ಆರೋಗ್ಯ-ಕ್ಷೇಮ ಕೇಂದ್ರಕ್ಕೆ ಸೌಲಭ್ಯ ಒದಗಿಸಲು ಆಗ್ರಹ
Team Udayavani, Apr 28, 2020, 6:27 PM IST
ದೇವರಹಿಪ್ಪರಗಿ: ಸಮೀಪದ ಸಾತಿಹಾಳ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಗ್ರಾಮ ಪಂಚಾಯಿತಿ ನೀರು, ಶೌಚಾಲಯ, ಸುಸಜ್ಜಿತ ಬಾಗಿಲು. ಕಿಟಕಿ ಸೇರಿ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಣ್ಣಪುಟ್ಟ ಕಾಯಿಲೆಯಿಂದ ಬಳಲುವವರಿಗೆ ಈ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆಧಾರವಾಗಿದೆ. ಆದರೆ ಇಲ್ಲಿ ನೀರು, ಶೌಚಾಲಯ ಇತರೆ ಸೌಲಭ್ಯ ಇಲ್ಲ. ಹೀಗಾಗಿ ಇಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು (ಸಿಎಚ್ಒ) ರಾತ್ರಿ ತಂಗಲು ಭಯಪಡುತ್ತಾರೆ. ಈ ಕುರಿತು ಸಿಎಚ್ಒ, ಗ್ರಾಮಸ್ಥರು ಹಲವು ಬಾರಿ ಪಿಡಿಒ, ಗ್ರಾಪಂ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ನೀರು, ಸ್ನಾನದ ಕೋಣೆ, ಶೌಚಾಲಯ, ಸುಸಜ್ಜಿತ ಬಾಗಿಲು, ಕಿಟಕಿಗಳ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರಾದ ಬಸವರಾಜ ಡೋಣೂರಮಠ, ಸಾಹೇಬಗೌಡ ಪಾಟೀಲ, ಶಿವಾನಂದ ಹಿರೇಮಠ, ಪರಶುರಾಮ ಗೌಂಡಿ, ಸಿದ್ಧರಾಮಯ್ಯ ಹಿರೇಮಠ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್