ವಿದ್ಯಾರ್ಥಿನಿಗೆ ಶಾಕ್‌ ನೀಡಿದ ಪರೀಕ್ಷಾ ಮಂಡಳಿ!

ಎಸ್ಸೆಸ್ಸೆಲ್ಸಿ ಉತ್ತರಪತ್ರಿಕೆ ನಕಲು ಪ್ರತಿ ಕೇಳಿದ್ದಕ್ಕೆ ಬೇರೆಯವರ ಪ್ರತಿ ಕೊಟ್ಟ ಪ್ರೌಢಶಿಕ್ಷಣ ಮಂಡಳಿ

Team Udayavani, May 13, 2019, 10:22 AM IST

13-MAY-3

ಚಳ್ಳಕೆರೆ: ಉತ್ತರಪತ್ರಿಕೆ ಪ್ರತಿಯೊಂದಿಗೆ ದಿವ್ಯ ಹಾಗೂ ಆಕೆಯ ತಂದೆ ಕೆ. ಗೋಪಿನಾಥ.

ಚಳ್ಳಕೆರೆ: ಎಸ್ಸೆಸ್ಸೆಲ್ಸಿ ಉತ್ತರಪತ್ರಿಕೆ ಪ್ರತಿ ಕೇಳಿದ ವಿದ್ಯಾರ್ಥಿನಿಗೆ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಬೇರೆಯವರ ಉತ್ತರಪತ್ರಿಕೆ ಪ್ರತಿ ಕಳುಹಿಸಿದ ಸಂಗತಿ ಬೆಳಕಿಗೆ ಬಂದಿದೆ.

ಗಣಿತದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಬೇಸರಗೊಂಡ ವಿದ್ಯಾರ್ಥಿನಿ ಉತ್ತರಪತ್ರಿಕೆ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದಳು. ಆದರೆ ಪ್ರೌಢಶಿಕ್ಷಣ ಮಂಡಳಿ ಕಳುಹಿಸಿದ ಉತ್ತರಪತ್ರಿಕೆ ಪ್ರತಿ ನೋಡಿ ವಿದ್ಯಾರ್ಥಿನಿಗೆ ಶಾಕ್‌. ಏಕೆಂದರೆ ಮೊದಲ ಪುಟ ಬಿಟ್ಟರೆ ಉಳಿದ ಪುಟಗಳು ಬೇರೆ ಯಾರಧ್ದೋ ಆಗಿದ್ದವು.

ಚಳ್ಳಕೆರೆ ನಗರದ ವಾರಿಯರ್ ಪ್ರೌಢಶಾಲೆಯ ವಿದ್ಯಾರ್ಥಿನಿ ಜಿ.ಕೆ. ದಿವ್ಯ, ಗಣಿತ ವಿಷಯದಲ್ಲಿ 100ಕ್ಕೆ 80 ಅಂಕ ಬರಬಹುದು ಎಂದು ನಿರೀಕ್ಷಿಸಿದ್ದಳು. ಆದರೆ ಬಂದಿದ್ದು ಕೇವಲ 48 ಅಂಕ. ಇದರಿಂದ ಕಂಗಾಲಾದ ದಿವ್ಯ, ಕನಿಷ್ಠ ಎಂದರೂ 80 ಅಂಕ ಬರಬೇಕಿತ್ತು. ಆದರೆ ಕಡಿಮೆ ಅಂಕ ಬಂದಿದೆ ಎಂದು ತನ್ನ ತಂದೆ ಕೆ. ಗೋಪಿನಾಥ ಅವರಿಗೆ ತಿಳಿಸಿದ್ದಳು. ಅವರು ಉತ್ತರಪತ್ರಿಕೆಯ ನಕಲು ಪ್ರತಿಯನ್ನು ತರಿಸಿ ನೋಡಿದರು. ಮಂಡಳಿಯು ಮೊದಲ ಪುಟವೊಂದನ್ನು ಬಿಟ್ಟರೆ ಉಳಿದ ಪುಟಗಳನ್ನು ಬೇರೆ ವಿದ್ಯಾರ್ಥಿಯ ಉತ್ತರಪತ್ರಿಕೆಯ ನಕಲು ಪ್ರತಿ ಕಳುಹಿಸಿತ್ತು. ಅಲ್ಲದೆ ಯಾವುದೇ ಅಂಕಗಳನ್ನು ನೀಡದೆ ಸಹಿಯನ್ನೂ ಮಾಡದೆ ಬೇಕಾಬಿಟ್ಟಿಯಾಗಿ ಉತ್ತರಪತ್ರಿಕೆಯ ನಕಲನ್ನು ಕಳುಹಿಸಿದೆ. ಈ ಮೂಲಕ ತನಗೆ ಹೆಚ್ಚು ಅಂಕ ಬರಬಹುದೆಂಬ ನಿರೀಕ್ಷೆ ಹೊಂದಿದ್ದ ದಿವ್ಯಳ ಆಸೆಗೆ ತಣ್ಣೀರೆರಚಿದೆ.

ಮೊದಲ ಪುಟ ಬಿಟ್ಟರೆ ಮತ್ತೂಂದು ಉತ್ತರಪತ್ರಿಕೆಯಲ್ಲಿ ಬೇರೆ ವಿದ್ಯಾರ್ಥಿಯ ಪ್ರವೇಶ ಪತ್ರದ ಸಂಖ್ಯೆ ನಮೂದಾಗಿದೆ. ಇನ್ನುಳಿದ ಹತ್ತಕ್ಕೂ ಹೆಚ್ಚು ಪುಟಗಳಲ್ಲಿನ ಉತ್ತರ ಬೇರೆಯವರ ಅಕ್ಷರದಲ್ಲಿತ್ತು.

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ಬೇಜವಾಬ್ದಾರಿತನಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೆ. ಗೋಪಿನಾಥ, ನನ್ನ ಮಗಳ ಉತ್ತರಪತ್ರಿಕೆಯ ಮೊದಲ ಪುಟದಲ್ಲಿ ಮಾತ್ರ ಅವಳ ಪ್ರವೇಶ ಪತ್ರದ ಸಂಖ್ಯೆ ಇದೆ. ಬೇರೆ ಉತ್ತರಪತ್ರಿಕೆಯಲ್ಲಿ ಮತ್ತೂಬ್ಬರ ಪ್ರವೇಶ ಪತ್ರದ ಸಂಖ್ಯೆಯನ್ನು ನಮೂದು ಮಾಡಲಾಗಿದೆ. ದಿವ್ಯಳ ಪ್ರವೇಶ ಪತ್ರದ ಸಂಖ್ಯೆ 20190106242 ಇದ್ದು, ಉತ್ತರಪತ್ರಿಕೆ ನಕಲು ಕಳಿಸುವಾಗ ಮೊದಲ ಪುಟದಲ್ಲಿ ಮಾತ್ರ ಈ ಸಂಖ್ಯೆ ಇದೆ. ಮತ್ತೂಂದು ಉತ್ತರಪತ್ರಿಕೆಯ ಪ್ರವೇಶ ಪತ್ರದ ಸಂಖ್ಯೆ 20190171271 ಆಗಿದೆ. ಪ್ರೌಢಶಿಕ್ಷಣ ಮಂಡಳಿ ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮಂಡಳಿ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.