ಗದ್ದೆಗೆ ನೀರು ಹರಿಸಲು ಹೋಗಿದ್ದ ಅಳಿಯ-ಮಾವ ಕಾಲುವೆ ನೀರು ಪಾಲು
Team Udayavani, Dec 6, 2022, 2:50 PM IST
ಕೊಲ್ಹಾರ (ವಿಜಯಪುರ): ಕಬ್ಬಿನ ಗದ್ದೆಗೆ ನೀರು ಹರಿಸಲು ಹೋಗಿದ್ದ ಅಳಿಯ, ಮಾವ ಇಬ್ಬರೂ ಕಾಲುವೆ ನೀರಿನಲ್ಲಿ ಬಿದ್ದು ಮೃತಪಟ್ಟ ದುರಂತ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ಜರುಗಿದೆ.
ಮೃತರನ್ನು ಮಾವ ಅಶೋಕ ವೀರಬಸಪ್ಪ ಅಂಗಡಗೇರಿ (50) ಹಾಗೂ ಅಳಿಯ ಚಂದ್ರಶೇಖರ ಈರಪ್ಪ ಡೆಂಗಿ (40) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ನಾಲೆಯಿಂದ ಗದ್ದೆಗೆ ನೀರು ಹರಿಸಲು ಮೊದಲು ಹೋಗಿದ್ದ ಮಾವ ಅಶೋಕ ನಾಲೆಯಲ್ಲಿ ಕಾಲು ಜಾರಿಬಿದ್ದಿದ್ದಾರೆ. ನಂತರ ಮಾವನನ್ನು ರಕ್ಷಿಸಲು ಮುಂದಾದ ಅಳಿಯ ಚಂದ್ರಶೇಖರ ಕೂಡ ನಾಲೆಗೆ ಇಳಿದಿದ್ದು, ತುಂಬಿ ಹರಿಯುತ್ತಿರುವ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಡಿ.6ರ ಮಂಗಳವಾರ ಬೆಳಿಗ್ಗೆ ಕಾಲುವೆ ಬಳಿ ಚಂದ್ರಶೇಖರನ ಶವ ಪತ್ತೆಯಾಗಿದೆ. ಮಾವನ ಶವ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ.
ಕೂಡಗಿ ಏನ್ ಟಿಪಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ