ಮಾಳನೂರ ಕೆರೆ ನೀರಿನ ಸಂಗ್ರಹಮಟ್ಟ ಪರಿಶೀಲನೆ
Team Udayavani, Nov 14, 2020, 7:08 PM IST
ತಾಳಿಕೋಟೆ: ಪಟ್ಟಣದ ಜನರಿಗೆ ಮೂರು ದಿನಗಳಿಂದ ಕುಡಿಯುವ ನೀರಿನ ತೊಂದರೆಯಾಗಿರುವುದನ್ನು ಗಮನಿಸಿದ ಪುರಸಭೆ ನೂತನ ಅಧ್ಯಕ್ಷ ಸಂಗಮೇಶ ಇಂಗಳಗಿ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಶುಕ್ರವಾರ ನೀರು ಸರಬರಾಜು ಮಾಡುವ ಮಾಳನೂರ ಕೆರೆಗೆ ಭೇಟಿ ನೀಡಿ ಪಂಪ್ಸೆಟ್ ದುರಸ್ತಿ ಕಾರ್ಯವನ್ನು ವಿಕ್ಷೀಸಿದರಲ್ಲದೇ ಕೂಡಲೇಕಾರ್ಯವನ್ನು ಬೇಗನೆ ಮುಗಿಸಿನೀರು ಸರಬರಾಜಿಗೆ ಕ್ರಮ ಕೈಗೊಳ್ಳಿ ಎಂದು ಉಪಸ್ಥಿತ ನೀರು ಸರಬರಾಜು ಅಧಿಕಾರಿಗಳಿಗೆ ಸೂಚಿಸಿದರು.
ಮೋಟರ್ನಲ್ಲಿ ಸವಕಳಿಯಿಂದಾಗಿ ದುರಸ್ತಿಗೆ ಬಂದಿದೆ. ಮೂರು ದಿನಗಳಿಂದ ಸತತ ಹಗಲು ರಾತ್ರಿಯನ್ನದೇ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ.ಸಂಜೆಯ ಹೊತ್ತಿಗೆ ಸಂಪೂರ್ಣದುರಸ್ತಿ ಮುಗಿಯಲಿದೆ. ಶನಿವಾರಪಟ್ಟಣದ ಜನರಿಗೆ ಎಂದಿನಂತೆ ನೀರು ಪೂರೈಕೆಯಾಗಲಿದೆ ಎಂದು ನೀರು ಸರಬರಾಜು ಮೇಲ್ವಿಚಾರಕ ಶಂಕರಗೌಡ ಬಿರಾದಾರ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಮಾತನಾಡಿ, ಕೇರ್ ಸಿಟಿ ಮತ್ತು ಕುಡಿಯುವ ನೀರಿನಯೋಜನೆ ವತಿಯಿಂದ 20 ಲಕ್ಷ ರೂ. ತೆಗೆದಿಡಲಾಗಿದೆ. ಕೆಲ ಪಂಪ್ಸೆಟ್ಗಳು ಹಳೆಯದಾಗಿರುವದನ್ನು ಪದೇ-ಪದೇದುರಸ್ತಿಗೆ ಬರುತ್ತಿವೆ. ಅವುಗಳನ್ನು ಬದಲಿಸುವುದು ಅಗತ್ಯವಿದೆ. ಅವುಗಳನ್ನು ಖರೀದಿಸಿ ಬದಲಿಸಿದರೆತೊಂದರೆ ತಪ್ಪಲಿದೆ. ಅದಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮುತ್ತಪ್ಪಣ್ಣ ಚಮಲಾಪುರ, ಜೈಸಿಂಗ್ ಮೂಲಿಮನಿ, ಮುದಕಣ್ಣಬಡಿಗೇರ, ಮೈಹಿಬೂಬ ಲಾಹೋರಿ, ಉಮರಶ್ಯಾ ಮಕಾಂದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?