ವಿಜಯಪುರದಲ್ಲಿ ಮುಂದುವರೆದ ಸರಣಿ ಭೂಕಂಪ : ಅಧ್ಯಯನಕ್ಕೆ ಬಂದ ತಜ್ಞರಿಗೂ ಕಂಪನದ ಅನುಭವ
Team Udayavani, Aug 26, 2022, 3:58 PM IST
ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಸರಣಿ ಭೂಕಂಪನ ಮುಂದುವರೆದಿದೆ. ಇದರ ಮಧ್ಯೆ ಭೂಕಂಪನ ಆಧ್ಯಯನಕ್ಕಾಗಿ ಬೆಂಗಳೂರಿನಿಂದ ಭೂಗರ್ಭ ತಜ್ಞರ ತಂಡ ಜಿಲ್ಲೆಯಲ್ಲಿ ಭೂಕಂಪಕ್ಕೆ ಕಾರಣ ಹುಡುಕುವಲ್ಲಿ ನಿರತವಾಗಿದೆ.
ಜಿಲ್ಲಾಡಳಿತದ ಕೋರಿಕೆ ಮೇರೆಗೆ ರಾಜ್ಯ ಸರ್ಕಾರ ಬೆಂಗಳೂರಿನ ಭೂಗರ್ಭ ವೈಜ್ಞಾನಿಕ ಆಧಿಕಾರಿ ಜಗದೀಶ್ ಹಾಗೂ ಸಹಾಯಕ ವೈಜ್ಞಾನಿಕ ಆಧಿಕಾರಿ ರಮೇಶ ತಿಪ್ಪಾಲ ಅವರನ್ನು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭೂಮಿ ಕಂಪಿಸುತ್ತಿದ್ದು, ವಾಸ್ತವಿಕ ಕಾರಣ, ಅದರ ಬಾದಕ ಸ್ಥಿತಿ ಅರಿಯಲು ಮುಂದಾಗಿದೆ.
ಅಚ್ಚರಿಯ ಸಂಗತಿ ಎಂದರೆ ಭೂಗರ್ಭ ಶಾಸ್ತ್ರ ತಜ್ಞರು ಭೂಕಂಪಕ್ಕೆ ಕಾರಣ ಹುಡುಕಲು ಜಿಲ್ಲೆಗೆ ಅಧ್ಯಯನ ನಡೆಸಲು ಜಿಲ್ಲೆ ಭೇಟಿ ನೀಡಿದ ದಿನವೇ ಹಲವು ಬಾರಿ ಭೂಕಂಪನವಾಗಿದೆ
ಗುರುವಾರ ಸಂಜೆ 4-30 ಕ್ಕೆ ಮತ್ತೆ ಭೂಕಂಪನ ಆಗಿದ್ದು, 3.4 ತೀವ್ರತೆ ದಾಖಲಿಸಿದ್ದರೆ, ರಾತ್ರಿ 9-51 ಕ್ಕೆ ಸಂಭವಿಸಿದ ಭೂಕಂಪನದ ತೀವ್ರತೆ 3.6 ರಷ್ಟಿತ್ತು. ಈ ಮಧ್ಯೆ ಶುಕ್ರವಾರ ಬೆಳಗಿನಜಾವ 2-21 ಕ್ಕೆ ಮತ್ತೆ ಕಂಪಿಸಿದ ಭೂಮಿ 2.4 ರಷ್ಟು ಭೂಕಂಪನ ದಾಖಲಿಸಿದ್ದರೆ, ಬೆಳಿಗ್ಗೆ 6-58 ಕ್ಕೆಸಂಭವಿಸದ ಭೂಕಂಪ 3.9 ರಷ್ಡಿತ್ತು ಎಂಬುದು ದೃಢಪಟ್ಟಿದೆ.
ಮತ್ತೊಂದೆಡೆ ರಾಜಧಾನಿ ಬೆಂಗಳೂರಿನಿಂದ ಆಗಮಿಸಿರುವ ಭೂಗರ್ಭ ತಜ್ಞ ಆಧಿಕಾರಿಗಳು ಭೂಕಂಪ ಬಾಧಿತ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದೆ. ಅಲ್ಲದೇ ಜಿಲ್ಲಾಡಳಿತದ ಸಹಾಯದೊಂದಿಗೆ ಸ್ಥಳೀಯವಾಗಿ ಸಭೆ ನಡೆಸಿದ ಭೂಗರ್ಭ ಶಾಸ್ತ್ರಜ್ಞರು ತಮ್ಮ ಅಧ್ಯಯನ ಹಾಗೂ ಅನುಭವದ ಆಧಾರದಲ್ಲಿ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕಂಪ ಅಪಾಯ ಸೃಷ್ಡಿಸುವಷ್ಟು ಗಂಭೀರ ಸ್ವರೂಪದ್ದಲ್ಲ ಎಂದು ಸ್ಥಳೀಯರಿಗೆ ಮನವರಿಕೆ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ : ಯೂಟ್ಯೂಬ್ ಚಾನೆಲ್ ವಿರುದ್ಧ ಕ್ರಮಕ್ಕೆ ಕಂದಾಯ ನೌಕರರ ಆಗ್ರಹ
ಇದಲ್ಲದೇ ಉಕ್ಕಲಿ ಗ್ರಾಮದಲ್ಲಿ ಭೂಕಂಪನ ಸ್ಥಿತಿಗತಿ ಅರಿಯಲು ಸಿಸ್ಮೋ ಮೀಟರ್ ಅಳವಡಿಸಿದ ತಜ್ಞ ಆಧಿಕಾರಿಗಳು, ವಿಜಯಪುರ ಜಿಲ್ಲೆಯಲ್ಲಿ ಲಘು ಭೂಕಂಪನ ಆಗುತ್ತಿದೆ. ಹಾಗಾಗಿ ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಸಲಹೆ ನೀಡಿದರು.
ಭೂಗರ್ಭ ತಜ್ಞರು ಅಧ್ಯಯನ ನಡೆಸಿದ್ದು, ಜಿಲ್ಲೆಯ ಭೂಗರ್ಭದಲ್ಲಿ ತೇವಾಂಶ ಹೆಚ್ಚಾದಾಗ, ಭೂ ಚಲನೆ ವೇಳೆ ನಡೆಯು ಪ್ರಕ್ರಿಯೆಯ ಭಾಗವಾಗಿ ಇಂಥ ಬೆಳವಣಿಗೆ ಪ್ರಕೃತಿಯಲ್ಲಿ ನಡೆಯುತ್ತವೆ. ಹೀಗಾಗಿ ಯಾರೂ ಆತಂಕ ಪಡಬೇಡಿ. ಬದಲಾಗಿ ಪರಿಸ್ಥಿತಿ ಎದುರಿಸಲು ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಜನರಲ್ಲಿ ಮನವಿ ಮಾಡಿದರು.
ಇದೇ ವೇಳೆ ಭೂಕಂಪನದ ಬಗ್ಗೆ ಕೈಗೊಳ್ಳಬೇಕಿರುವ ಮುಂಜಾಗೃತಾ ಕ್ರಮಗಳ ಕುರುತೂ ಜಾಗೃತಿ ಮೂಡಿಸಲಾಯಿತು.
ಜಿ.ಪಂ. ಸಿಇಒ ರಾಹುಲ್ ಶಿಂಧೆ,
ಎಸ್ಪಿ ಆನಂದಕುಮಾರ ಇತರೆ ಇಲಾಖೆಗಳ ಆಧಿಕಾರಿಗಳು, ಭೂಗರ್ಭ ಶಾಸ್ತ್ರಜ್ಞರಿಗೆ ಭೂಕಂಪನ ಬಗ್ಗೆ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
Lok Sabha Election; ಇಂದಿನಿಂದ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು