ವರ್ಷದ ಬಳಿಕ ಶಾಲೆಗೆ ಆಗಮಿಸಿದ ಮಕ್ಕಳಿಗೆ ಸಾಂಪ್ರದಾಯಿಕ ಸ್ವಾಗತ
Team Udayavani, Aug 23, 2021, 12:52 PM IST
ವಿಜಯಪುರ: ಕೋವಿಡ್ ಹಿನ್ನೆಲೆಯಲ್ಲಿ ಮೊದಲ ಅಲೆಯಿಂದಲೇ ಒಂದೂವರೆ ವರ್ಷದಿಂದ ಬಹುತೇಕ ಬಾಗಿಲು ಹಾಕಿದ್ದ ಬಸವ ನಾಡಿನ ಶಾಲೆಗಳು ಶ್ರಾವಣದ ಮೂರನೇ ಸೋಮವಾರ ಬಾಗಿಲು ತೆರೆದಿವೆ. ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಶಾಲೆಗಳು ಮಕ್ಕಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಭೌತಿಕ ತರಗತಿ ಸ್ವಾಗತಿಸಿವೆ.
ಸರ್ಕಾರದ ಆದೇಶದಂತೆ ಶಾಲಾ ಮಕ್ಕಳು ಸೋಮವಾರ ಭೌತಿಕ ತರಗತಿಗೆ ಹಾಜರಾಗಲು ಆಗಮಿಸಿದರು. ಮಕ್ಕಳ ಸ್ವಾಗತಕ್ಕೆ ಶಾಲೆಗಳಿಗೆ ನಸುಕಿನಲ್ಲೇ ಆಗಮಿಸಿದ ಸಿಬ್ಬಂದಿ, ಶಿಕ್ಷಕರು ವರ್ಷದಿಂದ ಧೂಳು ಹಿಡಿದಿದ್ದ ಶಾಲೆಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರು.
ಅಲ್ಲದೇ ಶಾಲೆಯ ಆವರಣಕ್ಕೆಲ್ಲ ನೀರು ಸಿಂಪಡಣೆ ಮಾಡಿ, ರಂಗೋಲಿ ಬಿಡಿಸಿ, ಬಲೂನು, ತಳಿತು, ತೋರಣದಿಂದ ಶ್ರಿಂಗರಿಸಿದ್ದರು. ಶಾಲೆಗೆ ಆಗಮಿಸಿದ ಮಕ್ಕಳಿಗೆ ಸಾಂಪ್ರದಾಯಿಕ ಆರತಿ ಬೆಳಗಿ, ತಿಲಕ ಇರಿಸು, ಸಿಹಿ ತಿನ್ನಿಸಿ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಂಡರು.
ಮಕ್ಕಳು ಕೂಡ ತರಗತಿ, ಪರೀಕ್ಷೆ ಇಲ್ಲದೇ 8-12 ತರಗತಿಗೆ ಬಡ್ತಿ ಪಡೆದ ಮಕ್ಕಳು, ಬಡ್ತಿ ಹೊಂದಿದ ತರಗತಿ ಕೋಣೆಗೆ ಸಂಭ್ರಮದಿಂದ ಪ್ರವೇಶಿಸಿ, ಸಂತಸಗೊಂಡರು. ಹಲವು ಶಾಲೆಗಳಲ್ಲಿ ಶಿಕ್ಷಕರ ಕಾಲಿಗೆ ಎರಗಿ ಆಶೀರ್ವಾದ ಪಡೆದ ಮಕ್ಕಳು, ವರ್ಷದಿಂದ ಭೌಗೋಳಿಕವಾಗಿ ದೂರವಾಗಿದ್ದ ಸ್ನೇಹಿತರ ಕೈ ಕುಲುಕಿ, ಕುಶಲೋಪರಿ ವಿಚಾರಿಸಿದರು.
ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅ.23 ರಿಂದ ತರಗತಿಯ ಮಕ್ಕಳ ಸಂಖ್ಯೆಯ ಶೇ.50 ರಷ್ಟು ಮಕ್ಕಳನ್ನು ವಾರದ ಶಾಲಾ ದಿನಗಳಿಗೆ ಭೌತಿಕ ಅಂತರ ಕಾಯ್ದುಕೊಂಡು ಶಾಲೆ ಆರಂಭಕ್ಕೆ ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ