ಕೃಷ್ಣಾ ನದಿ ತೆಪ್ಪ ದುರಂತ: ಶವವಾಗಿ ಪತ್ತೆಯಾದ ಇಬ್ಬರು ಮೀನುಗಾರರು
Team Udayavani, Jun 13, 2020, 4:12 PM IST
ವಿಜಯಪುರ: ಜಿಲ್ಲೆಯ ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದನಾಥ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಗುರುವಾರ ನಾಪತ್ತೆಯಾಗಿದ್ದ ಇಬ್ಬರ ಸಾವು ಮೀನುಗಾರರು ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ. ಮೀನುಗಾರರ ನಾಪತ್ತೆ ಪ್ರಕರಣ ದುರಂತದಲ್ಲಿ ಅಂತ್ಯ ಕಂಡಿದೆ.
ಪರಶುರಾಮ ಲಮಾಣಿ (36), ರಮೇಶ ಲಮಾಣಿ (38) ಶವ ಪತ್ತೆಗಳು ಕೃಷ್ಣಾ ನದಿ ತೀರದಲ್ಲಿ ಪತ್ತೆಯಾಗಿವೆ.
ಗುರುವಾರ ಕೃಷ್ಣಾ ನದಿಯಲ್ಲಿ ತೆಪ್ಪದಲ್ಲಿ ಮೂವರು ಮೀನು ಹಿಡಿಯಲು ತೆರಳಿದ್ದರು. ಅಂದು ಸಂಜೆ ವೇಳೆ ಬೀಸಿದ ಬಿರುಗಾಳಿ ಹಾಗೂ ಸುರಿದ ಮಳೆಗೆ ಮೀನುಗಾರರಿದ್ದ ತೆಪ್ಪ ನದಿಯಲ್ಲಿ ಮುಗುಚಿ ಬಿದ್ದು ಮುಳುಗಿತ್ತು.
ಮೂವರು ಮೀನುಗಾರರಲ್ಲಿ ಅಕ್ಷಯ ಲಮಾಣಿ ಎಂಬಾತ ಈಜಿ ದಡ ಸೇರಿದ್ದ. ರಮೇಶ ಹಾಗೂ ಪರಶುರಾಮ ನಾಪತ್ತೆಯಾಗಿದ್ದರು.
ಶುಕ್ರವಾರ ಇಡೀ ದಿನ ಕೊಲ್ಹಾರ ತಹಸೀಲ್ದಾರ ನೇತೃತ್ವದಲ್ಲಿ ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿ, ನುರಿತ ಮೀನುಗಾರರು ನಾಲ್ಕಾರು ಬೋಟ್ ಬಳಸಿ ನಾಪತ್ತೆ ಆದವರ ಶೋಧ ಕಾರ್ಯ ನಡೆಸಿದರೂ ರಮೇಶ, ಪರಶುರಾಮ ಪತ್ತೆ ಆಗಿರಲಿಲ್ಲ. ಆದರೆ ಶನಿವಾರ ನದಿ ತೀರದಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ