ಸಮಾಜಮುಖೀ ಕಾರ್ಯಕ್ಕೆ ಮುಂದಾದ “ಥರ್ಡ್‌ ಕ್ಲಾಸ್‌`

ಲಿಂಬೆ-ಬಾರೆ ಹಣ್ಣಿನಲ್ಲಿ ಅರಳಿದ ಗಣೇಶ ಹೂವಿನಲ್ಲಿ ಜನ್ಮತಳೆದ ವೀಣೆ, ತಬಲಾ, ಪಿಯಾನೋ ಸಂಗೀತ ವಾದ್ಯ

Team Udayavani, Jan 17, 2020, 5:28 PM IST

17-January-27

ವಿಜಯಪುರ: ನಗರದ ತೋಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದ ಬಸವವನದಲ್ಲಿ ಹಾಪ್ಸಕಾಮ್ಸ್‌ ಸಹಯೋಗದಲ್ಲಿ ಹಮ್ಮಿಕೊಂಡಿರುವ ಫ‌ಲ-ಪುಷ್ಪ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುವ ಮೂಲಕ ಜನಾಕರ್ಷಣೆ ಕೇಂದ್ರ ಎನಿಸಿದೆ.

ಹುಬ್ಬಳ್ಳಿ, ಶಿವಮೊಗ್ಗದ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿರುವ ಕಲಾವಿದರ ತರಕಾರಿ, ಹಣ್ಣು-ಹೂ, ಸಿರಿಧಾನ್ಯಗಳಲ್ಲಿ ವಿವಿಧ ಮೂರ್ತಿಗಳನ್ನು ರೂಪಿಸಿದ್ದು, ಒಂದಕ್ಕಿಂತ ಮತ್ತೂಂದು ಆಕರ್ಷಕವಾಗಿದ್ದು, ಭೇಟಿ ನೀಡುವ ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಫ‌ಲಪುಷ್ಪ ಮೇಳದ ಪ್ರಾಂಗಣ ಪ್ರವೇಶ ದ್ವಾರದಲ್ಲಿ ನಿಮ್ಮನ್ನು ಸ್ವಾಗತಿಸುವ ವಾಹನಗಳ ಬಳಕೆ ರಹಿತ ಟೈರ್‌ಗಳಲ್ಲಿ ಅರಳಿರುವ ವಿವಿಧ ಬಗೆಯ ಅಲಂಕಾರ ಹಾಗೂ ತರಕಾರಿಗಳಿಂದಲೇ ಬಿಡಿಸಿರುವ ಸುಂದರ ರಂಗೋಲಿ ನಿಮ್ಮನ್ನು ವಿಶಿಷ್ಟವಾಗಿ ಸ್ವಗತಿಸುತ್ತಿದೆ. ಪಕ್ಕದಲ್ಲಿ ಫ್ಲೆಕ್ಸ್‌ನಲ್ಲಿ ತೋಟಗಾರಿಕೆ ಪಿತಾಮಹ ಡಾ| ಎಂ.ಎಚ್‌. ಮರಿಗೌಡರ ಭಾವಚಿತ್ರವೂ ನಿಮ್ಮ ಗಮನ ಸೆಳೆಯುತ್ತದೆ. ಕುಂಬಳಕಾಯಿಉ, ಕಲ್ಲಂಗಡಿ, ಹಾಗಲಕಾಯಿ, ಅನಾನಸ್‌, ಸವತೆ ಕಾಯಿ, ಬದನೆಕಾಯಿಯಂತ ತರಕಾರಿಗಳಲ್ಲಿ ಹಲವರು ಸಾಧಕ ಶಕ್ತಿಗಳ ಚಿತ್ರಗಳು ಅನಾವರಣಗೊಂಡಿವೆ.

ಈಚೆಗೆ ಅಗಲಿದ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥರು, ತುಮಕೂರು ಸಿದ್ಧಗಂಗೆಯ ಡಾ.ಶಿವಕುಮಾರ ಶ್ರೀಗಳು, ವರನಟ ಡಾ.ರಾಜಕುಮಾರ, ಸಾಮಾಜಿಕ ಕ್ರಾಂತಿಪುರುಷ ಬಸವೇಶ್ವರ, ವೀರಸನ್ಯಾಸಿ ಸ್ವಾಮಿವಿವೇಕಾನಂದ, ವಿಶ್ವಸಂತ ಕನಕದಾಸ, ಭಾರತದ ಅಪ್ರತಿಮ ಸ್ವಾತಂತ್ರ್ಯ ಸೇನಾನಿಗಳಾದ ಮಹತ್ಮಾ ಗಾಂಧೀಜಿ, ಭಗತ್‌ ಸಿಂಗ್‌, ನೇತಾಜಿ ಸುಭಾಶ್ಚಂದ್ರ ಭೋಸ್‌, ಸರ್ದಾರ ವಲ್ಲಭ ಭಾಯಿ ಪಟೇಲ್‌, ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌, ವಿಶ್ವ ಕ್ರಿಕೆಟ್‌ನ ಆರಾಧಕ ಸಚಿನ್‌ ತೆಂಡೂಲ್ಕರ್‌, ವಿರಾಟ ಕೊಯ್ಲಿ ಭಾವಚಿತ್ರಗಳು ಕಾರ್ವಿಂಗ್‌ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿರುವ ಜಾÒನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು, ಸಂಶೋಧಕ ಎಂ.ಎಂ.ಕಲಬುರ್ಗಿ, ವಿಜಯಪುರ ಅಕ್ಷರ ಪ್ರವರ್ತಕ ಬಂಥನಾಳ ಶ್ರೀಗಳು, ವಚನಪಿತಾಮಹ ಡಾ| ಫ‌.ಗು. ಹಳಕಟ್ಟಿ, ದಾನಶ್ರೇಷ್ಠ ಬಂಗಾರಮ್ಮ ಸಜ್ಜನ ಹೀಗೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಅಪ್ರತಿಮರ ಚಿತ್ರಗಳು ಹಣ್ಣುಗಳಲ್ಲಿ ಕಲಾವಿದರ ಕೈಚಳಕದಲ್ಲಿ ಅರಳಿ ನಿಂತಿವೆ.

ನೋಡುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತಿವೆ. ಮತ್ತೂಂದೆಡೆ ನರ್ತಿಸುತ್ತಿರುವ ನವಿಲು, ಡೈನೋಸಾರ್‌, ಡೊಳ್ಳು ಹೊಟ್ಟೆ ಗಣಪನೂ ಆಕರ್ಷಕವೇ. ವಿವಿಧ ವರ್ಣಮಯ ಗುಲಾಬಿ ಹಾಗೂ ಇತರೆ ಹೂಗಳಲ್ಲಿ ಪ್ರೇಮ ಸಂಕೇತವಾದ ಹೃದಯ,
ಸಂಗೀತ ವಾದನಗಳಾದ ಪಿಯಾನೋ, ತಬಲಾ, ವೀಣೆಗಳಂಥ ಸಂಗೀತ ಸಾಧನಗಳು ಕಲಾವಿನ ಕೈಚಳಕ ಕೌಶಲ್ಯಕ್ಕೆ ಮೂಕವಿಸ್ಮಿತರನ್ನಾಗಿ ಮಾಡುತ್ತಿವೆ.

ಲಿಂಬೆ, ಬಾರೆ, ಒಣದ್ರಾಕ್ಷಿಗಳಲ್ಲಿ ಅರಳಿನಿಂತ ಗಣೇಶ ದೂರದಿಂದಲೇ ಪ್ರೇಕ್ಷಕ-ವೀಕ್ಷಕರನ್ನು ತನ್ನತ್ತ ಸೆಳೆತುತ್ತಿದ್ದಾನೆ. ಶಿವಮೊಗ್ಗದ ಗಿರಿಶ, ಹುಬ್ಬಳ್ಳಿ ಶಿವಲಿಂಗಪ್ಪ ಬಡಿಗೇರ, ಗಿರೀಶ, ಇಸ್ಮಾಯಿಲ್‌ ತಲವಾಯಿ ಇವರ ಕಲಾಕೌಶಲ್ಯ ಇಲ್ಲಿ ಮೇಳೈಸಿದೆ. ಮತ್ತೂಂದೆಡೆ ವಿಶೇಷವಾಗಿ ಜಿಲ್ಲೆ ಅದ್ಭುತ ಶಕ್ತಿಪ್ರಭೆಗಳಾದ ವಚನ ಪಿತಾಮಹ ಫ.ಗು. ಹಳಕಟ್ಟಿ, ಸಂಗನಬಸವ ಸ್ವಾಮಿಗಳು, ಸಿದ್ದೇಶ್ವರ ಮಹಾಸ್ವಾಮಿಗಳು, ಅಮೀರಬಾಯಿ ಕರ್ನಾಟಕಿ, ಕರ್ನಾಟಕ ಏಕೀಕರಣ ರೂವಾರಿ ಆಲೂರು ವೆಂಕಟರಾಯರು, ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಾರೆ ರಾಜೇಶ್ವರಿ ಗಾಯಕವಾಡ ಅವಂಥ ಸ್ಥಾನಿಕ ಪ್ರತಿಭೆಗಳ ಚಿತ್ರಣಗಳೂ ಗಮನ ಸೆಳೆಯುತ್ತಿವೆ.

ಮೂಲಂಗಿ, ಗಜ್ಜರಿ, ಬದನೆ, ಸವತೆಕಾಯಿಗಳಂಥ ತರಕಾರಿಗಳಲ್ಲಿ ನವಿಲು, ಕೋಳಿ, ಹಂಸ, ಬಾತುಕೋಳಿ, ಜಿಂಕೆ, ಅಳಿಲು, ಮೀನು, ಮೊಸಳೆ, ಮೀನು ಗಳಂಥ ವಿವಿಧ ಪ್ರಾಣಿ ಪಕ್ಷಿಗಳ ಜೊತೆಗೆ ಹಡಗು ಕೂಡ ಗಮನ ಸೆಳೆಯುತ್ತಿವೆ. ಮತ್ತೂಂದೆಡೆ ಹುಬ್ಬಳ್ಳಿ ಶಿವಲಿಂಗಪ್ಪ ಬಡಿಗೇರ, ಕೈಚಳಕದಲ್ಲಿ ಸಜ್ಜೆ, ನವಣೆ, ಹಾರಕ, ಬರಗು, ರಾಗಿ, ಸಾಂವೆ, ಜೋಳ, ರಾಗಿ, ನವಣೆಗಳಂಥ ಸಿರಿಧಾನ್ಯಗಳಿಂದ ರೂಪಿಸಿದ ಸ್ವಾಮಿ ವಿವೇಕಾನಂದರ ಮೂರ್ತಿ ಜನಾಕರ್ಷಕವಾಗಿದೆ.

ಮತ್ತೂಂದು ಬದಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಬೇಕಾದ ಮಾಹಿತಿ ನೀಡುವ ವಿವಿಧ ವಸ್ತುಗಳ ಮಾರಾಟ-ಪ್ರದರ್ಶನವೂ ಇದೆ. ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ವಿವಿಧ ಬಗೆಯ ಹಣ್ಣುಗಳ ಸಸಿಗಳು, ಹೂ-ತರಕಾರಿ ಅಲಂಕಾರಿಕ, ಔಷ  ಸಸಗಳು ಮಾಹಿತಿ ನೀಡುವ ಮಳಿಗೆಗಳು ಒಂದೇ ಸೂರಿನಲ್ಲಿ ಲಭ್ಯವಾಗಿರುವುದನ್ನು ಕಂಡು ಉದ್ಘಾಟನೆಗೆ ಬಂದಿದ್ದ ಸ್ವಯಂ ಸಿದ್ಧೇಶ್ವರ ಶ್ರೀಗಳೆ ಸಂತಸ ವ್ಯಕ್ತಪಡಿಸಿರುವುದು ಫ‌ಲ-ಪುಷ್ಮ ಪ್ರದರ್ಶನ ಮೇಳ ಆಯೋಜಿಸಿರುವ ಜಿ.ಪಂ., ತೋಟಗಾರಿಕೆ ಹಾಗೂ ಹಾಪ್‌ಕಾಮ್ಸ್‌ ಅಧಿಕಾರಿ-ಸಿಬ್ಬಂದಿಗೆ ಸಂರ್ತಪ್ತಿ ನೀಡಿದೆ.

ಟಾಪ್ ನ್ಯೂಸ್

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

1-aqwqw

BJP Rebel; ನಾಮಪತ್ರ ಹಿಂಪಡೆದ ಡಾ.ನಾಯಿಕ್ ಕಾಂಗ್ರೆಸ್ ಸೇರ್ಪಡೆ

Muddebihal: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ಒಂದೇ ಕುಟುಂಬದ ಇಬ್ಬರು ದುರ್ಮರಣ

Muddebihal: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ಒಂದೇ ಕುಟುಂಬದ ಇಬ್ಬರು ದುರ್ಮರಣ

Vijayapura; ನಾಮಪತ್ರ ಹಿಂಪಡೆದ ಬಿಜೆಪಿ ಬಂಡುಕೋರ ಡಾ.ನಾಯಿಕ್

Vijayapura; ನಾಮಪತ್ರ ಹಿಂಪಡೆದ ಬಿಜೆಪಿ ಬಂಡುಕೋರ ಡಾ.ನಾಯಿಕ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.