ಬಿಆರ್‌ಟಿಯಲ್ಲಿ ವಿಭಿನ್ನ ಪ್ರಭೇದದ ಕುಬ್ಜ ಹಲ್ಲಿ ಪತ್ತೆ! ಕೇವಲ 2.57 ಸೆಂ.ಮೀ

ಬಿಳಿಗಿರಿರಂಗನಬೆಟ್ಟದ ಕಾಡಿನಲ್ಲಿ ಮಾತ್ರ ಕಂಡು ಬರುವ ಪ್ರಬೇಧವಾಗಿದೆ

Team Udayavani, Sep 15, 2022, 5:55 PM IST

ಬಿಆರ್‌ಟಿಯಲ್ಲಿ ವಿಭಿನ್ನ ಪ್ರಭೇದದ ಕುಬ್ಜ ಹಲ್ಲಿ ಪತ್ತೆ! ಕೇವಲ 2.57 ಸೆಂ.ಮೀ

ಯಳಂದೂರು: ಇಡೀ ಏಷ್ಯಾಖಂಡದಲ್ಲೇ ಹೆಜ್ಜೆ ಹೆಜ್ಜೆಗೂ ವಿಭಿನ್ನ ಕಾಡು ಪ್ರಬೇಧವನ್ನು ಹೊಂದಿರುವ ಪೂರ್ವ ಹಾಗೂ ಪಶ್ಚಿಮಘಟ್ಟಗಳ ಸಂಗಮ ಸ್ಥಾನವಾಗಿರುವ ಬಿಆರ್‌ಟಿ (ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ) ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಿಶಿಷ್ಟ ಪ್ರಭೇದದ ಹಲ್ಲಿಯೊಂದು ಪತ್ತೆಯಾಗಿದೆ.

ಬೆಟ್ಟದಲ್ಲಿರುವ ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕೋಲಜಿ ಅಂಡ್‌ ದಿ ಎನ್ವಿರಾನ್ಮೆಂಟ್‌(ಏಟ್ರೀ) ಸಂಸ್ಥೆಯಲ್ಲಿ ಸಂಶೋಧಕರಾಗಿ ಕೆಲಸ ನಿರ್ವಹಿಸುತ್ತಿದ್ದ
ಡಾ.ಎನ್‌.ಎ. ಅರವಿಂದ್‌ ಮತ್ತು ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್‌ ಈ ಹಲ್ಲಿ ಪ್ರಬೇಧವನ್ನು ಪತ್ತೆ ಹಚ್ಚಿದ್ದಾರೆ. ಈ ಹಲ್ಲಿಗೆ ಕುಬ್ಜ ಹಲ್ಲಿ ಎಂದು ಗುರುತಿಸಲಾಗಿದ್ದು ಇವರ ಉದ್ದ ಕೇವಲ 2.57 ಸೆಂ.ಮೀ ಮಾತ್ರ ಇದೆ.

ಇದರಲ್ಲಿ ಗಂಡು ಹಲ್ಲಿಯ ದೇಹ ಕಂದು ಬಣ್ಣದಿಂದ ಕೂಡಿದ್ದು, ಬಾಲ ಕಪ್ಪುಬಣ್ಣದ್ದಾಗಿದೆ. ಆದರೆ ಹೆಣ್ಣು ಹಲ್ಲಿ ಪೂರ್ಣವಾಗಿ ಕಂದು ಬಣ್ಣದಿಂದ ಕೂಡಿದೆ. ನಿವೃತ್ತ ಪ್ರಾಧ್ಯಾಪಕ ಡಾ. ಉಮಾಶಂಕರ್‌ ಅವರ ಹೆಸರನ್ನು ಈ ಹಲ್ಲಿಗೆ ಇಡಲಾಗಿದ್ದು “ಉಮಾಶಂಕರ್‌ ಕುಬ್ಜ ಹಲ್ಲಿ” ((umashankar’s Dawrf Gecko) ಎಂದು ಇದನ್ನು ಕರೆಯಲಾಗಿದೆ.

ಇದು ರಾತ್ರಿ ವೇಳೆಯಲ್ಲಿ ಹೆಚ್ಚು ಕಾಣಬರುವ ಪ್ರಭೇದವಾಗಿದೆ. ಕಲ್ಲು, ಬಂಡೆಗಳ ಸಂದಿಗಳಲ್ಲಿ ಇವು ಹೆಚ್ಚಾಗಿ ಕಂಡುಬಂದಿದೆ. ಎರಡಕ್ಕಿಂತ ಹೆಚ್ಚು ಹಲ್ಲಿಗಳು ಒಂದೇ ಕಡೆ ಮೊಟ್ಟೆ ಇಡಲಿದ್ದು ಈ ಹಲ್ಲಿಯು ಸಾಮಾನ್ಯ ಹಲ್ಲಿಗಿಂತಲೂ ಆಕಾರದಲ್ಲಿ ಚಿಕ್ಕ ಗಾತ್ರವನ್ನು ಹೊಂದಿದ್ದು ಇದು ಕೇವಲ ಬಿಳಿಗಿರಿರಂಗನಬೆಟ್ಟದ ಕಾಡಿನಲ್ಲಿ ಮಾತ್ರ ಕಂಡು ಬರುವ ಪ್ರಬೇಧವಾಗಿದೆ ಎಂದು ಅಧ್ಯಯನದಲ್ಲಿ ಸ್ಪಷ್ಟಪಡಿಸಲಾಗಿದೆ.

ಚರ್ಚೆ ಹೊತ್ತಲ್ಲಿ ಗಮನ ಸೆಳೆದ ಹಲ್ಲಿ: ಬಿಳಿಗಿರಿ ರಂಗನಬೆಟ್ಟದಲ್ಲಿರುವ ಏಟ್ರಿಯ ಕಚೇರಿ ಯಲ್ಲಿ ಚರ್ಚೆ ನಡೆಸುತ್ತಿರುವಾಗ ಒಂದು ಹಲ್ಲಿ ಇಲ್ಲಿ ಕಾಣಿಸಿತು. ಆದರೆ ಇದರ ಆಕಾರ ವಿಚಿತ್ರವಾಗಿದೆ. ಇದು ಅತ್ಯಂತ ಚಿಕ್ಕಗಾತ್ರ ದ್ದಾಗಿದೆ ಎಂದು ಇದನ್ನು ಪರಿಶೀಲಿಸಲಾಯಿತು. ನಂತರ ಇದು ಸಾಮಾನ್ಯ ವಾದ ಹಲ್ಲಿಯಲ್ಲ ಎಂದು ಅನುಮಾನ ಬಂದು ಹೊಸ ಪ್ರಬೇಧ ಇರಬಹುದು ಎಂದು ಇದನ್ನು ಅರಣ್ಯ ಇಲಾಖೆಯ ಅನುಮತಿ ಪಡೆದು ಉಮಾ ಶಂಕರ್‌ ಮತ್ತು ಸೂರ್ಯನಾರಾಯಣನ್‌ ಈ ಬಗ್ಗೆ ಸಂಶೋಧನೆ ಕೈಗೊಂಡು, ಇದರ ದೇಹ ರಚನೆ, ಚಲನೆ, ಇರುವಿಕೆ ಬಗ್ಗೆ ಮಾಹಿತಿ ಕಲೆಹಾಕಿ ಎಲ್ಲಾ ಪರೀಕ್ಷೆ ನಡೆಸಿ ಇದೊಂದು ಹೊಸ ಹಲ್ಲಿಯ ಪ್ರಬೇಧ ಎಂದು ಸಾಬೀತು ಪಡಿಸಿದ್ದಾರೆ. ಈ ಸಂಬಂಧ ಅಂತಾರಾಷ್ಟ್ರೀಯ ನಿಯತಕಾಲಿಕೆ ವಟೇಬ್ರೇಟ್‌ ಝೂಲಾಜಿಯಲ್ಲಿ ಲೇಖನ ಪ್ರಕಟಗೊಂಡಿದೆ.

*ಫೈರೋಜ್ ಖಾನ್

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-wr3

Record; ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆ: 25 ದಿನಗಳಲ್ಲಿ 3.13 ಕೋಟಿ!

Chamarajanagar; ಆನೆ ದಾಳಿಗೆ ಬಲಿಯಾದ ಯುವಕ

Chamarajanagar; ಆನೆ ದಾಳಿಗೆ ಬಲಿಯಾದ ಯುವಕ

Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು

Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.