ಲೈವ್ಬ್ಯಾಂಡ್ ಮೇಲೆ ಸಿಸಿಬಿ ದಾಳಿ: 17 ಮಂದಿ ಸೆರೆ
Team Udayavani, Mar 24, 2019, 12:37 PM IST
ಬೆಂಗಳೂರು: ವೈಯಾಲಿಕಾವಲ್ನ ಪ್ಯಾಲೇಸ್ ಗುಟ್ಟಹಳ್ಳಿ ಸಮೀಪದ ನಾಯಕ ಸರ್ಕಲ್ನಲ್ಲಿರುವ ಶ್ರೀನಿವಾಸ ಬಾರ್ ಅಂಡ್ ರೆಸ್ಟೋರೆಂಟ್ ಹೆಸರಿನಲ್ಲಿ ನಡೆಯುತ್ತಿದ್ದ ಲೈವ್ ಬ್ಯಾಂಡ್ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 17 ಜನರನ್ನು ಬಂಧಿಸಿದ್ದಾರೆ.
ಕಾನೂನು ಬಾಹಿರವಾಗಿ ಲೈವ್ಬ್ಯಾಂಡ್ ನಡೆಸುತ್ತಿದ್ದು ಯುವತಿಯರ ಅಶ್ಲೀಲ ನೃತ್ಯ ಮಾಡಿಸುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ, ದೆಹಲಿ ಹಾಗೂ ಪಂಜಾಬ್ ಮೂಲದ 10 ಮಂದಿ ಯುವತಿಯರನ್ನು ರಕ್ಷಿಸಲಾಗಿದೆ.
ಬಾರ್ ಮ್ಯಾನೇಜರ್ಗಳಾದ ಸಂತೋಷ್,ಅಭಿಷೇಕ್, ಉಮೇಶ್, ರಮೇಶ್ ಹಾಗೂ 17 ಮಂದಿ ಗ್ರಾಹಕರನ್ನು ಬಂಧಿಸಿದ್ದು, 1.30 ಲಕ್ಷ ರೂ. ನಗದು ಹಾಗೂ 17 ಮೊಬೈಲ್ ಜಪ್ತಿಮಾಡಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.