ಸಸಿ ನೆಟ್ಟು ಉತ್ತಮ ಪರಿಸರ ನಿರ್ಮಿಸಿ
Team Udayavani, Jun 7, 2021, 6:36 PM IST
ಚಾಮರಾಜನಗರ: ಗಿಡ ಮರಗಳನ್ನು ಬೆಳೆಸಿಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮಪರಿಸರ ನಿರ್ಮಿಸುವ ಹೊಣೆಗಾರಿಕೆ ಎಲ್ಲರದ್ದಾಗಿದೆಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶಸದಾಶಿವ ಎಸ್.ಸುಲ್ತಾನ್ ಪುರಿ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾವಕೀಲರ ಸಂಘ, ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ ಮತ್ತು ನ್ಯಾಯಾಂಗ ಇಲಾಖೆಸಹಯೋಗದಲ್ಲಿ ನಗರದ ನ್ಯಾಯಾಲಯದಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಉದ್ಘಾಟಿಸಿ ಮಾತನಾಡಿದರು.
ನಮ್ಮ ಕರ್ತವ್ಯ: ಅಭಿವೃದ್ಧಿ ನೆಪದಲ್ಲಿ ಮರ ಕಡಿದುಹಾಕಿದರೆ ಪರಿಸರದಲ್ಲಿ ಅಸಮತೋಲನಉಂಟಾಗುತ್ತದೆ. ಮರ ಗಿಡ ಬೆಳೆಸುವುದರ ಮೂಲಕಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣಮಾಡುವತ್ತ ಗಮನ ಹರಿಸಬೇಕು. ಸಸಿ ನೆಟ್ಟು ಅರಣ್ಯಬೆಳೆಸಿ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಪ್ರಮುಖಕರ್ತವ್ಯ ಎಂದು ತಿಳಿಸಿದರು.
ಪರಿಸರ ದಿನ ಆಚರಣೆಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪರಿಸರಉಳಿಸುವ ಕಾರ್ಯ ನಿರಂತರವಾಗಿ ಸಾಗಬೇಕುಎಂದು ಸಲಹೆ ಮಾಡಿದರು.
ಪರಿಸರ ಸಂರಕ್ಷಿಸಿ: ಹಿರಿಯ ಸಿವಿಲ್ ನ್ಯಾಯಾಧೀಶಗಣಪತಿ ಜಿ.ಬಾದಾಮಿ ಮಾತನಾಡಿ, ಜ್ವಾಲಾಮುಖೀ,ಮಣ್ಣು ಕುಸಿತ, ಜಲ ಪ್ರಳಯ, ಜಾಗತಿಕ ತಾಪಮಾನಏರಿಕೆಯಂತಹ ಅನೇಕ ತೊಂದರೆ ಸಂಭವಿಸಲುಪರಿಸರ ನಾಶವೇ ಪ್ರಮುಖ ಕಾರಣ. ಹೀಗಾಗಿಪರಿಸರ ಸಂರಕ್ಷಿಸಿ ಭೂಮಿ ರಕ್ಷಿಸಬೇಕು ಎಂದರು.ಪರಿಸರ ಪ್ರಾಮುಖ್ಯತೆ ತಿಳಿಸಿ: ಕಾನೂನು ಸೇವೆಗಳಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.ಮನುಷ್ಯ ತನ್ನ ನಿರ್ಲಕ್ಷ್ಯದಿಂದ ಸುತ್ತಮುತ್ತಲಿನಪರಿಸರ ಹಾಳು ಮಾಡುತ್ತಿದ್ದಾನೆ.
ಇದಕ್ಕೆಮುಂದೊಂದು ದಿನ ಬೆಲೆ ತೆರಬೇಕಾಗುತ್ತದೆ. ಅದಕ್ಕೆಈಗಲೇ ಎಚ್ಚೆತ್ತು ಪರಿಸರ ಸಂರಕ್ಷಣೆ ಮಾಡುವುದರಜತೆಗೆ ಮಕ್ಕಳಿಗೂ ಗಿಡ ಮರ ಹಾಗೂ ಪರಿಸರದಪ್ರಾಮುಖ್ಯತೆ ತಿಳಿಸಬೇಕು ಎಂದರು.
ಜೀವಿಸಲು ಅವಕಾಶ ನೀಡಿ: ಪ್ರಧಾನ ಸಿವಿಲ್ನ್ಯಾಯಾಧೀಶ ಮಹಮ್ಮದ್ ರೋಷನ್ ಷಾಮಾತನಾಡಿ, ಪರಿಸರ ನಾಶ ಮಾಡುವುದರಿಂದಭವಿಷ್ಯದಲ್ಲಿ ಸಾಕಷ್ಟು ಅಪಾಯ ಎದುರಿಸಬೇಕಾಗುತ್ತದೆ. ಮರ ಕಡಿದ ಸ್ಥಳದಲ್ಲಿ ಒಂದು ಸಸಿನೆಡಬೇಕು.
ಪ್ರಾಣಿ, ಪಕ್ಷಿ ಇತರೆ ಜೀವ ಸಂಕುಲ ಗಿಡಮರಗಳನ್ನು ನಂಬಿ ಬದುಕುತ್ತವೆ. ಅವುಗಳಿಗೆಜೀವಿಸಲು ಅವಕಾಶ ಮಾಡಿಕೊಡಬೇಕೆಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರುಇಂದುಶೇಖರ್, ಹೆಚ್ಚುವರಿ ಸಿವಿಲ್ನ್ಯಾಯಾಧೀಶರಾದ ಸ್ಮಿತಾ, ಸಾಮಾಜಿಕ ಅರಣ್ಯವಲಯದ ಅಧಿಕಾರಿ ಟಿ.ಆರ್. ಅಮೃತಾನ್ಯಾಯಾಂಗ ಇಲಾಖೆ ಮುಖ್ಯ ಆಡಳಿತಾಧಿಕಾರಿಸುರೇಶ್, ನ್ಯಾಯಾಂಗ ಇಲಾಖೆ ನೌಕರರಅಧ್ಯಕ್ಷರಾದ ಯಂಕನಾಯಕ, ಪರಿಸರ ಮಂಡಳಿಹರಿಪ್ರಸಾದ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್