ಆರ್ಥಿಕವಾಗಿ ಸಶಕ್ತರಾದರೆ ಜಾತಿ ವಿನಾಶ
Team Udayavani, Mar 24, 2019, 12:38 PM IST
ಬೆಂಗಳೂರು: ಎಲ್ಲ ಸಮುದಾಯಗಳೂ ಆರ್ಥಿಕವಾಗಿ ಸಬಲರಾದಾಗ ಜಾತಿಯ ವಿನಾಶ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ನಗರದ ಗಾಂಧಿ ಭವನದಲ್ಲಿ ಡಾ.ರಾಮಮನೋಹರ ಲೋಹಿಯಾ ಸಮತಾ ವಿಶ್ವವಿದ್ಯಾಲಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಗಾಂಧಿ ಅಧ್ಯಯನ ಕೇಂದ್ರ ವತಿಯಿಂದ ಆಯೋಜಿಸಿದ್ದ “ಲೋಹಿಯಾ ದಿನಾಚರಣೆ ಹಾಗೂ ಇಂದಿಗೂ ಬೇಕಾದ ಲೋಹಿಯಾ ಪುಸ್ತಕ ಬಿಡುಗಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ಚಲನೆಯಿಲ್ಲದ ವ್ಯವಸ್ಥೆಯಾಗಿದೆ. ಮುಖ್ಯವಾಗಿ ದಲಿತ, ಹಿಂದುಳಿದ ಹಾಗೂ ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಮಾತ್ರ ಈ ವ್ಯವಸ್ಥೆ ನಾಶವಾಗುತ್ತದೆ ಎಂದರು.
ರಾಮಮನೋಹರ ಲೋಹಿಯಾ ತಮ್ಮ ಬದುಕಿನಲ್ಲಿ ದೇಶಕ್ಕೆ ಬೇಕಾದ ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಸಿದ್ಧಾಂತಗಳನ್ನು ಜನರ ಮುಂದಿಟ್ಟಿದ್ದಾರೆ. ಜಾತಿ, ವರ್ಗ, ಲಿಂಗ ತಾರತಮ್ಯ, ರೈತರು, ಮಹಿಳೆಯರು ಹೀಗೆ ಎಲ್ಲ ವಿಧಾನಗಳಲ್ಲಿಯೂ ಸಮಗ್ರವಾದ, ಆಳವಾದ ಅಧ್ಯಯನ ನಡೆಸಿ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.
ದೇಶದಲ್ಲಿ ಕಾಡುತ್ತಿರುವ ಹಲವು ಸಮಸ್ಯೆಗಳ ನಿವಾರಣೆಗೆ ತಮ್ಮದೇ ಆದ ಸಿದ್ಧಾಂತಗಳ ಮೂಲಕ ಪರಿಹಾರ ಕಂಡುಕೊಳ್ಳಲು ನೆರವಾದ ಅಪರೂಪದ ರಾಜಕಾರಣಿ. ಲೋಹಿಯಾ ಚಿಂತನೆಗಳು ಇಂದಿನ ಸರಕಾರದ ಆಡಳಿತಕ್ಕೂ ಪೂರ್ವಕವಾಗಿದೆ ಎಂದು ಹೇಳಿದರು.
ಇಂದು ಕೆಳವರ್ಗದವರಂತೆ ಮೇಲ್ವರ್ಗದಲ್ಲಿನ ಹೆಣ್ಣು ಮಕ್ಕಳೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರಿಗೆ ಸಮಾನವಾದ ಮೀಸಲಾತಿ ಅಗತ್ಯವಿದೆ. ಪಂಚಾಯತ್ ಚುನಾವಣೆಯಲ್ಲಿ ಶೇ.50 ರಷ್ಟು ಮೀಸಲಾತಿಯಿದೆ. ಅದೇ ರೀತಿ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮೀಸಲಾತಿ ನೀಡುವ ಸಂಬಂಧ 1996-97 ರಲ್ಲಿ ಕಾಯ್ದೆ ಮಾಡಿದ್ದರೂ, ಅದು ಜಾರಿಯಾಗದಿರುವುದು ದುರಂತ ಎಂದರು.
ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಬರಹಗಾರ ನಟರಾಜ್ ಹುಳಿಯಾರ್, ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್, ನೆಲಸಿರಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಬಸವರಾಜು, ಸಮತಾ ವಿದ್ಯಾಲಯ ಅಧ್ಯಕ್ಷ ಪ್ರೊ. ಕೆ. ದೊರೈರಾಜು ಮತ್ತಿತರರು ಉಪಸ್ಥಿತರಿದ್ದರು.
ಅಧಿಕಾರಿಗಳ ವಿರುದ್ಧ ಹೋರಾಟಕ್ಕಿಳಿಯುವೆ: ಭೂ ಸುಧಾರಣಾ ಕಾಯ್ದೆ ಸರಿಯಾಗಿ ಜಾರಿಯಾಗಿಲ್ಲ. ಇವತ್ತಿಗೂ ರೈತರಿಗೆ ಭೂಮಿ ಪಹಣಿ ಲಭ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಈ ಬಗ್ಗೆ ಸ್ಪಷ್ಟತೆ ಇಲ್ಲ. ಈ ಹಿಂದೆ ನಾನು ಮಂತ್ರಿಯಾಗಿದ್ದ ವೇಳೆ ಕಡ್ಡಾಯ ಕ್ರಮವಹಿಸಿದ್ದೆ. ಆದರೆ, ಇಂದು ವ್ಯವಸ್ಥೆ ಅದಗೆಟ್ಟಿದೆ. ಭಾಷಣದಿಂದ ಏನೂ ಮಾಡೋಕೆ ಆಗಲ್ಲ ಎಂದ ಅವರು ಹೋರಾಟವೇ ಎಲ್ಲದಕ್ಕೂ ಪರಿಹಾರವಾಗಲಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್