2ನೇ ಅಲೆ ಮಧ್ಯೆ ಹುಂಡಿಯಲ್ಲಿ 45 ದಿನದಲ್ಲಿ 2.33 ಕೋಟಿ ರೂ.
75 ದಿನಗಳ ಕಾಲ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
Team Udayavani, Jul 24, 2021, 6:40 PM IST
ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಜರುಗಿದ ಹುಂಡಿ ಎಣಿಕೆಯಲ್ಲಿ 2.33 ಕೋಟಿ ರೂ. ನಗದು, 155 ಗ್ರಾಂ ಚಿನ್ನ ಮತ್ತು 2 ಕೆ.ಜಿ.ಗೂ ಅಧಿಕ ಬೆಳ್ಳಿ ಸಂಗ್ರಹವಾಗಿದೆ. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ಗುಂಡಿ ಎಣಿಕೆ ಕಾರ್ಯವು ತಡರಾತ್ರಿ 10 ಗಂಟೆಯ ವರೆಗೂ ಜರುಗಿತು.
ಹುಂಡಿ ಎಣಿಕೆ ಪ್ರಕ್ರಿಯೆಯು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ ಸಿಸಿ ಟಿವಿ ಕಣ್ಗಾವಲಿನಲ್ಲಿ ಜರುಗಿತು. ಈ ಬಾರಿಯ ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ 45 ದಿನಗಳ ಅವಧಿಯಲ್ಲಿ 2,33,57,028 (ಎರಡು ಕೋಟಿ ಮೂವತ್ತಮೂರು ಲಕ್ಷದ ಐವತ್ತೇಳು ಸಾವಿರದ ಇಪ್ಪತ್ತೆಂಟು) ರೂ. ನಗದು, 155ಗ್ರಾಂ ಚಿನ್ನ ಮತ್ತು 2 ಕೆ.ಜಿ 200 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿಜಯವಿಭವಸ್ವಾಮಿ, ಉಪ ಕಾರ್ಯದರ್ಶಿ ಬಸವರಾಜು, ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿ, ಬ್ಯಾಂಕ್ ವ್ಯವಸ್ಥಾಪಕ ಮತ್ತು ಸಿಬ್ಬಂದಿ, ಮ.ಬೆಟ್ಟ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಲಾಕ್ಡೌನ್ ನಡುವೆ ಉತ್ತಮ ಆದಾಯ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾರ್ಚ್ 25 ರಂದು ಹುಂಡಿ ಎಣಿಕೆ ಪ್ರಕ್ರಿಯೆ ಅಂತಿಮವಾಗಿ ಜರುಗಿತ್ತು. 119 ದಿನಗಳ ಅಂತರದಲ್ಲಿ ಜರುಗಿದ ಹುಂಡಿ ಎಣಿಕೆಯು ಇದಾಗಿದ್ದು, 75 ದಿನಗಳ ಕಾಲ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಕೊರೋನಾ 2ನೇ ಅಲೆ ತಗ್ಗಿದ ಬಳಿಕ ಜುಲೈ 5ರಿಂದ ದೇವಾಲಯಗಳಿಗೆ ಭಕ್ತಾದಿಗಳ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ವಾರಾಂತ್ಯದಲ್ಲಿ ಮತ್ತು ಸರ್ಕಾರಿ ರಜಾದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಿನ್ನೆಲೆ 2 ಕೋಟಿಗೂ ಅಧಿಕ ನಗದು ಸಂಗ್ರಹವಾಗಿದೆ.
ಬೆಟ್ಟದಲ್ಲಿ ದಾಸೋಹ ಸೇವೆ ಆರಂಭ
ಮಲೆ ಮಹದೇಶ್ವರ ಬೆಟ್ಟದಲ್ಲಿ2ನೇ ಅಲೆ ಹಿನ್ನೆಲೆ ಭಕ್ತಾದಿಗಳಿಗೆ ನಿರ್ಬಂಧಿಸಲಾಗಿದ್ದ ದಾಸೋಹ ಸೇವೆ ಹಾಗೂ ಡಾರ್ಮಿಟರಿ ಕಟ್ಟಡಗಳ ಬಳಕೆಗೆ ಅನುಮತಿ ನೀಡಲಾಗಿದೆ. ಮಾದಪ್ಪನ ಬೆಟ್ಟದಲ್ಲಿ ಶುಕ್ರವಾರದಿಂದಲೇ ದಾಸೋಹ ಸೇವೆ ಆರಂಭವಾಗಿದ್ದು, ಶ್ರೀಕ್ಷೇತ್ರದಲ್ಲಿ ತಂಗುವ ಭಕ್ತಾದಿಗಳಿಗೆ ಡಾರ್ಮಿಟರಿ ಕಟ್ಟಡವನ್ನೂ ಬಾಡಿಗೆಗೆ ನೀಡಲು ಅವಕಾಶಕಲ್ಪಿಸಲಾಗಿದೆ. ಅಲ್ಲದೆ ಡಾರ್ಮಿಟರಿಯಲ್ಲಿ10 ಜನಕ್ಕೆ ಮಾತ್ರ ಅವಕಾಶಕಲ್ಪಿಸಲಾಗಿದೆ. ಅಲ್ಲದೆ ಪ್ರಾಧಿಕಾರದ5 ಬಸ್ಗಳ ಸಂಚಾರಕ್ಕೆ ಆಗಸ್ಟ್1ರಿಂದ ಅವಕಾಶಕಲ್ಪಿಸಲಾಗಿದೆ.ಇನ್ನುಳಿದಂತೆ ಲಾಡು ಪ್ರಸಾದ ವಿತರಣೆ, ತೀರ್ಥ ಪ್ರಸಾದ, ಉತ್ಸವ ಮತ್ತು ರಥೋತ್ಸವ ಸೇವೆಗಳಿಗೆ ಇದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ