ಪ್ರವಾಸಿಗರ ಸೆಳೆಯುತ್ತಿದೆ ಸಸ್ಯಕಾಶಿ


Team Udayavani, Dec 8, 2018, 12:46 PM IST

vij-3.jpg

ಆಲಮಟ್ಟಿ: ಪಟ್ಟಣವು ವಿವಿಧ ಉದ್ಯಾನಗಳು, ಬೃಹತ್‌ ಜಲಾಶಯ ಹೊಂದಿ ರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವತ್ತ ದಾಪುಗಾಲಿಟ್ಟಿದೆ. ಆಲಮಟ್ಟಿ ಎಂದೊಡನೆ ಕೇವಲ ಜಲಾಶಯ ಎಂದುಕೊಂಡವರು ಒಮ್ಮೆ ಆಲಮಟ್ಟಿಗೆ ಭೇಟಿ ನೀಡಿದರೆ ಸಾಕು ಮತ್ತೂಮ್ಮೆ ತಮ್ಮ ಕುಟುಂಬ ಸಮೇತರಾಗಿ ಹಾಗೂ ಗೆಳೆಯರೊಂದಿಗೆ ಭೇಟಿ ನೀಡುವಂತೆ ಆಗುತ್ತದೆ. ಹಸಿರಿನಿಂದ ಕಂಗೊಳಿಸುತ್ತಿರುವ ಉದ್ಯಾನಗಳು, ವಿವಿಧ ಮಾದರಿ ಕಟ್ಟಡಗಳು, ಸಂಗೀತ ನೃತ್ಯ ಕಾರಂಜಿ, ಕೃತಕ ಜಲಪಾತಗಳು, ಜಲಾಶಯದಿಂದ ಭೋರ್ಗರೆಯುತ್ತ ಬೀಳುವ ಹಾಲಿನ ನೊರೆಯಂತೆ ಕಾಣುವ ಜಲಧಾರೆ, ಅಧ್ಯಾತ್ಮಿಕ ಸಾರುವ ಮೂರ್ತಿಗಳು, ಯುವ ಪೀಳಿಗೆಯನ್ನು ತನ್ನಡೆಗೆ ಸೆಳೆಯುವ ಕಲಾಕೃತಿಗಳು ಹೀಗೆ ಒಂದರ ನಂತರ ಒಂದು ಗಮನ ಸೆಳೆಯುವ ಅಂಶಗಳು ಎಲ್ಲ ವಯೋಮಾನದವರನ್ನೂ ತನ್ನೆಡೆ ಸಾವಿರಾರು ಸಂಖ್ಯೆಯಲ್ಲಿ ಸೆಳೆಯುತ್ತಿದೆ.

ಲವ-ಕುಶ ಉದ್ಯಾನ: ರಾಮಾಯಣದಲ್ಲಿ ಬರುವ ಲವ-ಕುಶರ ಜನನ, ಸಕಲ ವಿದ್ಯೆ, ಲವ ಕುಶ ಸಹೋದರರು ರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿ ಹನುಮಂತ, ವಾನರ ಸೇನೆ, ಶತೃಘ್ನರೊಂದಿಗೆ ಯುದ್ಧವಲ್ಲದೇ ತಮ್ಮ ತಂದೆ ರಾಮನೊಂದಿಗೂ ಘೋರ ಯುದ್ದ ನಡೆದಿರುವ ಸನ್ನಿವೇಶದ ಕಲಾಕೃತಿಗಳು ಹಾಗೂ ವಾಲುವ ಹಸಿರು ಗೋಡೆ ಗಮನ ಸೆಳೆಯುತ್ತಿದೆ. 

ಗೋಪಾಲಕೃಷ್ಣ ಉದ್ಯಾನ: ಶ್ರೀಕೃಷ್ಣನ ಜನನ ಹಾಗೂ ಆತನ ಬಾಲಲೀಲೆ, ಮಥುರೆ ಪಟ್ಟಣ, ಗೋವುಗಳ ಪಾಲನೆ ಮತ್ತು ಜಲ ಕನ್ಯೆಯರೊಂದಿಗೆ ಚೆಲ್ಲಾಟ ಹೀಗೆ ಗೋಪಾಲಕೃಷ್ಣನ ಲೀಲೆಗಳನ್ನು ಬಿಂಬಿಸುವ ಕಲಾಕೃತಿಗಳು ಜನಮನ ಸೂರೆಗೊಳ್ಳುತ್ತಿವೆ. 

ರಾಕ್‌ ಉದ್ಯಾನ: ಈ ಉದ್ಯಾನದಲ್ಲಿ ಹೆಸರೇ ಸೂಚಿಸುವಂತೆ ವಿವಿಧ ವನ್ಯ ಮೃಗಗಳು, ಜಲಚರಗಳು, ಸರಿಸೃಪಗಳು, ಉಭಯ ವಾಸಿಗಳು, ಗ್ರಾಮೀಣ ಜಾತ್ರೆ ಸೊಗಡು, ಬುಡಕಟ್ಟು ಜನಾಂಗದವರ ಜೀವನ ಶೈಲಿ, ಹೀಗೆ ಹಲವಾರು ವಿಶೇಷಗಳೊಂದಿಗೆ ಮಧ್ಯ ಭಾಗದಲ್ಲಿ ಸೂರ್ಯ ಪಾರ್ಕ್‌ ನಿರ್ಮಿಸಿ ಇದರಲ್ಲಿ ರಾಷ್ಟ್ರೀಯ ನಕ್ಷೆ, ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹೂವು, ಹಣ್ಣುಗಳ ಕೃತಿ ರಚಿಸಲಾಗಿದೆ. ದೇಶದಲ್ಲಿ ಸರ್ವ ಜನಾಂಗ ಹಾಗೂ ಸರ್ವ ವಯೋಮಾನದವರು, ಲಿಂಗಭೇದವಿಲ್ಲದೇ ಒಂದಾಗಿರುವುದರಿಂದ ಸುಂದರ ಭಾರತ ನಿರ್ಮಾಣವಾಗಿದೆ ಎನ್ನುವುದರ ಸಂಕೇತವಾಗಿ ನಕ್ಷೆ ಸುತ್ತಲೂ ನಿಂತಿರುವ ಮಾನವ ಕೃತಿಗಳು ಭಾವೈಕ್ಯ ಸಂಕೇತವಾಗಿವೆ. ರಾಷ್ಟ್ರೀಯ ನಕ್ಷೆಯಲ್ಲಿ ತ್ರಿವರ್ಣ ಧ್ವಜ ನಿತ್ಯ ಪ್ರವಾಸಿಗರನ್ನು
ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪುಟಾಣಿ ರೈಲು: ರಾಕ್‌ ಉದ್ಯಾನದಲ್ಲಿ 46.82 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ಚಾಲಿತ ಪುಟಾಣಿ ರೈಲಿಗೆ ಸುಮಾರು 1.5 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಿಸಲಾಗಿದೆ. ರೈಲು ಎಂಜಿನ್‌ನೊಂದಿಗೆ ನಾಲ್ಕು ಬೋಗಿ ಒಳಗೊಂಡಿದೆ. ಒಂದು ಬೋಗಿಯಲ್ಲಿ ನಾಲ್ಕು ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಪ್ರವಾಸಿಗರನ್ನು ಉದ್ಯಾನದಲ್ಲಿ ಕುಟುಂಬ ಪರಿವಾರದೊಡನೆ ಸುತ್ತಾಡಿಸಿಕೊಂಡು ಬರಲು ಪುಟಾಣಿ ರೈಲು ಸಜ್ಜಾಗಿ ನಿಂತಿದೆ.

ರಾಕ್‌ ಉದ್ಯಾನದಲ್ಲಿ ಪ್ರವೇಶಿಸಿದೊಡನೆ ಎದುರಿನಲ್ಲಿ ಕೃತಕ ಕೆರೆ ನಿರ್ಮಿಸಲಾಗಿದ್ದು ಇದರಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ದೋಣಿ ವಿಹಾರ ಕೇಂದ್ರದ ಬಳಿ ನಿರ್ಮಿಸಲಾಗಿರುವ ಚಿಲ್ಡ್ರನ್‌ ಪಾರ್ಕ್‌ನಲ್ಲಿರುವ ಮಕ್ಕಳ ಆಟಿಕೆ ವಸ್ತುಗಳು ಗಮನ ಸೆಳೆಯುತ್ತಿದೆ. ಇದರಿಂದ ಆಟಕ್ಕೆ ಹೋದ ಮಕ್ಕಳು ಪಾಲಕರು ಗದರುವವರೆಗೂ ಪಾರ್ಕಿನಿಂದ ಹೊರ ಬರುವುದೇ ಇಲ್ಲ. ಅಷ್ಟೊಂದು ನವೀನ ಸಲಕರಣೆಗಳನ್ನು ಕೃಷ್ಣಾ ಭಾಗ್ಯ ಜಲ ನಿಗಮ ಅಳವಡಿಸಿದೆ.

ಆಲಮಟ್ಟಿಯಲ್ಲಿರುವ ಎಲ್ಲ ಉದ್ಯಾನಗಳಲ್ಲಿರುವ ಬಹುತೇಕ ಸಸ್ಯಗಳು ಔಷಧಿಯ ಗುಣಗಳನ್ನು ಹೊಂದಿದ್ದು ಆಯುರ್ವೇದ ಪಂಡಿತರನ್ನು ತನ್ನಡೆಗೆ ಸೆಳೆಯುತ್ತಿದೆ. ಮೊಘಲ್‌ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಶಿವಲಿಂಗ ಪೂಜಾನಿರತ ಆನೆ, ಹಸಿರು ಕರಡಿ, ಮೊಲ, ಆನೆ, ಹೀಗೆ ಹಲವಾರು ಪ್ರಾಣಿಗಳು ಸಸ್ಯದಲ್ಲಿಯೇ ಗಮನ ಸೆಳೆಯುತ್ತಿವೆ.

 ಸಂಗೀತ ನೃತ್ಯ ಕಾರಂಜಿ: ಸಂಜೆ ವೇಳೆಯಲ್ಲಿ ಆರಂಭವಾಗುವ ಸಂಗೀತ ನೃತ್ಯ ಕಾರಂಜಿ ಎಲ್ಲ ವಯೋಮಾನದವರನ್ನೂ ವಿವಿಧ ಸಂಗೀತ ಹಾಗೂ ಗೀತೆಗಳಿಂದ ಆಕರ್ಷಿಸುತ್ತಿದೆ. ಪ್ರವಾಸಿಗರಿಗೆ ಅಗತ್ಯವಾಗಿರುವ ಎಲ್ಲ ಮೂಲಭೂತ ಸೌಲಭ್ಯಗಳೂ ಆಲಮಟ್ಟಿಯಲ್ಲಿದ್ದು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. 

„ಶಂಕರ ಜಲ್ಲಿ

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.