ಕೈತೊಳೆದರೇನೆ ಬಡಾವಣೆಗೆ ಪ್ರವೇಶ
Team Udayavani, Jul 9, 2020, 5:05 AM IST
ಯಳಂದೂರು: ಪಟ್ಟಣದ ಗೌತಮ್ ಬಡಾವಣೆಯಲ್ಲಿ ಕೋವಿಡ್ 19 ನಿಯಂತ್ರಿಸಲು ವೈಜ್ಞಾನಿಕವಾಗಿ ಈ ಬಡಾವಣೆ ಪ್ರವೇಶಕ್ಕೂ ಮುಂಚೆ ಕೈಗಳನ್ನು ಸ್ಯಾನಿಟೈಸರ್ನಿಂದ ತೊಳೆದು, ಮಾಸ್ಕ್ ಹಾಕಿಯೇ ಹೋಗುವುದನ್ನು ಬಡಾವಣೆ ನಿವಾಸಿಗಳು ಕಡ್ಡಾಯಗೊಳಿಸಿದ್ದಾರೆ. ಈಗಾಗಲೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೊರಗಿನವರಿಗೆ ಪ್ರವೇಶ ತಿರಸ್ಕರಿಸಿ ಬೇಲಿ ಹಾಕಿಕೊಳ್ಳಲಾಗಿದೆ.
ಆದರೆ, ಇಲ್ಲಿ ಕೋವಿಡ್ ಬಗ್ಗೆ ವೈಜ್ಞಾನಿಕ ಜಾಗೃತಿ ಮೂಡಿಸಲು ಬಡಾವಣೆಯ 3 ಮುಖ್ಯ ರಸ್ತೆಗಳಲ್ಲೂ ಸ್ಯಾನಿಟೈಸರ್, ಟಬ್ ಗಳಲ್ಲಿ ನೀರು ಇಡಲಾಗಿದೆ. ಸ್ಥಳೀಯರೂ ಸೇರಿದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೈ ತೊಳೆಯಬೇಕು. ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಂಡು ಪ್ರವೇಶಿಸಬೇಕು. ಅಲ್ಲದೆ ಸೋಂಕಿತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂಬ ಬ್ಯಾನರ್ ಗಳನ್ನೂ ಅಳವಡಿಸಲಾಗಿದೆ.
ಅಲ್ಲದೆ ಬಡಾವಣೆಯ ಪ್ರತಿ ಮನೆಗಳಲ್ಲಿರುವ ಜನಸಂಖ್ಯೆ ಪಟ್ಟಿ ಮಾಡಲಾಗುತ್ತಿದ್ದು, ಮಾಸ್ಕ್ ವಿತರಣೆಗೂ ಕ್ರಮ ವಹಿಸಲಾಗುವುದು ಎಂದು ಇಲ್ಲಿನ ಮುಖಂಡರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಮುಂಜಾಗ್ರತೆ ವಹಿಸದಿದ್ದರೆ ಕೆಲ ಗ್ರಾಮಗಳಲ್ಲಿ ದಂಡ ವಿಧಿಸುತ್ತಿದ್ದಾರೆ.