ವಾಲಿ ಸಾರಥ್ಯದ ಸ್ಪಾಟ್‌ಲೆçಟ್‌ ಸಂಗೀತ ಸಂಸ್ಥೆಯಲ್ಲಿ ನೂರು ವಚನಗಳಿಗೆ ಧ್ವನಿಮುದ್ರಣ ನಡೆದಿದ್ದು, ಬಸವನಬಾಗೇವಾಡಿ ದಿವ್ಯಾಂಗ ಕಲಾವಿದ ಶ್ರೀಮಂತ ಅವಟಿ ಹಿನೆ °ಲೆ-ವಾದ್ಯ ಸಂಯೋಜನೆ ಮಾಡಿದ್ದಾರೆ.

ಬಿಡುಗಡೆ ಯಾವಾಗ?: ಡಾ|ಮಲ್ಲಿಕಾರ್ಜುನ ಪಾಟೀಲ ಅವರು ಡಾ|ನಂದಾ ಪಾಟೀಲ ಸಂಗೀತ ಅಕಾಡೆಮಿ ಮೂಲಕ ಸ್ವಯಂ ಸುಮಾರು 3 ಲಕ್ಷ ರೂ. ಹಣ ತೊಡಗಿಸಿ ಈ ಐತಿಹಾಸಿಕ ದಾಖಲೆ ಯೋಜನೆ ಅನುಷ್ಠಾನಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಯುವ ಪ್ರತಿಭೆಗಳ ಈ10ಧ್ವನಿ ಸುರುಳಿಗಳಲ್ಲದೇ ‌ಡಾ|ನಂದಾ ಪಾಟೀಲ ಅವರ ವಚನ, ಹಿಂದೂಸ್ತಾನಿ ಸೇರಿದಂತೆ ಇನ್ನೂ ಮೂರು ಧ್ವನಿ ಸುರುಗಳಿಗಳೂ ಇದೇ ವೇಳೆ ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ.

ಜನವರಿ ತಿಂಗಳಲ್ಲಿ ಕುಡಿಯೊಡೆದ ಧ್ವನಿಮುದ್ರಣ ಯೋಜನೆ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಲೋಪ ತಿದ್ದುವ ಕಾರ್ಯ ನಡೆದಿದೆ. ಅಂದುಕೊಂಡಂತಾದರೆ ಅಕ್ಟೋಬರ್‌-ಡಿಸೆಂಬರ್‌ ತಿಂಗಳಲ್ಲಿ ಸಿಡಿಗಳು ಲೋಕಾರ್ಪಣೆಗೊಳ್ಳಲಿವೆ.

ಸಂಗೀತ ದಿಗ್ಗಜರ 5 ಕೃತಿಗಳ ಲೋಕಾರ್ಪಣೆ
ಇದೇ ಸಂದರ್ಭದಲ್ಲಿ ಸಂಗೀತಕ್ಷೇತ್ರದಲ್ಲಿಕನ್ನಡ ನಾಡಿನಹೆಸರನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಭಾರತರತ್ನ ಪಂ|ಭೀಮಸೇನ್‌ ಜೋಶಿ, ಪಂ|ಮಲ್ಲಿಕಾರ್ಜುನ ಮನ್ಸೂರ, ಡಾ|ಗಂಗೂಬಾಯಿ ಹಾನಗಲ್‌, ಬಾಳಪ್ಪಹುಕ್ಕೇರಿ, ಪಂ|ಬಸವರಾಜ ರಾಜಗುರು ಅವರ ಕುರಿತಾದ 5 ಕೃತಿಗಳು ಲೋಕಾರ್ಪಣೆ ಗೊಳ್ಳಲಿವೆ.

ನೂರು ವಚನಗಳಿಗೆ ರಾಗ ಸಂಯೋಜಿಸಿ, ಧ್ವನಿಮುದ್ರಿಸಿ, ಏಕಕಾಲಕ್ಕೆಹೊರತರುವಯೋಜನೆ ನಮ್ಮ ಸ್ಟುಡಿಯೋದಲ್ಲೇ ನಡೆಯುತ್ತಿರುವುದು ನಮ್ಮ ಸೌಭಾಗ್ಯ. ನಮ್ಮ ಮೇಲೆ ವಿಶ್ವಾಸ ಇರಿಸಿ ಡಾ|ಪಾಟೀಲ ದಂಪತಿ ಅವಕಾಶ ನೀಡಿರುವುದು ನಮ್ಮ ಪುಣ್ಯ.
ವೀರೇಶ ವಾಲಿ, ಸ್ಪಾಟ್‌ಲೈಟ್‌ ಸ್ಟುಡಿಯೋ, ವಿಜಯಪುರ

ನಮ್ಮಗುರುಗಳ ಮಾರ್ಗದರ್ಶನದಲ್ಲಿ ಎಲ್ಲೂ ಹಾಡದ ನೂರು ವಚನಗಳಿಗೆ ರಾಗ ಸಂಯೋಜಿಸುವ ಮಹತ್ವದ ಕಾರ್ಯದಲ್ಲಿ ನನಗೆಅವಕಾಶ ಸಿಕ್ಕಿದ್ದು, ನನ್ನ ಮೇಲೆ ಅವರಿಗಿರುವ ವಿಶ್ವಾಸಕ್ಕೆ ಸಾಕ್ಷಿ. ಡಾ|ನಂದಾ,ಡಾ|ಮಲ್ಲಿಕಾರ್ಜುನದಂಪತಿ ಪರಿಶ್ರಮಕ್ಕೆಬೆಲೆ ಕಟ್ಟಲಾಗದು.
ಡಾ| ಹರೀಶ ಹೆಗಡೆ,
ಯಲ್ಲಾಪುರ, ಶತ ವಚನಗಳ ರಾಗ ಸಂಯೋಜಕರು

ನನ್ನ ಧ್ವನಿ ಹಾಡಿಗೆ ಸಹಕರಿಸದ ಕಾರಣಯುವ ಪ್ರತಿಭೆಗಳ ಧ್ವನಿಗಳ ಮೂಲಕ ಶರಣರ ವಚನಗಳನ್ನು ಮನೆ-ಮನಗಳಿಗೆ ತಲುಪಿಸುವಯೋಚನೆ ಮಾಡಿದ್ದೆ. ನನ್ನ ಪತಿ ನೀಡಿದ ಪ್ರೋತ್ಸಾಹ, ಕಲಾವಿದರು ನೀಡಿದ ಬೆಂಬಲ, ಸಹಕಾರದಿಂದ ಇದು ಸಾಧ್ಯವಾಗಿದೆ.
ಡಾ|ನಂದಾ ಪಾಟೀಲ, ಶತ ವಚನಗಳ ಸಂಗೀತ ಸಂಯೋಜಕಿ, ಧಾರವಾಡ

ಹೊಸದಾಗಿ ಬೆಳಕುಕಾಣದ ವಚನಗಳಿಗೆ ರಾಗ ಸಂಯೋಜಿಸಿ ಹೊರತರುವ ಪ್ರಯತ್ನಗಳೇ ನಡೆಯುತ್ತಿಲ್ಲ. ಹೀಗಾಗಿ ಸಂಗೀತದಯುವ ಪ್ರತಿಭೆಗಳಲ್ಲಿ ಸೃಜನಶೀಲತೆ ಮೂಡಿಸಲು ಈ ಯೋಜನೆಗೆ ಮುಂದಾಗಿದ್ದೇನೆ. ಜನರಿಗೆ ಮೆಚ್ಚುಗೆಯಾದರೆ ಸಾಕು.
ಡಾ| ಮಲ್ಲಿಕಾರ್ಜುನ ಪಾಟೀಲ, ಶತ ವಚನಗಳಯೋಜನೆ ನಿರ್ಮಾಪಕ

*ಜಿ.ಎಸ್‌.ಕಮತರ

ಟಾಪ್ ನ್ಯೂಸ್

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.