ನ್ಯಾಯಕ್ಕಾಗಿ ಪ್ರಿಯತಮನ ಮನೆ ಮುಂದೆ ಯುವತಿ ಧರಣಿ
Team Udayavani, Jul 14, 2019, 12:01 PM IST
ಕೊಳ್ಳೇಗಾಲ: ಜಮೀನುಗಳಲ್ಲಿ ದನ ಮೇಯಿಸುವ ವೇಳೆ ಯುವಕ, ಯುವತಿ ಪರಸ್ಪರ ಪ್ರೀತಿ ಮಾಡಿ ಯುವಕ ಕೈಕೊಟ್ಟ ಬಳಿಕ ಯುವತಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿ ಪ್ರಿಯತಮನ ಮನೆಯ ಮುಂಭಾಗ ಧರಣಿ ಕುಳಿತ ಘಟನೆಯೊಂದು ತಾಲೂಕಿನ ಕುಂತೂರು ಗ್ರಾಮದಲ್ಲಿ ನಡೆದಿದೆ.
ಕುಂತೂರುಮೋಳೆ ಗ್ರಾಮದ ಚಿಕ್ಕಸಿದ್ದಶೆಟ್ಟಿ ಅವರ ಪುತ್ರಿ ಶೋಭಾ (23) ಧರಣಿಗೆ ಕುಳಿತ ಯುವತಿ. ಕುಂತೂರು ಗ್ರಾಮದ ತಾಯಮ್ಮನ ಮಗ ಕುಮಾರ ದನ ಕಾಯುವ ವೇಳೆ ಯುವತಿಯನ್ನು ಪ್ರೀತಿಸಿ ದೈಹಿಕ ಸಂಪರ್ಕ ಬೆಳೆಸಿ ಯುವತಿಗೆ ಕೈಕೊಟ್ಟಿದ್ದಾನೆ.
ಪ್ರಿಯಕರ ಕೈಕೊಡುವುದನ್ನು ಅರಿತ ಯುವತಿ ಕೂಡಲೇ ಮದುವೆ ಮಾಡಿಕೊಳ್ಳುವಂತೆ ಅವರ ಮನೆ ಮುಂದೆ ಧರಣಿ ಕುಳಿತಾಗ ಕುಪಿತಗೊಂಡ ಯುವಕನ ಕುಟುಂಬಸ್ಥರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕುಮಾರ ಆಕೆಯ ಮೇಲೆ ಹಲ್ಲೆ ಮಾಡಲು ಮುಂದಾ ಗಿರುವು ದನ್ನು ನೆರೆಹೊರೆಯರು ಕಂಡು ಕೂಡಲೇ ಮನೆಗೆಬೀಗ ಹಾಕಿ ಓಡಿ ಹೋಗಿದ್ದಾನೆ.