ಬಿಆರ್‌ಟಿ ಕಾನನ ರಸ್ತೆಗಳಲ್ಲಿ ವನ್ಯ ಪ್ರಾಣಿಗಳ ಸಚ್ಛಂದ ವಿಹಾರ


Team Udayavani, Nov 28, 2021, 2:21 PM IST

ಬಿಆರ್‌ಟಿ ಕಾನನ ರಸ್ತೆಗಳಲ್ಲಿ ವನ್ಯ ಪ್ರಾಣಿಗಳ ಸಚ್ಛಂದ ವಿಹಾರ

ಯಳಂದೂರು: ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಹಲವು ತಿಂಗಳಿಂದ ಬೀಳುತ್ತಿರುವುದರಿಂದ ಮಳೆಯಿಂದ ಕಾಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು ಕೆರೆ, ಕಟ್ಟೆಗಳೆಲ್ಲಾ ತುಂಬಿ ಕಾಡು ಪ್ರಾಣಿಗಳು ಸ್ವಚ್ಛಂದವಾಗಿ ರಸ್ತೆಗಳಲ್ಲಿ ವಿಹರಿಸುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

ಬಿಆರ್‌ಟಿ ವನ್ಯಧಾಮ 575 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು ಪ್ರಮುಖವಾಗಿ ಯಳಂದೂರು, ಕೆ.ಗುಡಿ, ಪುಣಜನೂರು, ಕೊಳ್ಳೇಗಾಲ, ಬೈಲೂರು ವಲಯಗಳಿಂದ ಕೂಡಿದೆ. 2011ರಲ್ಲಿ ಬಿಆರ್‌ಟಿ ವನ್ಯಧಾಮ ಹುಲಿಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು ಆನೆ, ಹುಲಿ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ಕಾಡುಕುರಿ, ಕಡವೆ, ನರಿ, ತೋಳ ಸೇರಿದಂತೆ ಇತರೆ ಜೀವಸಂಕುಲ, ಸಸ್ಯ ಸಂಕುಲ ಹೊಂದಿರುವುದು ಇಲ್ಲಿನ ವಿಶೇಷ. ಪ್ರವಾಸಿಗರು ಇಲ್ಲಿನ ಪ್ರಸಿದ್ಧ ಬಿಳಿಗಿರಿರಂಗನಾಥಸ್ವಾಮಿ ದರ್ಶನ ಪಡೆದು ಕಾಡಿನ ಸೌಂದರ್ಯ ಸವಿದು ತೆರಳುತ್ತಾರೆ.

ಇತ್ತೀಚಿನಲ್ಲಿ ಕೋವಿಡ್‌ ಪ್ರಮಾಣ ಸ್ವಲ್ಪ ಕಡಿಮೆಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹೊರ ರಾಜ್ಯವಾದ ತಮಿಳುನಾಡು, ಕೇರಳ ಸೇರಿದಂತೆ ಇತರೇ ಕಡೆಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ಮಳೆಯಿಂದ ಕಾಡಿಗೆ ಹಸಿರಿನ ಹೊದಿಕೆ: ಮಳೆಯಿಂದಾಗಿ ಕಾಡಿನಲ್ಲಿನ ಕೆರೆಗಳಿಗೆ ಜೀವ ಕಳೆ ಬಂದಿದ್ದು ಕಾಡಿನಲ್ಲಿ ಹುಲ್ಲು, ಸಸ್ಯಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ರಸ್ತೆ ಮಾರ್ಗದಲ್ಲಿ ದರ್ಶನ: ಬಿಆರ್‌ಟಿ ವನ್ಯಧಾಮ ವ್ಯಾಪ್ತಿಯ ಗುಂಬಳ್ಳಿ ಚೆಕ್‌ ಪೋಸ್ಟ್‌ ನಿಂದ ಬೆಟ್ಟ ಹಾಗೂ ಬೆಟ್ಟದಿಂದ ಕೆ.ಗುಡಿ ಮಾರ್ಗವಾಗಿ ಸಾಗುವ ರಸ್ತೆ ಬದಿ ಕಂಡುಬರುವ ಹೊಸಹಳ್ಳಿ ಕೆರೆ, ನವಿಲುಗೆರೆ, ಆಮೆಕೆರೆ, ಲಿಂಗಣ್ಣನಕಟ್ಟೆ, ಮೊಸಳೆ ಕೆರೆ ಸೇರಿದಂತೆ ಇತರೆ ಕೆರೆ ಕಟ್ಟೆಗಳಲ್ಲಿ ಸಂಜೆಯಾಗುತ್ತಲೇ ಆನೆ, ಜಿಂಕೆ, ಕಾಡೆಮ್ಮೆ, ಜಿಂಕೆ, ತೋಳ,ನರಿ , ವೈಲ್ಡ್‌ಡಾಗ್‌, ಕಡವೆಗಳು ಹಿಂಡು ಹಿಂಡಾಗಿ ಬಂದು ವಿಹರಿಸುತ್ತಿವೆ. ಅದರಲ್ಲೂ ಮುಂಜಾನೆ ಹಾಗೂ ಸಂಜೆ ವೇಳೆ ಕೆರೆಯ ಹಿನ್ನೀರಿನ ಬಳಿ ಸ್ವತ್ಛಂದಾಗಿ ವಿಹರಿಸಲು ಗುಂಪು ಗುಂಪಾಗಿ ಬರುವ ಕಾಡು ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ.

ಬಿಆರ್‌ಟಿ ಅರಣ್ಯ ಪ್ರದೇಶದ ರಸ್ತೆ ಬದಿ ಆನೆ, ಕಾಡೆಮ್ಮೆ, ಜಿಂಕೆ, ತೋಳ ಸೇರಿದಂತೆ ಹಲವು ಪ್ರಾಣಿಗಳನ್ನು ನೋಡಿ ಪುಳಕಗೊಂಡೆವು. ಜತೆಗೆ ಕಾಡು ಹಚ್ಚ ಹಸಿರಿನಿಂದ ಕೂಡಿರುವುದನ್ನು ನೋಡಲು ಮತ್ತಷ್ಟು ರೋಮಾಂಚನಗೊಳ್ಳುತ್ತಿದೆ. ●ಸಿ.ಸೌಮ್ಯಾ, ಪ್ರವಾಸಿಗರು

ಬಿಆರ್‌ಟಿ ಅರಣ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಕಾಡಿನ ಕೆರೆ, ಕಟ್ಟೆಗಳು ತುಂಬಿಕೊಂಡಿದ್ದು, ಮೇವು, ನೀರಿನ ತೊಂದರೆ ಇಲ್ಲ. ಜತೆಗೆ ರಸ್ತೆ ಬದಿಯ ಲಾಂಟಾನ ಗಿಡ ಗಂಟಿ ತೆರವು ಮಾಡಿರುವ ಹಿನ್ನೆಲೆ ಹುಲ್ಲಿನ ಹೊದಿಕೆ ಹೆಚ್ಚಾಗಿರುವ ಕಾರಣ ಪ್ರಾಣಿಗಳು ಮೇಯಲು ರಸ್ತೆ ಬದಿ ಸಂಚರಿಸುತ್ತವೆ. ಶಾಂತಪ್ಪ ಪೂಜಾರ್‌, ಆರ್‌ಎಫ್ಒ, ಬಿಆರ್‌ಟಿ ಕೆ.ಗುಡಿ ವಲಯ

ಫೈರೋಜ್‌ ಖಾನ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.