ಸೈಕಲ್‌ ಬಳಸಿ-ಇಂಧನ ಉಳಿಸಿ ಅಭಿಯಾನ


Team Udayavani, Apr 21, 2022, 3:02 PM IST

19cycle

ವಿಜಯಪುರ: ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಕಂಪನಿಗಳು ಮಿಲಿಟರಿ ವ್ಯವಸ್ಥೆಗೆ ಪೆಟ್ರೋಲ್‌, ಡೀಸೆಲ್‌ ಸರಬರಾಜು ಮಾಡಲು ನಿರಾಕರಿಸಿದವು. ಪರಿಣಾಮ ಅಂದಿನ ಪ್ರಧಾನಿ ಪ್ರಧಾನಿ ಇಂದಿರಾ ಗಾಂಧಿ ಇಂಧನ ಪೂರೈಕೆಯ ಖಾಸಗಿ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿ ಸೇನೆಯ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಮತ್ತೆ ಖಾಸಗೀಕರಣದ ಮಾತು ಕೇಳಿ ಬರುತ್ತಿದೆ. ಇದು ಸತ್ಯವೇ ಆಗಿದ್ದಲ್ಲಿ ಸರ್ಕಾರ ಕೂಡಲೇ ಇಂಥ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ವಿಜಯಪುರ ಸೈಕ್ಲಿಂಗ್‌ ಗ್ರೂಪ್‌ ಅಧ್ಯಕ್ಷ ಡಾ| ಮಹಾಂತೇಶ ಬಿರಾದಾರ ಹೇಳಿದರು.

ನಗರದಲ್ಲಿ ಭಾರತ ಪೆಟ್ರೋಲಿಂ ಸಂಸ್ಥೆ ಅಥಣಿ ರಸ್ತೆಯ ಕುಮಾರೇಶ್ವರ ಪೆಟ್ರೋಲ್‌ ಪಂಪ್‌ನಿಂದ ಏರ್ಪಡಿಸಿದ್ದ ಸೈಕಲ್‌ ಬಳಸಿ, ಇಂಧನ ಉಳಿಸಿ ಹಾಗೂ ಹಸಿರು-ಸ್ವತ್ಛ ಶಕ್ತಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

70ರ ದಶಕದ ವೇಳೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಯಲ್‌-ಬ್ರಿಟಿಷ್‌ ಪೆಟ್ರೋಲಿಂ ಕಂಪನಿ, ಕಾಲ್ಟೆàಕ್ಸ್‌ನಂತಹ ಕಂಪನಿಗಳು ಚೀನಾ ಜೊತೆಗಿನ ಯುದ್ಧದ ಸಂದರ್ಭದಲ್ಲಿ ಮಿಲಟರಿ ವಾಹನಗಳಿಗೆ ಇಂಧನವನ್ನು ಪೂರೈಸಲು ನಿರಾಕರಿಸಿದವು. ಇದರಿಂದ ಕೆರಳಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಈ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿ ಸೇನೆಯ ವಶಕ್ಕೆ ನೀಡಿದ್ದರು. ನಂತರದಲ್ಲಿ ಬಿಪಿಸಿಎಲ್‌ ಹಾಗೂ ಹಿಂದೂಸ್ತಾನ ಪೆಟ್ರೋಲಿಂ ಕಂಪನಿಗಳಾಗಿ ಪರಿವರ್ತಿಸಿದರು ಎಂದು ಅರ್ಧ ಶತಮಾನದ ಹಿಂದಿನ ಘಟನೆಯನ್ನು ಮೆಲುಕು ಹಾಕಿದರು.

ಅಂತಾರಾಷ್ಟ್ರೀಯ ಕೋರ್ಟ್‌ಗಳಲ್ಲಿ ಈ ಕಂಪನಿಗಳು ದಾವೆ ಹೂಡಬಹುದು ಎಂಬ ಆಲೋಚನೆಯಿಂದ ಸರ್ಕಾರಿ ಸ್ವಾಮ್ಯದಲ್ಲೇ ಇಂಡಿಯನ್‌ ಆಯಿಲ್‌ ಕಂಪನಿ ಹುಟ್ಟು ಹಾಕಿದರು. ಖಾಸಗಿ ಕಂಪನಿಗಳು ತಮ್ಮ ಬಂಕ್‌ಗಳನ್ನು ಸ್ಥಾಪಿಸಿ ಪೈಪೋಟಿ ನೀಡುತ್ತಿರುವ ಸಂದರ್ಭದಲ್ಲಿ ಗ್ರಾಹಕರು ಸಾರ್ವಜನಿಕ ವಲಯದ ಈ ಕಂಪನಿಗಳನ್ನು ಉಳಿಸಿಬೇಕಿದೆ. ಕಳೆದ 20 ವರ್ಷಗಳಿಂದ ಸರ್ಕಾರ ಈ ಕಂಪನಿಗಳನ್ನು ಖಾಸಗಿಕರಣಗೊಳಿಸಲು ಪ್ರಯತ್ನ ಪಡುತ್ತಲೇ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಸಣ್ಣ ಪುಟ್ಟ ಕೆಲಸಗಳಿಗೆ ವಾಹನಗಳ ಬದಲಾಗಿ ನಡೆದು ಹೋಗುವುದು ಅಥವಾ ಸೈಕಲ್‌ ಬಳಸುವುದು ಉತ್ತಮ. ದೂರದ ಪ್ರಯಾಣಕ್ಕೆ ರೈಲು ಬಸ್‌ನಂತಹ ಸಾರ್ವಜನಿಕ ಸಾರಿಗೆಗಳನ್ನು ಬಳಸುವುದರಿಂದ ಕೂಡ ಇಂಧನ ಉಳಿಸಿ, ನಾವೆಲ್ಲರೂ ನಮ್ಮ ಆರ್ಥಿಕ ವೆತ್ಛವನ್ನು ಉಳಿಸುವುದಲ್ಲದೇ ಭಾರತ ವ್ಯವಸ್ಥೆಗೆ ಬಲ ನೀಡಬೇಕು ಎಂದು ಆಗ್ರಹಿಸಿದರು.

ಬಿಪಿಸಿಎಲ್‌ ಪ್ರಾದೇಶಕ ಅಧಿಕಾರಿ ಎಂ.ಮಹೇಶ ಸೈಕಲ್‌ ಜಾಥಾಗೆ ಹಸಿರು ನಿಶಾನೆ ನೀಡಿದರು. ಮಾರುಕಟ್ಟೆ ಅಧಿಕಾರಿ ಸಾದಿಕ ಸೈಯ್ಯದ್‌ ಸ್ವಾಗತಿಸಿದರು. ಬಿಪಿಸಿಎಲ್‌ ಡೀಲರ್‌ಗಳಾದ ಸಂಗಮೇಶ ಪಾಟೀಲ, ಡಾ| ವಿಜಯಕುಮಾರ ವಾರದ, ಅಮರೇಶ, ವಿಜಯಪುರ ಸೈಕ್ಲಿಂಗ್‌ ಗ್ರೂಪ್‌ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಯದರ್ಶಿ ಸೋಮಶೇಖರ ಸ್ವಾಮಿ, ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿ ಮಾಜಿ ಸದಸ್ಯ ಸುರೇಶ ಘೋಣಸಗಿ ವೇದಿಕೆಯಲ್ಲಿದ್ದರು. ಡಾ| ರಾಜು ಎಲೆಗೊಂಡ, ಸಮೀರ ಬಳಗಾರ, ಸಂತೋಷ ಅವರಸಂಗ, ಶಿವರಾಜ್‌ ಪಾಟೀಲ, ವಿಶಾಲ ಹಿರಾಸ್ಕರ್‌, ಸಂದೀಪ ಮಡಗೊಂಡ, ಸೋಮು ಮಠ, ಅಮೀತ್‌ ಬಿರಾದಾರ, ಮನೀಶ್‌ ದೇವಗಿರಿಕರ, ವಿನಾಯಕ ಕೋಟಿ, ಸಂದೀಪ ಜೋಶಿ ಸೇರಿದಂತೆ ಹಲವರು ಸೈಕ್ಲಿಂಗ್‌ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspended

Vijaypur: ಕರ್ತವ್ಯ ಲೋಪ ಡಿಡಿಪಿಐ ನಾಗೂರ ಮತ್ತೆ ಸಸ್ಪೆಂಡ್

1-qweqeweqw

Congress ಅಭ್ಯರ್ಥಿ ಮೆರವಣಿಗೆಯಲ್ಲಿ ಹಣ ಹಂಚಿದ ವಿಡಿಯೋ ವೈರಲ್

shivananda

Vijayapura; ಯತ್ನಾಳಗೆ ತಾಕತ್ತಿದ್ದರೆ ಈಗಲೇ ಸ್ಪರ್ಧೆಗೆ ಬರಲಿ: ಸಚಿವ ಶಿವಾನಂದ ಪಾಟೀಲ

MB Patil 2

Electoral bonds; ಮೋದಿ ಭ್ರಷ್ಟಾಚಾರದ ಮತ್ತೊಂದು ಮುಖ ಬಯಲು:ಎಂ.ಬಿ.ಪಾಟೀಲ್

Vijayapura; ನಾಮಪತ್ರ ಸಲ್ಲಿಕೆಗೆ ಮುನ್ನ ಬಿ.ಎಂ.ಪಾಟೀಲ ಸಮಾಧಿಗೆ ನಮಿಸಿದ ಆಲಗೂರ

Vijayapura; ನಾಮಪತ್ರ ಸಲ್ಲಿಕೆಗೆ ಮುನ್ನ ಬಿ.ಎಂ.ಪಾಟೀಲ ಸಮಾಧಿಗೆ ನಮಿಸಿದ ಆಲಗೂರ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.