ಹದಿನೆಂಟನ್ನು ಅದ್ಧೂರಿ ಸ್ವಾಗತಿಸಿದ ವಿಜಯಪುರ


Team Udayavani, Jan 1, 2018, 3:13 PM IST

vij-3.jpg

ವಿಜಯಪುರ: ನೋವು-ನಲಿವುಗಳನ್ನು ಸಮಾನವಾಗಿ ಮಡಿಲಲ್ಲಿ ಮಲಗಿಸಿಕೊಂಡು ಹದಿನೇಳನ್ನು ಬೀಳ್ಕೊಟ್ಟ ಗುಮ್ಮಟ ನಗರಿ ವಿಜಯಪುರದ ಜನತೆ ಹದಿನೆಂಟನ್ನು ಕೂಡ ಮತ್ತದೇ ಹೊಸ ನಿರೀಕ್ಷೆಯ ಭರವಸೆಯೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ಹೊಸ ವರ್ಷವನ್ನು ಬಲೂನ್‌ ಹಾರಿಸಿ ಬಿಟ್ಟು, ಕೇಕ್‌ ಕತ್ತರಿಸಿ, ಸಿಹಿ ಹಂಚಿ ಪರಸ್ಪರ ಶುಭಾಶಯ ಕೋರುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಹೊಸ ವರ್ಷದ ಆಚರಣೆಗೆ ಬರುವ ತನ್ನ ಗ್ರಾಹಕರನ್ನು ಸಂತೃಪ್ತಿ ಪಡಿಸಲು ನಗರದ ಹಲವು ಹೋಟೆಲ್‌ಗ‌ಳು ವಿಭಿನ್ನ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದವು. ಇದರಿಂದಾಗಿ ಬಹುತೇಕ ಹೋಟೆಲ್‌ಗ‌ಳು ಮಧ್ಯರಾತ್ರಿವರೆಗೂ ಭರ್ತಿಯಾಗಿದ್ದು ಗ್ರಾಹಕರಿಗೆ ಸೇವೆ ನೀಡಿದವು.

ಹೊಸ ವರ್ಷ ಎಂದರೆ ಮದ್ಯ ಸೇವಿಸಿ ಬರಮಾಡಿಕೊಳ್ಳುವುದು ಎಂಬ ಸಾಮಾನ್ಯ ಸ್ಥಿತಿ. ಆದರೆ ಇದಕ್ಕೆ ಬದಲಾಗಿ ನಗರದ ಹಲವು ಹೋಟೆಲ್‌ಗಳು ಮದ್ಯ ರಹಿತವಾದ ಹಾಗೂ ಪರಿಶುದ್ಧ ತರೆವಾರಿ ಸಸ್ಯಹಾರದೊಂದಿಗೆ ಊಟದ ವ್ಯವಸ್ಥೆ ಮಾಡಿಕೊಂಡಿದ್ದವು. ಹೊಸ ವರ್ಷದಲ್ಲಿ ಸಂತಸವನ್ನು ಮೈದುಂಬಿಕೊಂಡು ಬರುವಂತಾಗುವ ಆಶಯದೊಂದಿಗೆ ಕುಟುಂಬ ಸದಸ್ಯರೆಲ್ಲ ಒಟ್ಟಾಗಿ ಬಂದು ಸಂತಸದಿಂದ ಹೊಸ ವರ್ಷವನ್ನು ಆಚರಿಸಿದರು.

ಹೊಸ ವರ್ಷಕ್ಕಾಗಿ ಜಿಲ್ಲೆಯ ಬಹುತೇಕ ಬೇಕರಿ ಕೇಂದ್ರಗಳು ಮಧ್ಯ ರಾತ್ರಿವರೆಗೂ ತಾವು ತಯಾರಿಸಿದ್ದ ತರೆವಾರಿ ಕೇಕ್‌ ಮಾರುತ್ತಿದ್ದವು. ಪರಿಣಾಮ ಬೇಕರಿ ಕೇಂದ್ರಗಳು ರಾತ್ರಿಯಾದರೂ ಜನರಿಂದ ತುಂಬಿ ತುಳಕುತ್ತಿದ್ದವು. 
ವಿಭಿನ್ನ ಹಾಗೂ ವಿವಿಧ ಖಾದ್ಯಗಳ ಊಟ ಹಾಗೂ ಹೊಸ ವರ್ಷಕ್ಕಾಗಿ ಇತರೆ ವಿಶೇಷ ಸೇವೆ ನೀಡಲು ಹೋಟೆಲ್‌ಗ‌ಳು ಕೂಡ ನಿಗದಿಗಿಂತ ಹೆಚ್ಚಿನ ಹಾಗೂ ವಿಶೇಷ ಶುಲ್ಕವನ್ನೂ ವಿಧಿಸಿದ್ದವು.

ನಗರದ ಆಶ್ರಮ ರಸ್ತೆಯ ಸಾಯಿ ವಿಹಾರದಲ್ಲಿ ಎಫ್‌-ಎಫ್‌ ಗ್ರೂಫ್‌ನವರು ದೊಡ್ಡ ವೇದಿಕೆ ನಿರ್ಮಿಸಿ, ಸಿಹಿ ಹಾಗೂ ಖಾರದ ವಿವಿಧ ವೈವಿಧ್ಯಮಯ ಊಟದ ವ್ಯವಸ್ಥೆ ಮಾಡಿದ್ದರು. ಹಳೆಯ ವರ್ಷ ನಿರ್ಗಮಿಸಿ ಹೊಸ ವರ್ಷ ದರ್ಶನ ನೀಡುತ್ತಲೇ ವೇದಿಕೆ ಏರಿದ ಜನರು ಸಂಭ್ರಮಿಸಿ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ ಎಂದು ಪುರುಷ-ಮಹಿಳೆ, ಮಕ್ಕಳು, ಯುವಕರು-ಹಿರಿಯರು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.

ಆಧುನಿಕ ತಂತ್ರಜ್ಞಾನ ಮೊಬೈಲ್‌ ಮೂಲಕ ಸಚಿತ್ರ ಸಂದೇಶ ಕಳಿಸಿ, ಕರೆ ಮಾಡಿ ಹೊಸ ವರ್ಷದ ಶುಭಾಶಯ ವಿನಯಮ ಮಾಡಿಕೊಂಡು ನವ ವರ್ಷವಾದರೂ ತಮ್ಮ ಬಾಳಲ್ಲಿ ಸಂತಸದ ಬೆಳಕು ಹರಿಯಲಿ ಎಂದು ಜಿಲ್ಲೆಯ ಜನರು ಸಂತಸ ಹಾಗೂ ಸಂಭ್ರಮದಿಂದ ಬರಮಾಡಿಕೊಂಡರು.

ಟಾಪ್ ನ್ಯೂಸ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspended

Vijaypur: ಕರ್ತವ್ಯ ಲೋಪ ಡಿಡಿಪಿಐ ನಾಗೂರ ಮತ್ತೆ ಸಸ್ಪೆಂಡ್

1-qweqeweqw

Congress ಅಭ್ಯರ್ಥಿ ಮೆರವಣಿಗೆಯಲ್ಲಿ ಹಣ ಹಂಚಿದ ವಿಡಿಯೋ ವೈರಲ್

shivananda

Vijayapura; ಯತ್ನಾಳಗೆ ತಾಕತ್ತಿದ್ದರೆ ಈಗಲೇ ಸ್ಪರ್ಧೆಗೆ ಬರಲಿ: ಸಚಿವ ಶಿವಾನಂದ ಪಾಟೀಲ

MB Patil 2

Electoral bonds; ಮೋದಿ ಭ್ರಷ್ಟಾಚಾರದ ಮತ್ತೊಂದು ಮುಖ ಬಯಲು:ಎಂ.ಬಿ.ಪಾಟೀಲ್

Vijayapura; ನಾಮಪತ್ರ ಸಲ್ಲಿಕೆಗೆ ಮುನ್ನ ಬಿ.ಎಂ.ಪಾಟೀಲ ಸಮಾಧಿಗೆ ನಮಿಸಿದ ಆಲಗೂರ

Vijayapura; ನಾಮಪತ್ರ ಸಲ್ಲಿಕೆಗೆ ಮುನ್ನ ಬಿ.ಎಂ.ಪಾಟೀಲ ಸಮಾಧಿಗೆ ನಮಿಸಿದ ಆಲಗೂರ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.