ಪಕ್ಷ ಕಟ್ಟಲು ಶ್ರಮಿಸಿದ ನಾನೇಕೆ ಹೊರ ಹೋಗಲಿ: ಯತ್ನಾಳ್‌ ಪ್ರಶ್ನೆ


Team Udayavani, Jan 15, 2023, 11:14 PM IST

ಪಕ್ಷ ಕಟ್ಟಲು ಶ್ರಮಿಸಿದ ನಾನೇಕೆ ಹೊರ ಹೋಗಲಿ: ಯತ್ನಾಳ್‌ ಪ್ರಶ್ನೆ

ವಿಜಯಪುರ: ಉತ್ತರಾಯಣ ಆರಂಭವಾಗಿದ್ದು, ಇನ್ನು ನಮಗೆ ಒಳ್ಳೆಯ ದಿನಗಳು ಬರಲಿವೆ. ಟಿಕೆಟ್‌ ಕೊಡುವ ಜವಾ ಬ್ದಾರಿಯಲ್ಲಿ ನಾವೇ ಇರಲಿದ್ದೇವೆ ಎಂದು ಹೇಳಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ಮೂರು ದಶಕಗಳ ಹಿಂದೆ ಹಳ್ಳಿಗಳಿಗೆ ಓಡಾಡಿ ಪಕ್ಷ ಸಂಘಟನೆ ಮಾಡಿರುವ ನಾನೇಕೆ ಪಕ್ಷ ಬಿಡಬೇಕು? ಇಷ್ಟಕ್ಕೂ ಬಿಟ್ಟು ಹೋಗು ಎನ್ನಲು ಬಿಜೆಪಿ ಯಾರಪ್ಪನ ಮನೆಯ ಆಸ್ತಿಯೂ ಅಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಹಳ್ಳಿಗೆ ಹೋಗಿ ವಿಜಯಪುರಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದವರು ಯಾರೆಂದು ಕೇಳಿದರೆ ಜನಸಾಮಾನ್ಯರು ಉತ್ತರ ನೀಡು ತ್ತಾರೆ. “ಯತ್ನಾಳ್‌ ಗೌಡ ಬಿಜೆಪಿ ಪಾರ್ಟಿ ಕಟ್ಯಾನ. ನಮ್ಮೂರಿಗೆ ಕಮಲದ ಹೂ ತಂದಾನ’ ಎನ್ನುತ್ತಾರೆ ಎಂದರು.

ಶನಿವಾರ ಸಚಿವ ಮುರುಗೇಶ ನಿರಾಣಿ ಪಂಚಮಸಾಲಿ ಮೀಸಲಾತಿ ವಿಷಯದಲ್ಲಿ ನನ್ನ ಹೆಸರು ಎತ್ತದೇ ಪಕ್ಷ ಬಿಟ್ಟು ಹೋಗಬೇಕು, ಈ ಬಾರಿ ಟಿಕೆಟ್‌ ನೀಡುವುದಿಲ್ಲ ಎಂದಿದ್ದಾರೆ. ನನ್ನನ್ನು ಬಿಜೆಪಿ ಪಕ್ಷದಿಂದ ಹೊರ ಹಾಕುವ ತಾಕತ್ತು ಇವರ್ಯಾರಿಗೂ ಇಲ್ಲ. ಕೆಲವರಿಗೆ ನನ್ನನ್ನು ತುಳಿಯುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ಇಂಥ ಪ್ರಯತ್ನಗಳು ಬಹಳ ನಡೆದಿವೆ ಎಂದರು.

72 ಸಾವಿರ ಜನರಿಗೆ ಉದ್ಯೋಗ ನೀಡಿರುವ ನಾಯಕರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರು ನೀಡುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿ. ಒಬ್ಬನೂ ಇವರ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ತರಹೇವಾರಿ ನಿಂದಿಸಿದ್ದಾರೆ ಎಂದರು.

ಮೀಸಲು ಬಗ್ಗೆ ವರಿಷ್ಠರಿಂದ ಸಕಾರಾತ್ಮಕ ಪ್ರತಿಕ್ರಿಯೆ
ವಿಜಯಪುರ: ಸಂಕ್ರಾಂತಿ ದಿನ ಬೆಳಗ್ಗೆ ಪಕ್ಷದ ವರಿಷ್ಠರು ಕರೆ ಮಾಡಿದ್ದು, ಪಂಚಮಸಾಲಿ ಮೀಸಲಾತಿ ಬಗ್ಗೆ ಒಳ್ಳೆಯ ಸುದ್ದಿ ನೀಡುತ್ತೇವೆ ಹಾಗೂ ಶೀಘ್ರವೇ ಸಭೆ ಕರೆಯುವ ಭರವಸೆ ನೀಡಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಬೇಡಿಕೆ ಈಡೇರಿಸುವ ವಿಷಯದಲ್ಲಿ ವರಿಷ್ಠರು ಸಕಾರಾತ್ಮಕವಾಗಿದ್ದಾರೆ ಎಂಬ ಸಂದೇಶ ನೀಡಿದ್ದಾರೆ. ಜ. 21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಜಯಪುರಕ್ಕೆ ಆಗಮಿಸಲಿದ್ದು, ಪಂಚಮಸಾಲಿ ಮೀಸಲಾತಿ ವಿಷಯವೂ ಚರ್ಚೆಗೆ ಬರಲಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಕಲ್ಪಿಸುವ ವಿಷಯವಾಗಿ ಎರಡು ವರ್ಷಗಳಿಂದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ತಪಸ್ಸಿನ ರೀತಿಯಲ್ಲಿ ವಿವಿಧ ರೀತಿಯ ಹೋರಾಟ ನಡೆಸಿದ್ದಾರೆ. ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಸಹಿತ ವಿವಿಧ ರೀತಿಯ ಹೋರಾಟದ ಪ್ರತಿಫಲವಾಗಿ ಮಕರ ಸಂಕ್ರಮಣ ಉತ್ತರಾಯಣದ ಶುಭ ಪ್ರಸಂಗದಲ್ಲಿ ವರಿಷ್ಠರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಶೀಘ್ರವೇ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ನಾಯಕರ ಭೇಟಿಗಾಗಿ ದಿಲ್ಲಿಗೆ ಹೋಗುತ್ತಿದ್ದೇವೆ ಎಂದರು.

ಕೆಲವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದೆಂದು ನಾಯಕರು ಸೂಚಿಸಿದ್ದಾರೆ. ವರಿಷ್ಠರು ಎಲ್ಲವನ್ನೂ ಗಮನಿಸಿದ್ದಾರೆ. ಹೀಗಾಗಿ ಸಂಸ್ಕಾರ ಇಲ್ಲದವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಟಾಪ್ ನ್ಯೂಸ್

1-sadasd

Punjab ಪಾಕ್ ಡ್ರೋನ್ ಅನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

1-sadas

New Parliament building ಅಧೀನರನ್ನು ಭೇಟಿಯಾದ ಪ್ರಧಾನಿ ಮೋದಿ

SIDDARAMAYYA 1

ಪ್ರವೀಣ್‌ ನೆಟ್ಟಾರು ಪತ್ನಿಯ ಪುನರ್‌ ನೇಮಕಾತಿ: CM ಸಿದ್ದರಾಮಯ್ಯ ಭರವಸೆ

1-ssad

Karnataka CM ಸಿದ್ದರಾಮಯ್ಯ ಸಂಪುಟದಲ್ಲಿ ಬಾವ-ಬಾಮೈದ!

1-sadsad

RSS ನಿಷೇಧಿಸುವ ಬಗ್ಗೆ ಸರ್ಕಾರ ಮಾತನಾಡಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

police crime

Manipal ಪೊಲೀಸರ ಹೆಸರಿನಲ್ಲಿ ಹಣ ವಸೂಲು: ಆರೋಪಿಗಳು ವಶಕ್ಕೆ

ನೂತನ ಸಚಿವ ಮಂಕಾಳ್ ವೈದ್ಯರನ್ನು ಸನ್ಮಾನಿಸಿದ ರಾಜಕೀಯ ಗುರು ಆರ್.ವಿ.ದೇಶಪಾಂಡೆ

ನೂತನ ಸಚಿವ ಮಂಕಾಳ್ ವೈದ್ಯರನ್ನು ಸನ್ಮಾನಿಸಿದ ರಾಜಕೀಯ ಗುರು ಆರ್.ವಿ.ದೇಶಪಾಂಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Muddebihal ಭೀಕರ ಅಪಘಾತ: ಅತ್ತೆ, ಅಳಿಯ ಸಾವು; ಮಕ್ಕಳಿಬ್ಬರು ಚಿಂತಾಜನಕ

ಕೂಲಿ ಕಾರ್ಮಿಕನ ಮಗ UPSC ಪಾಸ್ : ಸರೂರು ತಾಂಡಾದ ಯಲಗೂರೇಶ ಸಾಧನೆ

ಕೂಲಿ ಕಾರ್ಮಿಕನ ಮಗ UPSC ಪಾಸ್ : ಸರೂರು ತಾಂಡಾದ ಯಲಗೂರೇಶ ಸಾಧನೆ

Vijayapura: ಎಸ್ಸೆಸ್ಸೆಲ್ಸಿ 60 ಟಾಪರ್ಸ್‌ಗೆ ರಾಜಧಾನಿ ಪ್ರವಾಸ ಭಾಗ್ಯ

Vijayapura: ಎಸ್ಸೆಸ್ಸೆಲ್ಸಿ 60 ಟಾಪರ್ಸ್‌ಗೆ ರಾಜಧಾನಿ ಪ್ರವಾಸ ಭಾಗ್ಯ

court

Vijayapura ಕ್ಷುಲ್ಲಕ ಕಾರಣಕ್ಕೆ ಮಹಿಳೆ ಹತ್ಯೆ : ಆರೋಪಿಗೆ ಗಲ್ಲು ಶಿಕ್ಷೆ

Vijayapura; ಮದ್ಯಸೇವಿಸಿ ಕಾರು ಚಾಲಕನ ನಿರ್ಲಕ್ಷ್ಯ; ಆಟೋ ಪಲ್ಟಿ

Vijayapura; ಮದ್ಯಸೇವಿಸಿ ಕಾರು ಚಾಲಕನ ನಿರ್ಲಕ್ಷ್ಯ; ಆಟೋ ಪಲ್ಟಿ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

1-sadasd

Punjab ಪಾಕ್ ಡ್ರೋನ್ ಅನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

1-wdsa

Hunsur ಸಾಲ ಬಾಧೆಯಿಂದ ನೇಣಿಗೆ ಶರಣಾದ ವೃದ್ಧ ರೈತ

police

Chikkamagaluru: ಸೇತುವೆ ಬಳಿ ಎರಡು ಗೋವುಗಳ ತಲೆ, ಕಾಲು ಪತ್ತೆ

1-sadas

New Parliament building ಅಧೀನರನ್ನು ಭೇಟಿಯಾದ ಪ್ರಧಾನಿ ಮೋದಿ

SIDDARAMAYYA 1

ಪ್ರವೀಣ್‌ ನೆಟ್ಟಾರು ಪತ್ನಿಯ ಪುನರ್‌ ನೇಮಕಾತಿ: CM ಸಿದ್ದರಾಮಯ್ಯ ಭರವಸೆ