4 ಜಿಪಂ ಕ್ಷೇತ್ರ ಏರಿಕೆ, 14 ತಾಪಂ ಕ್ಷೇತ್ರ ಕಡಿತ


Team Udayavani, Feb 19, 2021, 6:29 PM IST

article about panchayath

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 23 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿದ್ದು, ಮುಂಬರುವ ಚುನಾವಣೆಯವರೆಗೆ ಒಟ್ಟು 27 ಕ್ಷೇತ್ರಗಳಿಗೆ ಏರಿಕೆಯಾಗಲಿದೆ. 5 ತಾಲೂಕು ಪಂಚಾಯ್ತಿಗಳಿಂದ ಒಟ್ಟು 89 ಕ್ಷೇತ್ರಗಳಿದ್ದು, 75ಕ್ಕೆ ಇಳಿಕೆಯಾಗಲಿದೆ.

ರಾಜ್ಯ ಚುನಾವಣಾ ಆಯೋಗ ಜಿಪಂ ಮತ್ತು ತಾಪಂ ಕ್ಷೇತ್ರಗಳನ್ನು ಪುನರ್‌ರಚಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಅಧಿಕೃತ ಪತ್ರ ಬರೆದಿದೆ. ಈ ಆದೇಶದಲ್ಲಿ ಪ್ರತಿ ಜಿಲ್ಲೆಯಲ್ಲಿರಬೇಕಾದ ಜಿಪಂ ಮತ್ತು ತಾಪಂ ಕ್ಷೇತ್ರಗಳ ಸಂಖ್ಯೆಯನ್ನು ನಮೂದಿಸಲಾಗಿದೆ. ಆ ಸಂಖ್ಯೆಗಳಿಗನುಗುಣವಾಗಿ ಕ್ಷೇತ್ರಗಳನ್ನು ಪುನರ್‌ರಚಿಸಲು ಸೂಚನೆ ನೀಡಲಾಗಿದೆ.

ಅದರಂತೆ ಚಾಮರಾಜನಗರ ಜಿಪಂಗೆ 27 ಕ್ಷೇತ್ರ (ಸದಸ್ಯ) ಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಚಾಮರಾಜನಗರ ತಾಲೂಕಿಗೆ 9, ಕೊಳ್ಳೇಗಾಲ ತಾಲೂಕಿಗೆ 4, ಹನೂರು ತಾಲೂಕಿಗೆ 5, ಗುಂಡ್ಲುಪೇಟೆ ತಾಲೂಕಿಗೆ 6 ಹಾಗೂ ಯಳಂದೂರು ತಾಲೂಕಿಗೆ 3 ಜಿಪಂ ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ.

ಜಿಪಂ ಕ್ಷೇತ್ರಗಳು: ಪ್ರಸ್ತುತ ಚಾಮರಾಜನಗರ ಜಿಪಂನಲ್ಲಿ 23 ಕ್ಷೇತ್ರಗಳಿವೆ. ಚಾಮರಾಜನಗರ ತಾಲೂಕಿನಲ್ಲಿ ಹರದನಹಳ್ಳಿ, ಆಲೂರು, ಹರವೆ, ಅಮಚವಾಡಿ, ಉಡಿಗಾಲ, ಮಾದಾಪುರ ಸಂತೆಮರಹಳ್ಳಿ, ಚಂದಕವಾಡಿ ಸೇರಿ ಒಟ್ಟು 8 ಜಿಪಂ ಕ್ಷೇತ್ರಗಳಿವೆ. ಇಲ್ಲಿ 1 ಕ್ಷೇತ್ರ ಹೆಚ್ಚಳವಾಗಲಿದೆ. ಕೊಳ್ಳೇಗಾಲ ತಾಲೂಕಿನಲ್ಲಿ ಕೌದಳ್ಳಿ, ಬಂಡಳ್ಳಿ, ಲೊಕ್ಕನಹಳ್ಳಿ, ಸತ್ಯೇಗಾಲ, ಮಾರ್ಟಳ್ಳಿ, ಪಾಳ್ಯ, ಕುಂತೂರು, ರಾಮಾಪುರ ಸೇರಿ ಈಗ ಒಟ್ಟು 8 ಜಿಪಂ ಕ್ಷೇತ್ರಗಳಿವೆ. ಪ್ರಸ್ತುತ ಕೊಳ್ಳೇಗಾಲದೊಳಗೆ ಇದ್ದ ಹನೂರು ಪ್ರತ್ಯೇಕ ತಾಲೂಕಾಗಿರುವುದರಿಂದ ಕೊಳ್ಳೇಗಾಲ ತಾಲೂಕಿನಲ್ಲಿ 4 ಜಿಪಂ ಕ್ಷೇತ್ರಗಳು, ಹನೂರು ತಾಲೂಕಿಗೆ 5 ಕ್ಷೇತ್ರಗಳು ಹಂಚಿಕೆಯಾಗಲಿವೆ. ಹೀಗಾಗಿ ಚಾ.ನಗರ ತಾಲೂಕಿನಷ್ಟೇ ಸಂಖ್ಯೆಯ 8 ಕ್ಷೇತ್ರಗಳನ್ನು ಹೊಂದಿದ್ದ ಕೊಳ್ಳೇಗಾಲ ಈಗ 4 ಕ್ಷೇತ್ರಗಳಿಗೆ ಸೀಮಿತವಾಗಲಿದೆ.

ಇದನ್ನೂ ಓದಿ:ಪಂಚಮಸಾಲಿ ಮೀಸಲಿಗೆ ವಿರೋಧದ ಆರೋಪ: ಸ್ಪಷ್ಟನೆ ನೀಡಿದ ಡಿಸಿಎಂ ಸವದಿ

ಗುಂಡ್ಲುಪೇಟೆ ತಾಲೂಕಿನಲ್ಲಿ ಪ್ರಸ್ತುತ ಬೇಗೂರು, ಹಂಗಳ, ತೆರಕಣಾಂಬಿ, ಬರಗಿ, ಕಬ್ಬಹಳ್ಳಿ ಸೇರಿ 5 ಕ್ಷೇತ್ರಗಳಿವೆ. ಇಲ್ಲಿ 1 ಕ್ಷೇತ್ರ ಹೆಚ್ಚಳವಾಗಲಿದೆ. ಯಳಂದೂರು ತಾಲೂಕಿನಲ್ಲಿ ಅಗರ, ಕಸಬಾ ಸೇರಿ 2 ಕ್ಷೇತ್ರಗಳಿದ್ದವು. ಇಲ್ಲಿ 1 ಕ್ಷೇತ್ರ ಹೊಸದಾಗಿ ಸೃಷ್ಟಿಯಾಗಲಿದೆ. ಒಟ್ಟಾರೆ ಜಿಲ್ಲೆಯಲ್ಲಿ 4 ಜಿಪಂ ಕ್ಷೇತ್ರಗಳು ಹೊಸದಾಗಿ ರಚನೆಯಾಗಲಿವೆ.

ತಾಪಂ ಕ್ಷೇತ್ರಗಳು: ಜಿಲ್ಲೆಯಲ್ಲಿ ಒಟ್ಟು 89 ತಾಪಂ ಕ್ಷೇತ್ರ (ಸ್ಥಾನ )ಗಳಿದ್ದವು. ಪುನರ್‌ರಚನೆಯಲ್ಲಿ 14 ತಾಪಂ ಕ್ಷೇತ್ರಗಳನ್ನು ಜಿಲ್ಲೆ ಕಳೆದುಕೊಳ್ಳಲಿದೆ. ಪ್ರಸ್ತುತ ಚಾಮರಾಜನಗರ ತಾಪಂ ವ್ಯಾಪ್ತಿಯಲ್ಲಿ 29 ಕ್ಷೇತ್ರಗಳಿವೆ. ಇದು 24 ಕ್ಷೇತ್ರಗಳಾಗಲಿವೆ. ಗುಂಡ್ಲುಪೇಟೆ ತಾಪಂನಲ್ಲಿ 20 ಕ್ಷೇತ್ರಗಳಿದ್ದವು, 16 ಕ್ಷೇತ್ರಗಳಾಗಲಿವೆ.ಕೊಳ್ಳೇಗಾಲ ತಾಪಂನಲ್ಲಿ 29 ಕ್ಷೇತ್ರಗಳಿದ್ದವು. ಈಗ 10 ಕ್ಷೇತ್ರಗಳಾಗಲಿವೆ. ಯಳಂದೂರು ತಾಪಂನಲ್ಲಿ 11 ಕ್ಷೇತ್ರಗಳಿದ್ದವು, ಇಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸದಾಗಿ ರಚನೆಯಾಗಿರುವ ಹನೂರು ತಾಪಂಗೆ 14 ತಾಪಂ ಕ್ಷೇತ್ರಗಳು ಸೃಷ್ಟಿಯಾಗಲಿವೆ. ಈ ಪುನರ್‌ ರಚನೆಯಿಂದ ಕೊಳ್ಳೇಗಾಲ ತಾಲೂಕಿನಲ್ಲೇ ಅತಿ ಕಡಿಮೆ ತಾಪಂ ಕ್ಷೇತ್ರಗಳಾಗಲಿವೆ! ಇದುವರೆಗೂ ಕಡಿಮೆ ಸ್ಥಾನಗಳಿದ್ದ ಯಳಂದೂರು ತಾಲೂಕಿನಲ್ಲಿ ಕೊಳ್ಳೇಗಾಲ ತಾಲೂಕಿಗಿಂತ ಹೆಚ್ಚು ಸ್ಥಾನಗಳಾಗಲಿವೆ!

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.