ಸಂತ್ರಸ್ತರ ಸಮಸ್ಯೆ ಆಲಿಸಿದ ಜಿಪಂ ಅಧ್ಯಕ್ಷೆ
Team Udayavani, Oct 20, 2020, 6:37 PM IST
ವಿಜಯಪುರ: ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಿಗೆ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸೋಮವಾರ ಭೇಟಿ ನೀಡಿದ್ದು ಸಂತ್ರಸ್ತರ ಸಮಸ್ಯೆ ಆಲಿಸಿದರು.
ಸಿಂದಗಿ ತಾಲೂಕು ದೇವಣಗಾಂವ ಜಿಪಂ ಸದಸ್ಯೆ ವಿಜಯಲಕ್ಷ್ಮೀ ನಾಗೂರ ಅವರೊಂದಿಗೆ ಭೀಮಾ ತೀರದ ಕುಮಸಗಿ, ದೇವಣಗಾಂವ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದಿಂದ ಆಗಿರುವ ದುಸ್ಥಿತಿ ಅವಲೋಕಿಸಿ ಕಾಳಜಿ ಕೇಂದ್ರಕ್ಕೆಭೇಟಿ ನೀಡಿದರು.
ಈ ಹಂತದಲ್ಲಿ ಗೋಳು ತೆರೆದಿಟ್ಟ ಸಂತ್ರಸ್ತರು, ಭೀಮಾ ನದಿಯಲ್ಲಿ ಪ್ರತಿ ವರ್ಷ ಪ್ರವಾಹ ಇದ್ದೇಇದೆ. ಬ್ಯಾರೇಜು ನಿರ್ಮಿಸಿದ ಬಳಿಕ ಪ್ರವಾಹ ಪರಿಸ್ಥಿತಿ ಹೆಚ್ಚುತ್ತಲೇ ಇದೆ. ಪ್ರತಿ ಮಳೆಗಾಲದಲ್ಲಿ, ವಾಯುಭಾರ ಕುಸಿತದ ಸಂದರ್ಭದಲ್ಲಿ ನದಿ ತೀರದ ಪ್ರತಿ ರೈತರು ಬೆಳೆ ಕಳೆದುಕೊಂಡುಲಕ್ಷಾಂತರ ರೂ. ನಷ್ಟ ಅನುಭವಿಸುತ್ತಾರೆ. ಸಮೀಕ್ಷೆ ನಡೆಸಿದರೂ ಬಹುತೇಕರಿಗೆ ಪರಿಹಾರ ನೀಡುವುದಿಲ್ಲ ಎಂದು ದೂರಿದರು.
ಅಲ್ಲದೇ ಪ್ರವಾಹ ನೀರು ಮನೆಗಳನ್ನು ಅಭದ್ರಗೊಳಿಸುತ್ತದೆ. ಮಣ್ಣಿನ ಮನೆಗಳು ಪ್ರವಾಹಕ್ಕೆ ನೆನೆದು ಬೀಳುವ ಹಂತ ತಲುಪುತ್ತವೆ. ಹೀಗಾಗಿ ಪ್ರವಾಹ ಸಂದರ್ಭದಲ್ಲಿ ಕಾಳಜಿ ಕೇಂದ್ರ ಹೆಸರಿನಲ್ಲಿ ನಾಲ್ಕಾರು ದಿನ ಗಂಜಿ ಹಾಕುವ ಬದಲು ಎತ್ತರದ ಪ್ರದೇಶದಲ್ಲಿ ಪುನರ್ವಸತಿ ಗ್ರಾಮ ನಿರ್ಮಿಸಿ ಕೊಡಿ ಎಂದು ಆಗ್ರಹಿಸಿದರು.
ಪ್ರವಾಹ ಬಾಧಿತ ಸಂತ್ರಸ್ತರ ಸಮಸ್ಯೆ ಆಲಿಸಿ ಪ್ರತಿಕ್ರಿಯಿಸಿದ ಸುಜಾತಾ ಕಳ್ಳಿಮನಿ, ನಿಮ್ಮ ಸಂಕಷ್ಟದ ನೋವು ಮನವರಿಕೆ ಆಗಿದೆ. ನಿಮ್ಮ ನೋವಿನ ಭಾವನೆಗಳನ್ನು ಸರ್ಕಾರದ ಗಮನಕ್ಕೆ ತಂದು ಬೆಳೆ ಹಾನಿ ಹಾಗೂ ಮನೆಗಳ ಹಾನಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕುಮಸಗಿ ಹಾಗೂ ದೇವಣಗಾಂವ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ಜಿಪಂ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳಿಮನಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಉಮರಜಗೆ ಕಳ್ಳಿಮನಿ ಭೇಟಿ :
ಚಡಚಣ: ನಿವರಗಿ, ದಸೂರ, ಉಮರಜ ಗ್ರಾಮಗಳಿಗೆ ಜಿಪಂ ಅಧ್ಯಕ್ಷೆಸುಜಾತಾ ಕಳ್ಳಿಮನಿ ಹಾಗೂ ಮಾಜಿ ಶಾಸಕ ವಿಠuಲ ಕಟಕದೋಂಡ ಭೇಟಿನೀಡಿ ಪ್ರವಾಹ ಪರಸ್ಥಿತಿ ಅವಲೋಕಿಸಿ,ಸಂತ್ರಸ್ತರ ಅಳಲು ಆಲಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಜಾತಾ ಕಳ್ಳಿಮನಿ, ಸಹಸ್ರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಜಲಾವೃತವಾಗಿದ್ದುನೂರಾರು ಮನೆಗಳು ನೆಲ ಸಮಗೊಂಡಿವೆ. ಈ ಬಗ್ಗೆ ಮಾಹಿತಿ ಪಡೆದು, ತಕ್ಷಣ ಪರಿಹಾರ ಹಾಗೂಅಗತ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಲಿದೆ ಎಂದರು. ಸಂತ್ರಸ್ತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಕೂಗು ಎಲ್ಲೆಡೆ ಕೇಳಿ ಬಂದಿದೆ. ಈ ಬಗ್ಗೆ ಸಿಇಒ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ವಿಠuಲ ಕಟಕದೋಂಡ ಮಾತನಾಡಿ, ಕಳೆದಸಾಲಿನ ಪ್ರವಾಹಕ್ಕೆ ಸಿಲುಕಿ ನಷ್ಟಅನುಭವಿಸಿದ ರೈತರ ಬಾಕಿ ಪರಿಹಾರಜತೆಗೆ ಈ ಬಾರಿಯ ಪ್ರವಾಹ ನಷ್ಟಕ್ಕೂತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಭೀಮನಗೌಡಬಿರಾದಾರ, ಸುರೇಶ ಗೊಣಸಗಿ,ಸಾಹೇಬಗೌಡ ಬಿರಾದಾರ, ಶಿವಾಜಿ ವಾಲೀಕಾರ, ರವಿ ಬಿರಾದಾರ, ತುಕಾರಾಮ ಅಂಬಿಗೇರ, ಯಲ್ಲಣ್ಣ ಗುಡ್ಡೊಡಗಿ, ಅಮಸಿದ್ದ ಬಿಜ್ಜರಗಿ, ಮುಸ್ತಾಕ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
MUST WATCH
ಹೊಸ ಸೇರ್ಪಡೆ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
Vote ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ