ಅಂಬೇಡ್ಕರ್‌ ತತ್ವಾದರ್ಶ ಪಾಲಿಸಿ: ಶಾಸಕ ಮಹೇಶ್‌


Team Udayavani, May 20, 2019, 3:00 AM IST

ambedkar

ಕೊಳ್ಳೇಗಾಲ: ಗೌತಮ ಬುದ್ಧ ಹುಟ್ಟಿದ ಬುದ್ಧ ಪೂರ್ಣಿಮೆ ದಿನದಂದು ಡಾ.ಬಿ.ಆರ್‌.ಅಂಬೇಡ್ಕರ್‌ರ 128ನೇ ಜಯಂತಿ ಆಯೋಜನೆ ಮಾಡಲಾಗಿದ್ದು, ಅವರ ತತ್ವ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಶಾಸಕ ಎನ್‌.ಮಹೇಶ್‌ ತಿಳಿಸಿದರು.

ತಾಲೂಕಿನ ಹೊಂಡರಬಾಳು ವಿಶ್ವಜ್ಞಾನಿ ಭೀಮರಾವ್‌ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ರ 128ನೇ ಜಯಂತಿ ಹಾಗೂ ಬುದ್ಧ ಪೂರ್ಣಿಮೆ ಉದ್ಘಾಟಿಸಿ ಮಾತನಾಡಿದರು.

ಗೌತಮ ಬುದ್ಧ ಪೂರ್ಣಿಮೆ ದಿನದಂದು ಜನ್ಮ ತಾಳಿದರು. ಅದೇ ದಿನ ಅವರಿಗೆ ಜ್ಞಾನೋದಯವಾಯಿತು. ಇಹಲೋಕ ತ್ಯಜಿಸಿದ ದಿನವೇ ವೈಶಾಖ ಪೂರ್ಣಿಮೆ ದಿನದಂದು ಆಗಿದ್ದು, ಜಗತ್ತಿನಲ್ಲಿ ಈ ರೀತಿ ಏಕಕಾಲದಲ್ಲಿ ನಡೆದಿರುವುದು ಗೌತಮ ಬುದ್ಧರಿಗೆ ಮಾತ್ರ ಎಂದು ಹೇಳಿದರು.

ಆದರ್ಶ ಪಾಲಿಸಿ: ಹನೂರು ಶಾಸಕ ಆರ್‌.ನರೇಂದ್ರ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೆದಿರುವ ಪವಿತ್ರ ಸಂವಿಧಾನದ ಅಡಿಯಲ್ಲೇ ಗ್ರಾಪಂ ಸದಸ್ಯರಿಂದಲೂ ಸಂಸದರ ವರೆವಿಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಅವರ ಆದರ್ಶಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಬೇಸರಿಸಿದರು.

ಅಭಿನಂದಿಸುವೆ: ಬೇರೆ ಬೇರೆ ಗ್ರಾಮಗಳಲ್ಲಿ ಸಾಮಾನ್ಯವಾಗಿ ಅಂಬೇಡ್ಕರ್‌ ಸಂಘ ಎಂದು ಹೆಸರಿಸುತ್ತಾರೆ. ಆದರೆ ಹೊಂಡರಬಾಳು ಗ್ರಾಮದವರು ವಿಶ್ವಜ್ಞಾನಿ ಭೀಮರಾವ್‌ ಯುವಕ ಸಂಘ ಎಂದು ಹೆಸರಿಟ್ಟಿರುವುದರಿಂದ ಇಂತಹ ಹೆಸರನ್ನು ಕೇಳಿದರೆ ಮೈಎಲ್ಲಾ ರೋಮಾಂಚನವಾಗುತ್ತದೆ. ಇಂತಹ ಹೆಸರನ್ನು ಇಟ್ಟ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಹೇಳಿದರು.

ಎಲ್ಲಾ ಮಹನೀಯರ ಜಯಂತಿ ಆಚರಣೆ ಮಾಡಿ ಕುಣಿದು ಕುಪ್ಪಳಿಸಿ ಒಂದು ದಿನ ಕಾಲ ಕಳೆಯುತ್ತಾರೆ. ಮಹಾನಿಯರು ಸಾಧನೆ ಮಾಡಿರುವ ತತ್ವ ಆದರ್ಶ ಪಾಲಿಸುತ್ತಿಲ್ಲ. ಅವರ ಆದರ್ಶಗಳಲ್ಲಿ ಅಲ್ಪಸ್ವಲ್ಪವಾದರೂ ಪಾಲನೆ ಮಾಡಿದರೆ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಅವಶ್ಯಕ: ವಿಶ್ವಜ್ಞಾನಿ ಭೀಮರಾವ್‌ ಯುವಕ ಸಂಘದ ವತಿಯಿಂದ ವರ್ಷವೆಲ್ಲಾ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕಮ್ರಗಳನ್ನು ಹಮ್ಮಿಕೊಂಡು ಒಳ್ಳೆಯ ಮಾರ್ಗದರ್ಶನ ನೀಡುತ್ತಿರುವುದು ಇಂದಿನ ದಿನಗಳಲ್ಲಿ ಅತ್ಯವಶ್ಯಕ ಎಂದು ಹೇಳಿದರು.

ಚೆನ್ನಾಲಿಂಗನಹಳ್ಳಿ ಜೇತವನ ಬೌದ್ಧವಿಹಾರದ ಮನೋರಖೀತ ಬಂಜೇಜಿ, ತಾಪಂ ಸದಸ್ಯ ಗುಣಶೇಖರ, ಮುಖ್ಯ ಭಾಷಣಕಾರ ಕೃಷ್ಣಮೂರ್ತಿ, ಮುಖಂಡರಾದ ಚೆನ್ನರಾಜು, ಸಿದ್ದಪ್ಪಸ್ವಾಮಿ, ಚರಣ್‌ರಾಜ್‌, ಮಹೇಶ್‌, ಮೋಹನ್‌, ಸುಂದರಮ್ಮ, ಗೌರಮ್ಮ ಹರ್ಷ, ಗೀತಮ್ಮ, ಲೀಲಾವತಿ, ವರದಿಗಾರ ನಿಂಗರಾಜು, ಸಂಘದ ಅಧ್ಯಕ್ಷ ನಾಗೇಶ್‌, ಉಪಾಧ್ಯಕ್ಷ ಕುಮಾರ, ಕಾರ್ಯದರ್ಶಿ ಅಭಿಷೇಕ್‌, ಖಜಾಂಚಿ ಭಾಗ್ಯರಾಜ್‌, ಪ್ರಧಾನ ಕಾರ್ಯದರ್ಶಿ ಚೇತನ್‌ ಇದ್ದರು.

ಅಂಬೇಡ್ಕರ್‌ರ ಜಯಂತಿ ಮತ್ತು ಬುದ್ಧಪೂರ್ಣಿಮೆ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಎಲ್ಲರೂ ಮದ್ಯಸೇವನೆ ಬಿಡಬೇಕೆಂದು ಪ್ರಮಾಣ ಮಾಡಿದರೆ ಅಂಬೇಡ್ಕರ್‌ ಆಚರಣೆ ಮಾಡಿದಕ್ಕೂ ಸಾರ್ಥಕವಾಗುತ್ತದೆ. ಅಂಬೇಡ್ಕರ್‌ ಅನುಯಾಯಿಗಳು ಮದ್ಯಸೇವೆನ ಮಾಡಬಾರದು. ನಾವು ಏನನ್ನು ಕುಡಿಯುತ್ತೇವೆ ಅದು ನಮ್ಮ ದೇಹಕ್ಕೆ ಬೇಡವಾದದ್ದು. ಯಾರನ್ನು ದ್ವೇಷ ಮಾಡಬಾರದು. ಅಸೂಯೆ ಪಡುವುದು, ಅಸಮಾಧಾನಗಳು ಸೃಷ್ಟಿಯಾದಾಗ ಬಗೆಹರಿಸಿಕೊಳ್ಳೋಣ.
-ಎನ್‌.ಮಹೇಶ್‌, ಶಾಸಕ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.