ಕೋಳೂರಲ್ಲಿ ಕಾಮಗಾರಿ ಪರಿಶೀಲನೆ


Team Udayavani, Apr 5, 2022, 5:54 PM IST

17work

ಮುದ್ದೇಬಿಹಾಳ: ತಾಲೂಕಿನ ಕೋಳೂರು ಗ್ರಾಪಂ ವ್ಯಾಪ್ತಿಯ ಕೋಳೂರು ತಾಂಡಾದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ 2021-22ನೇ ಸಾಲಿನ 7 ಕಾಮಗಾರಿಗಳು ಖೊಟ್ಟಿ ಆಗಿರುವ ದೂರಿನ ಕುರಿತು ವಿಜಯಪುರದ ಜಿಲ್ಲಾ ಒಂಬುಡ್ಸ್‌ಮನ್‌ ನೇಮಿಸಿದ ತನಿಖಾಧಿಕಾರಿಗಳ ತಂಡ ಸೋಮವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಾಪಂ ಮಾಜಿ ಸದಸ್ಯ ಪ್ರೇಮಸಿಂಗ್‌ ಚವ್ಹಾಣ ಅವರು 31-8-2021ರಂದು ಲಿಖೀತ ದೂರೊಂದನ್ನು ಒಂಬುಡ್ಸ್‌ಮನ್‌ಗೆ ನೀಡಿ 7 ಕಾಮಗಾರಿಗಳನ್ನು ಗ್ರಾಪಂನ ಅಧ್ಯಕ್ಷರು, ಪಿಡಿಓ, ತಾಂತ್ರಿಕ ಸಹಾಯಕ ಇಂಜಿನೀಯರ್‌ ಸೇರಿಕೊಂಡು ಸಿಸಿ ರಸ್ತೆ, ಚರಂಡಿ, ಆರ್ಚ ಬಾಂದಾರ ನಿರ್ಮಾಣದಲ್ಲಿ ಖೊಟ್ಟಿ ಮಾಡಿ ಅವ್ಯವಹಾರ ನಡೆಸಿದ್ದರ ಕುರಿತು ತನಿಖೆ ಮಾಡುವಂತೆ ಕೋರಿದ್ದರ ಹಿನ್ನೆಲೆಯಲ್ಲಿ ಜಿಲ್ಲಾ ಒಂಬುಡ್ಸ್‌ಮನ್‌ ಬಿ.ಜಿ.ಬಿರಾದಾರ ಅವರು ತನಿಖಾಧಿಕಾರಿಗಳ ತಂಡವೊಂದನ್ನು ನೇಮಿಸಿ ದೂರುದಾರರ ಸಮಕ್ಷಮ ಆಯಾ ಕಾಮಗಾರಿಗಳನ್ನು ಭೌತಿಕವಾಗಿ ಮೌಲ್ಯಮಾಪನ ಮಾಡಿ ಚೆಕ್‌ ಮೆಜರ್‌ವೆುಂಟ್‌ ಹಾಕಿ ಲಾಂಜಿಟ್ಯೂಡ್‌ ಮತ್ತು ಲ್ಯಾಟಿಟ್ಯೂಡ್‌ ವರದಿಯನ್ನು ಸಲ್ಲಿಸಲು ತಿಳಿಸಿದ್ದ ಹಿನ್ನೆಲೆ ತಂಡವು ಆಗಮಿಸಿತ್ತು.

ಕೋಳೂರು ತಾಂಡಾದ ಸುರೇಶ ಜಾನು ಮನೆಯಿಂದ ಮುತ್ತು ರಾಮಚಂದ್ರ ಮನೆಯವರೆಗೆ, ಮಾನಸಿಂಗ್‌ ಮನೆಯಿಂದ ರವಿಕುಮಾರ ರಾಠೊಡ ಮನೆವರೆಗೆ, ಸೋಮಸಿಂಗ್‌ ಮನೆಯಿಂದ ಲಾಲು ಮಾಸ್ತರ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ, ಪಾರವ್ವ ಮಾದರ ಇವರ ಹೊಲದ ಹತ್ತಿರ ಸಿಡಿ ನಿರ್ಮಾಣ, ರಾಜಪಾಲ ಚವ್ಹಾಣ ಇವರ ಹೊಲದ ಹತ್ತಿರ ಇರುವ ಹಳ್ಳಕ್ಕೆ ಮಲ್ಟಿ ಆರ್ಚ್‌ ಚಕ್‌ ಡ್ಯಾಂ ನಿರ್ಮಾಣ, ಶಾಂತು ಇವರ ಹೊಲದ ಹತ್ತಿರ ಹಳ್ಳಕ್ಕೆ ಹೂಳೆತ್ತುವುದು ಮತ್ತು ಮಲ್ಟಿ ಆರ್ಚ್‌ ಚಕ್‌ ಡ್ಯಾಂ ನಿರ್ಮಾಣ, ಸುಬ್ಬಣ್ಣ ಇವರ ಹೊಲದ ಹತ್ತಿರ ಹಳ್ಳಕ್ಕೆ ಮಲ್ಟಿ ಆರ್ಚ್‌ ಚಕ್‌ ಡ್ಯಾಂ ನಿರ್ಮಾಣ ಮತ್ತು ಹೂಳೆತ್ತುವ ಕಾಮಗಾರಿ ಭೋಗಸ್‌ ನಡೆದಿದ್ದು 25 ಲಕ್ಷಕ್ಕೂ ಹೆಚ್ಚು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರುದಾರರು ಆರೋಪಿಸಿದ್ದ ಹಿನ್ನೆಲೆ ಆಯಾ ಸ್ಥಳಗಳಿಗೆ ತೆರಳಿ ತಂಡವು ಮಾಹಿತಿ ದಾಖಲಿಸಿಕೊಂಡಿತು.

ಒಂಬುಡ್ಸ್‌ಮನ್‌ ಪತ್ರದಲ್ಲಿ ತಿಳಿಸಿರುವ ಕಾಮಗಾರಿಗಳ ಪರಿಶೀಲನೆ ಸಂದರ್ಭ ಆರೋಪ ಪಟ್ಟಿಯಲ್ಲಿರುವ ಸ್ಥಳದ ಬದಲು ಬೇರೆ ಸ್ಥಳದಲ್ಲಿ ತಂಡದವರು ಪರಿಶೀಲನೆ ನಡೆಸಲು ಮುಂದಾದಾಗ ತಕರಾರು ತೆಗೆದ ಪ್ರೇಮಸಿಂಗ್‌ ಅವರು ಬಿಲ್‌ ಎತ್ತುವಾಗಿನ ದಾಖಲೆಗಳಲ್ಲಿ ತಿಳಿಸಿರುವ ಮಾಹಿತಿ ಮತ್ತು ಕೊಟ್ಟಿರುವ ವಿಳಾಸಕ್ಕೆ ಅನುಗುಣವಾಗಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.

ಆದರೂ ತಂಡದವರು ನಿಗದಿಪಡಿಸಿದ ಸ್ಥಳ ಬಿಟ್ಟು ಬೇರೆ ಕಡೆಗೆ ನಿರ್ಮಿಸಲಾದ ಕಾಮಗಾರಿಗಳನ್ನು ಪರಿಶೀಲಿಸಿ ಅವುಗಳನ್ನೇ ದಾಖಲಿಸಿಕೊಂಡರು. ಕಾಮಗಾರಿಗಳ ಸ್ಥಳ ಬದಲಾವಣೆ ಆಗಿದೆಯೇ ಹೊರತು ಭೋಗಸ್‌ ಆಗಿದೆಯೋ ಇಲ್ಲವೋ ಅನ್ನೋದನ್ನು ಹೇಳಲು ಸಧ್ಯಕ್ಕೆ ಸಾಧ್ಯವಿಲ್ಲ ಅನ್ನೋ ಅಭಿಪ್ರಾಯ ತಂಡದವರದಾಗಿತ್ತು. ಇದನ್ನು ಆಕ್ಷೇಪಿಸಿದ ಪ್ರೇಮಸಿಂಗ್‌ ಅವರು ದೂರಿನಲ್ಲಿ ಕೊಟ್ಟಿರುವ ಕಾಮಗಾರಿ ಮಾಹಿತಿ ಅನ್ವಯವೇ ಪರಿಶೀಲನೆ ನಡೆಸಿ ವರದಿ ತಯಾರಿಸಬೇಕು. ಇಲ್ಲವಾದಲ್ಲಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ತಂಡದ ಮುಖ್ಯಸ್ಥ ಡಿಕ್ಯೂಎಂ ಮನೋಹರ ಇನಾಮದಾರ, ಪಿಡಿಓ ನಿರ್ಮಲಾ ತೋಟದ ಮತ್ತಿತರರು ಇದ್ದರು.

ಒಂಬುಡ್ಸ್‌ಮನ್‌ ಅವರು ನಮ್ಮ ದೂರನ್ನು ಆಲಿಸಲು ತಮ್ಮ ಕಚೇರಿಯಲ್ಲಿ ಹಿಯರಿಂಗ್‌ ಇಟ್ಟಾಗ ಸಂಬಂಧಿಸಿದ ಅಧಿಕಾರಿಗಳು ಹಿಯರಿಂಗ್‌ಗೆ ಆಗಮಿಸದೆ ನುಣುಚಿಕೊಂಡಿದ್ದಾರೆ. ಇದು ಭೋಗಸ್‌ ಕಾಮಕಾರಿ ನಡೆಸಿದ್ದಕ್ಕೆ ಪುಷ್ಟಿ ನೀಡುತ್ತದೆ. ಒಂಬುಡ್ಸ್‌ಮನ್‌ರವರ ಸೂಚನೆ ಅನ್ವಯ ನಿಗದಿತ ಸ್ಥಳದಲ್ಲೇ ಕಾಮಗಾರಿಗಳ ಮೌಲ್ಯಮಾಪನ, ಚೆಕ್‌ ಮೆಜರ್‌ವೆುಂಟ್‌ ದಾಖಲಿಸಿಕೊಳ್ಳಬೇಕಿತ್ತು. ಆದರೆ ತಂಡದವರು ಇದನ್ನು ಪಾಲಿಸಿಲ್ಲ. -ಪ್ರೇಮಸಿಂಗ್‌ ಚವ್ಹಾಣ, ತಾಪಂ ಮಾಜಿ ಸದಸ್ಯ, ದೂರುದಾರ

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.