ವೈದ್ಯಕೀಯ ವರದಿ ಬರುವ ಮುನ್ನವೇ ಶಂಕಿತರು ಮನೆಗೆ
Team Udayavani, Jun 1, 2020, 6:14 AM IST
ಆಲಮೇಲ: ಸರ್ಕಾರ ಬೇರೆ ರಾಜ್ಯದಿಂದ ಬಂದವರನ್ನು 14 ದಿಗಳ ಕ್ವಾರಂಟೈನ್ ಬದಲಿಗೆ 7 ದಿನಗಳ ಸಡಲಿಕೆ ಮಾಡಿದೆ. 7 ದಿನ ಪೂರೈಸಿದವರನ್ನು ವರದಿ ಬರುವ ಮೊದಲೆ ಮನೆಗೆ ಕಳುಹಿಸಿದ್ದು ಮನೆಗೆ ಹೋದ ಒಂದೆರಡು ದಿನಕ್ಕೆ ಪಾಸಿಟಿವ್ ವರದಿ ಬಂದ ಪರಿಣಾಮ ಅಕ್ಕ ಪಕ್ಕದ ಜನರಲ್ಲಿ ಭಯ ಶುರವಾಗಿದೆ.
ಮಹಾರಾಷ್ಟ್ರದಿಂದ ಬಂದ ವಲಸಿಗರನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಅವರ ವರದಿ ಬರುವ ಮುನ್ನ ಸರ್ಕಾರದ ಆದೇಶದಂತೆ 7 ದಿನ ಕ್ವಾರಂಟೈನ್ ಮುಗಿದವರನ್ನು ಮನೆಗೆ ಕಳುಹಿಸಿದ ಪರಿಣಾಮ ಅಧಿಕಾರಿಗಳು ತಪ್ಪಿತಸ್ಥರಾಗುತ್ತಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದಿದೆ, ತನಗೆ ಯಾವುದೆ ಸಮಸ್ಯೆ ಇಲ್ಲ ಎಂದುಕೊಂಡು ಸೊಂಕಿತ ವ್ಯಕ್ತಿಗಳೂ ಎಲ್ಲಂದರಲ್ಲಿ ತಿರುಗಾಡಿದ್ದಾರೆ. ವರದಿ ಬಂದ ಬಳಿಕ ಸೋಂಕಿತರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಕರೆದೊಯ್ದರೆ, ಇತ್ತ ಆತನ ಜೊತೆ ಸಂಪರ್ಕದಲ್ಲಿದ್ದವರು ಆತಂಕಗೊಂಡ ಘಟನೆ ಆಲಮೇಲ, ಮದನಹಳ್ಳಿ, ಕೋರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶನಿವಾರ ಆರೋಗ್ಯ ಇಲಾಖೆ ವರದಿ ಬಂದ ಬಳಿಕ ಆಲಮೇಲದಲ್ಲಿ 1, ಮದನಹಳ್ಳಿಯಲ್ಲಿ 4, ಕೋರಹಳ್ಳಿ ಗ್ರಾಮದಲ್ಲಿ 3 ಜನ ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರ ಪ್ರಾಥಮಿಕ ಸಂಪರ್ಕ ಹೊಂದಿದ ಕುಟುಂಬಸ್ಥರನ್ನು ಸಿಂದಗಿ ಆಸ್ಪತ್ರೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ನಿಗಾ ಇಡಲಾಗಿದೆ. ಮದನಹಳ್ಳಿ ಗ್ರಾಮಲ್ಲಿ ತಲಾ ಇಬ್ಬರು ಮಹಿಳೆಯರು ಮತ್ತು ಪುರುಷರು ಒಂದೆ ಕುಟುಂಬದವರಾಗಿದ್ದಾರೆ. ಕೋರಹಳ್ಳಿ ಗ್ರಾಮದ ಮೂರು ಜನರಲ್ಲಿ ಓರ್ವ ಪುರುಷ, ಇಬ್ಬರು ಮಹಿಳೆಯರು ಒಂದೆ ಕುಟುಂಬದವರು ಎಂದು ತಿಳಿದು ಬಂದಿದೆ.
ಮದನಹಳ್ಳಿಯ ಸೊಂಕಿತ ವ್ಯಕ್ತಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ, ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ. ಕಡಣಿ ಗ್ರಾಪಂಗೆ, ಆಲಮೇಲ ಬ್ಯಾಂಕ್ಗೆ ಹೋಗಿ ಬಂದಿರುವ ಮಾಹಿತಿ ಇದೆ. ಸೋಂಕಿತ ವ್ಯಕ್ತಿ ಸಂಪರ್ಕದಲ್ಲಿದ್ದ ಕೆಲವು ಯುವಕರು ಆತಂಕದಿಂದ ಮನೆ ಬಿಟ್ಟು ಹೊಲಗಳಿಗೆ ಹೋಗಿ ನೆಲೆಸಿದ್ದಾರೆ ಎಂದು ಮದನಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು