ಶರಣರ ವಚನಗಳು ಮಾರ್ಗದರ್ಶಿ

ಸಿದ್ಧರಾಮೇಶ್ವ‌ರ ಜಯಂತಿ ಶರಣರ ಮೂಲ ಆಶಯ ಈಡೇರಿಸಲು ಪಣ ತೊಡಿ

Team Udayavani, Jan 15, 2020, 5:20 PM IST

15-January-24

ವಿಜಯಪುರ: ಸಮಾಜಕ್ಕೆ ಬೆಳಕನ್ನು ನೀಡಿದ ಶರಣರ-ಸಂತರ ಹಾಗೂ ಮಹಾಂತರ ಬಗ್ಗೆ ಮಾಹಿತಿ ನೀಡುವುದಕ್ಕೆ ಸರಕಾರ ಜಯಂತಿಗಳನ್ನು ಆಚರಿಸುತ್ತದೆ. ಸಾವಿರಾರು ವಚನಗಳನ್ನು ಬರೆದಿರುವ ಶಿವಯೋಗಿ ಸಿದ್ಧರಾಮೇಶ್ವರ ವಚನಗಳ ತತ್ವಸಾರವನ್ನು ವಿದ್ಯಾರ್ಥಿಗಳು ತಿಳಿದುಕೊಂಡು ಜೀವನದಲ್ಲಿ ಬೆಳಕನ್ನು ಕಾಣಬೇಕು ಎಂದು ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ ಸಲಹೆ ನೀಡಿದರು.

ಮಂಗಳವಾರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

12ನೇ ಶತಮಾನದ ಶರಣಲ್ಲಿ ಬಸವೇಶ್ವರರೊಂದಿಗೆ ಇದ್ದ ಸಿದ್ಧರಾಮೇಶ್ವರ ಶರಣರು, ಅನುಭವ ಮಂಟಪದ ಪ್ರಮುಖರಾಗಿದ್ದರು. ಬಸವೇಶ್ವರರು ಜನ್ಮ ತಳೆದಿರುವ ಈ ನೆಲದಲ್ಲಿ ಬಸವೇಶ್ವರ, ಸಿದ್ಧರಾಮೇಶ್ವರರು ಸೇರಿದಂತೆ ಬಸವಾದಿ ಶರಣರ ಮೂಲ ಆಶಯ ಈಡೇರಿಸಲು ಪ್ರತಿ ವಿದ್ಯಾರ್ಥಿಗಳು ಪಣ ತೊಡಬೇಕು. ಸಾಮಾಜಿಕ ಕ್ರಾಂತಿ ಉಂಟು ಮಾಡಿದ ಶರಣರ ವಚನಗಳು, ಜೀವನ ವಿಧಾನಗಳ ಮೌಲ್ಯಗಳ ಕುರಿತು ಇಂದಿನ ಮಕ್ಕಳು ಅಧ್ಯಯನ ನಡೆಸಿ ಮಾದರಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ ಸೇರಿದಂತೆ ದೇಶದ ವಿವಿಧೆಡೆ ಸಿದ್ದರಾಮೇಶ್ವರರ 174 ಕಡೆಗಳಲ್ಲಿ ದೇವಸ್ಥಾನಗಳಿವೆ. ಸಂಕ್ರಮಣದ ಸಂದರ್ಭದಲ್ಲಿ ಸಿದ್ಧರಾಮೇಶ್ವರ ಜಾತ್ರೆಯ ವೈಭವದ ಹಿನ್ನೆಲೆಯಲ್ಲಿ ದೇಶದ ಜನರು ವಿಜಯಪುರ ನಗರದ ಕಡೆಗೆ ಚಿತ್ತ ನೆಡುವಂತೆ ಮಾಡಿರುವುದು ಜಾತ್ರೆಯ ವಿಶೇಷ ಎಂದು ಬಣ್ಣಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿಶಿಸ್ತು, ಸಮಯಪ್ರಜ್ಞೆ, ಯೋಜನಾಬದ್ಧ ಜೀವನ ಶೈಲಿ ಹಾಗೂ ಪರಿಶ್ರಮದ ಓದಿನಿಂದ ಮಾತ್ರ ಉತ್ತಮ ಹುದ್ದೆ ಪಡೆದು, ಹೆತ್ತವರ ಆಶಯ ಈಡೇರಿಸಲು ಸಾಧ್ಯ. ನಮ್ಮ ನೆಲದ ಶರಣರ ಚರಿತ್ರೆ ಓದಿ, ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ನಿಮ್ಮ ಆದರ್ಶ ಮೌಲ್ಯಗಳಲ್ಲಿ ಹಿರಿಮೆ ಪಡೆಯಲು ಸಾಧ್ಯವಿದೆ ಎಂದರು.

ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ| ಎಂ.ಎಸ್‌. ಮದಭಾವಿ ಮಾತನಾಡಿ, 12ನೇ ಶತಮಾನದ ವಚನಕಾರರಲ್ಲಿ ಬಸವೇಶ್ವರರೊಂದಿಗೆ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಅನುಭವ ಮಂಟಪದ ಪ್ರಮುಖರು ಹಾಗೂ ಶ್ರೇಷ್ಠ ವಚನಕಾರರಲ್ಲಿ ಸಿದ್ಧರಾಮೇಶ್ವರರೂ ಅಗ್ರಗಣ್ಯರು.

ಜ್ಞಾನ, ಯೋಗ ಮತ್ತು ಸಮಾಜದಲ್ಲಿರುವ ಜನರ ಕುರಿತು ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಸಾರ್ವಕಾಲಿಕ ಆದರ್ಶ ಸಂದೇಶ ನೀಡಿದ್ದಾರೆ ಎಂದು ಬಣ್ಣಿಸಿದರು. ಸೊಲ್ಲಾಪುರದ ವರ್ತಕರು ವ್ಯಾಪಾರಕ್ಕೆಂದು ವಿಜಯಪುರಕ್ಕೆ ಬಂದಾಗ ಕರ್ಮಯೋಗಿ, ಶಿವಯೋಗಿ ಸಿದ್ಧರಾಮೇಶ್ವರ ಪ್ರತಿರೂಪವನ್ನು ನಗರದಲ್ಲಿ ಪ್ರತಿಷ್ಠಾಪಿಸಿ, ನಿತ್ಯ ಅವರಿಗೆ ಕೈ ಮುಗಿದು ವ್ಯಾಪಾರವನ್ನು ಆರಂಭಿಸಿದರು. ಅಂದಿನಿಂದ ಆರಂಭಗೊಂಡಿರುವ ಸಿದ್ಧೇಶ್ವರರ ದೇವಸ್ಥಾನದಲ್ಲಿನ ನಿತ್ಯ ಪೂಜೆ, ಹಬ್ಬಗಳಲ್ಲಿ ವಿಶೇಷ ಪೂಜೆ, ಸಂಕ್ರಾಂತಿ ಸಂದರ್ಭದಲ್ಲಿ ಜಾತ್ರೆ ಇಂದಿಗೂ ಮುಂದುವರಿದಿದೆ ಎಂದರು.

ವಚನಕಾರರಲ್ಲಿ ಪ್ರಮುಖರಾಗಿರುವ ಸಿದ್ಧರಾಮೇಶ್ವರ ಶರಣರು 68 ಸಾವಿರ ವಚನಗಳನ್ನು ರಚಿಸಿದ್ದು, ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಶರಣರ ವಚನಗಳ ಕಟ್ಟುಗಳನ್ನು ನಾಶ ಮಾಡಿದಾಗ ಸಿದ್ಧರಾಮೇಶ್ವರರ ವಚನಗಳೂ ನಾಶವಾಗಿದೆ. ಇದರ ಹೊರತಾಗಿಯೂ ಈವರೆಗೆ 1679 ವಚನಗಳು ಮಾತ್ರ ದೊರಕಿವೆ ಎಂದು ವಿವರಿಸಿದರು.

ಜಿಪಂ ಮುಖ್ಯ ಯೋಜನಾ ಧಿಕಾರಿ ನಿಂಗಪ್ಪ ಗೋಠೆ, ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌ .ಜಿ. ಪೂಜೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಸನ್ನಕುಮಾರ, ರಾಮು ಹೊಸಪೇಟೆ, ನಾಗಪ್ಪ ವಡ್ಡರ, ಪರಶುರಾಮ ಗುಂಜಲಕರ್‌, ಜ್ಞಾನೇಶ್ವರ ಹಾಲಕುಂಠೆ, ವಿ.ಸಿ. ನಾಗಠಾಣ ಇದ್ದರು. ದೂರದರ್ಶನ-ಆಕಾಶವಾಣಿ ಕಲಾವಿದೆ ಅಶ್ವಿ‌ನಿ ಹಿರೇಮಠ ಸಿದ್ಧರಾಮೇಶ್ವರರ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಾಕ್ಷಿ ಹಿರೇಮಠ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಎಚ್‌.ಎ. ಮಮದಾಪುರ ನಿರೂಪಿಸಿದರು. ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ಉಪ ನಿರ್ದೇಶಕ ಎಸ್‌.ಜಿ. ಲೋಣಿ ವಂದಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.