ಶೀಲ ಶಂಕಿಸಿ ಪತ್ನಿಯನ್ನು ಹತ್ಯೆ ಮಾಡಿದ ಪತಿ: ತಾನೂ ಆತ್ಮಹತ್ಯೆ
Team Udayavani, Apr 29, 2020, 9:56 AM IST
ವಿಜಯಪುರ: ತನ್ನ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪತ್ನಿಯನ್ನು ಹತ್ಯೆ ಮಾಡಿ, ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಜರುಗಿದೆ.
ನಾಗರಹಳ್ಳಿ ಗ್ರಾಮದವರಾದ 30 ವರ್ಷ ಹಣಮಂತ ವಗ್ಗಪ್ಪ ಪೂಜಾರಿ ಹಾಗೂ 25 ವರ್ಷದ ಯಲ್ಲವ್ವ ಹಣಮಂತ ಪೂಜಾರಿ, ಕೂಲಿ ಕೆಲಸಕ್ಕಾಗಿ ಆಲಮೇಲ ಪಟ್ಟಣಕ್ಕೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಆಲಮೇಲ ಪಟ್ಟಣದ ಕಡಣಿ ರಸ್ತೆಗೆ ಹೊಂದಿಕೊಂಡ ಪ್ರದೇಶದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಬಂದು ನೆಲೆಸಿದ್ದ ದಂಪತಿ ಮಧ್ಯೆ ಪತ್ನಿಯ ಅನೈತಿಕ ಸಂಬದದ ಕುರಿತು ಆಗಾಗ ಜಗಳ ನಡೆಯುತ್ತಿತ್ತು.
ಮಂಗಳವಾರ ರಾತ್ರಿಯೂ ಅನೈತಿಕ ಸಂಬಂಧ ಕುರಿತು ದಂಪತಿ ಮಧ್ಯೆ ಆರಂಭಗೊಂಡ ಜಗಳ ತಾರಕಕ್ಕೇರಿ ದುರಂತದಲ್ಲಿ ಅಂತ್ಯ ಕಂಡಿದೆ.
ಮಾರಕಾಸ್ತ್ರದಿಂದ ಪತ್ನಿಯನ್ನು ಹತ್ಯೆಮಾಡಿದ ಬಳಿಕ ಪತಿ ನೇಣಿಗೆ ಶರಣಾಗಿದ್ದ. ಬುಧವಾರ ನಸುಕಿನಲ್ಲಿ ದಂಪತಿಯ 3 ವರ್ಷದ ಮಗು ಹೆತ್ತವರ ದುರಂತ ಕಂಡು ಕಿರುಚಾಟ ಆರಂಭಿಸಿದೆ. ಮಗುವಿನ ಆಕ್ರಂದನ ಕೇಳಿದ ಅಕ್ಕಪಕ್ಕದ ಮನೆಯವರು ಮನೆಯ ಬಾಗಿಲು ಮುರುದು ನೋಡಿದಾಗ ದಂಪತಿಯ ದುರಂತ ಅಂತ್ಯದ ಸಂಗತಿ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಜೆ ಧಾವಿಸಿರುವ ಆಲಮೇಲ ಪೊಲೀಸರು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
Muddebihal: ಆಕಸ್ಮಿಕ ಬೆಂಕಿ: 2 ಲಕ್ಷ ಮೌಲ್ಯದ ಗುಜರಿ ಸಾಮಗ್ರಿ ಬೆಂಕಿಗಾಹುತಿ
BJP; ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ, ಪ್ರತಿಭಟನೆ