ಜಾತಿ ಮೀರಿ ವಿಕಲಚೇತನೆಯ ಕೈಹಿಡಿದ ಆಟೋ ಚಾಲಕ
Team Udayavani, Aug 14, 2020, 2:46 PM IST
ವಿಜಯಪುರ: ನಗರದಲ್ಲಿ ಆಟೋ ಓಡಿಸಿಕೊಂಡಿರುವ ಯುವಕನೊಬ್ಬ ಕುಟುಂಬದವರ ಸಮ್ಮತಿಯೊಂದಿಗೆ ಅನ್ಯ ಸಮುದಾಯಕ್ಕೆ ಸೇರಿದ ಅಂಗವಿಕಲೆಯನ್ನು ಕೈ ಹಿಡಿದಿದ್ದಾನೆ. ಆ ಮೂಲಕ ಜಾತಿ, ದೈಹಿಕ ನ್ಯೂನ್ಯತೆಯನ್ನು ಮೀರಿ ಹೊಸ ಬಾಳಿಗೆ ಕಾಲಿಟ್ಟು ಸಮಾಜಕ್ಕೆ ಗುಣಾತ್ಮಕ ಹೊಸ ಸಂದೇಶ ನೀಡುವ ಆದರ್ಶ ಮೆರೆದಿದ್ದಾನೆ.
ನಗದ ಸಿಂದಗಿ ರಸ್ತೆಯಲ್ಲಿರುವ ಔದುಂಬರವಾಸಿ ಶ್ರೀದತ್ತ ಮಂದಿರದಲ್ಲಿ ಜರುಗಿದ ಈ ಅಪರೂಪದ ಮದುವೆಗೆ ವೇದಿಕೆ ಕಲ್ಪಿಸಿದ್ದು ಕರ್ನಾಟಕ ರಾಜ್ಯ ವಿಕಲಚೇತನರ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತಕ್ಕೀಡಾದ ಸಂಘದ ಪ್ರಮುಖರು. ನಗರದ ಜಾಗೃತಿ ಕಾಲೋನಿ ಅಂಕಲೀಕರ ಲೇಔಟ್ ನಿವಾಸಿ ಆಟೋ ಚಾಲಕನಾಗಿರುವ ದೈಹಿಕ ಯಾವುದೇ ನ್ಯೂನ್ಯತೆ ಇಲ್ಲದ 34 ವರ್ಷದ ಹನುಮಂತ ಪಾಂಡುರಂಗ ಮಿಸ್ಕೀನ್ (ಸಾವಜಿ) ಎಂಬ ಯುವಕ ಹಾಗೂ ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದ 28 ವರ್ಷದ ಅಂಗವಿಕಲೆ ಶಾಂತಮ್ಮ ಮಹಾದೇವಪ್ಪ ಭಜಂತ್ರಿ ಇವರೇ ನವಜೀವಕ್ಕೆ ಕಾಲಿಟ್ಟ ಅಪರೂಪದ ಜೋಡಿ. ಸರಳ ಸಮಾರಂಭದಲ್ಲಿ ಜಾತಿಯ ಹಂಗಿಲ್ಲದ, ದೈಹಿಕ ನ್ಯೂನ್ಯತೆಯ ಕೊರಗಿಲ್ಲದೇ ಇಬ್ಬರು ಹೊಸಬಾಳಿಗೆ ಸಪ್ತಪದಿ ತುಳಿದಿದ್ದಾರೆ.
ಯುವಕ ಹನುಮಂತನ ತಂದೆ ಪಾಂಡುರಂಗ, ಅಂಗವಿಕಲೆಯ ತಂದೆ ಮಹಾದೇವಪ್ಪ, ತಾಯಿ ಶಂಕ್ರಮ್ಮ ಹಾಗೂ ಎರಡೂ ಕುಟುಂಬಗಳ ಸದಸ್ಯರು ಈ ವಿವಾಹಕ್ಕೆ ಸಾಕ್ಷಿಯಾಗಿದ್ದರು. ಅಂಗವಿಕಲರ ಸಂಘದ ಭೀಮನಗೌಡ ಪಾಟೀಲ (ಸಾಸನೂರ), ನಿಮಿಶ್ ಆಚಾರ್ಯ, ಸುರೇಶ ಚವ್ಹಾಣ, ಪರಶುರಾಮ ಗುನ್ನಾಪುರ, ಪರಶುರಾಮ ಗಾಯಕವಾಡ , ಸಂತೋಷ ಬೊಮ್ಮನಳ್ಳಿ, ಮಹೇಶ ಮುಧೋಳ ನಾಮದೇವ ಇಲಕಲ್ ಇತರರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ