ಲಕ್ಕೂರು ಗೇಟ್‌ ಬಳಿ ಹಂಪ್‌ ನಿರ್ಮಿಸಿ


Team Udayavani, Apr 2, 2021, 12:17 PM IST

ಲಕ್ಕೂರು ಗೇಟ್‌ ಬಳಿ ಹಂಪ್‌ ನಿರ್ಮಿಸಿ

ಗುಂಡ್ಲುಪೇಟೆ: ಚಾಮರಾಜನಗರ- ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿ ಬರುವ ಲಕ್ಕೂರು ಗೇಟ್‌ ಬಳಿಯಲ್ಲಿ ಹಂಪ್‌ ನಿರ್ಮಿಸಬೇಕಿದೆ. ನಿತ್ಯ ಸಹಸ್ರಾರು ವಾಹನಗಳುಸಂಚರಿ ಸುವ ಈ ರಸ್ತೆ ಅಪಾಯವನ್ನು ಆಹ್ವಾನಿಸುತ್ತಿದ್ದು, ತುರ್ತು ಕ್ರಮ ಜರುಗಿಸಬೇಕಿದೆ.

ಪ್ರತಿದಿನ ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ಸಹಸ್ರಾರು ವಾಹನಗಳು ಲಕ್ಕೂರು ಗೇಟ್‌ ಮೂಲಕವೇತೆರಳುತ್ತವೆ. ಇಲ್ಲಿ ಎರಡು ಬದಿಯಲ್ಲೂ ಇಳಿಜಾರುಇರುವುದರಿಂದ ಅತೀ ವೇಗವಾಗಿ ವಾಹನಗಳುಚಲುಸುವುದರಿಂದ ಆಯತಪ್ಪುವ ಸಾಧ್ಯತೆ ಇದೆ. ಈಸಂದರ್ಭದಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆಗೆಪಾದಚಾರಿಗಳು ರಸ್ತೆ ದಾಟುವುದೇ ದುಸ್ತರವಾಗಿದೆ. ಈಸ್ಥಳದಲ್ಲಿ ಹಲವು ಬಾರಿ ಅಪಘಾತಗಳು ಸಂಭವಿಸಿರುವ ನಿದರ್ಶನಗಳಿವೆ. ಅಪಾಯಕಾರಿ ಸ್ಥಳವಾಗಿದ್ದರೂನಾಮಫ‌ಲಕ ಅಳವಡಿಸುವುದಾಗಲಿ, ಹಂಪ್ಸ್‌ನಿರ್ಮಿಸುವುದಾಗಿ ಯಾವುದನ್ನೂ ಅಧಿಕಾರಿಗಳುಮಾಡದೇ ವಾಹನ ಸವಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ನಿಲ್ದಾಣವಿದ್ದರೂ ಬಸ್‌ ನಿಲ್ಲಿಸಲ್ಲ: ಲಕ್ಕೂರು, ಶ್ಯಾನಡ್ರಹಳ್ಳಿ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್‌ಸೌಲಭ್ಯವಿಲ್ಲದ ಕಾರಣ ಕಾಲ್ನಡಿಗೆ ಮೂಲಕ ಲಕ್ಕೂರುಗೇಟ್‌ಗೆ ಪ್ರಯಾಣಿಕರು ಆಗಮಿಸು ತ್ತಾರೆ. ಇವರುಗಂಟೆಗಟ್ಟಲೆ ಕಾಯುವ ಸ್ಥಿತಿ ಇದೆ. ಹೆಚ್ಚಿನ ಮಂದಿಮಹಿಳೆಯರು ಚಾಮರಾಜ ನಗರದ ಉತ್ತುವಳ್ಳಿಯಗಾರ್ಮೆಂಟ್ಸ್‌ಗೆ ತೆರಳಲು ಗೇಟ್‌ ಬಳಿ ಕಾದು ನಿಂತಿದ್ದರೂಬಸ್‌ಗಳು ನಿಲ್ಲಿಸುವುದಿಲ್ಲ. ಇದರಿಂದ ಸ್ಥಳೀಯರು, ವಿದ್ಯಾರ್ಥಿಗಳಿಗೆ ಸಮಸ್ಯೆ ಹೆಚ್ಚಿದ್ದು, ಆಟೋ ಸೇರಿದಂತೆಖಾಸಗಿ ವಾಹನಗಳನ್ನೇ ಅವಲಂಬಿಸ ಬೇಕಾಗಿದೆ.ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಕಡೆಯಿಂದಬರುವ ಕೆಲವು ಸರ್ಕಾರಿ ಬಸ್‌ಗಳು ನಿಲುಗಡೆಗೆ ಅವಕಾಶವಿದ್ದರೂ ಹಾಗೇ ತೆರಳುತ್ತವೆ.

ಈ ಭಾಗದಲ್ಲಿ ಅಧಿಕ ರೈತರು ತರಕಾರಿ, ಹಣ್ಣು ಬೆಳೆಯುತ್ತಾರೆ. ಇವುಗಳನ್ನು ತೆರಕಣಾಂಬಿ ಮಾರುಕಟ್ಟೆಗೆ ಆಟೋಗಳು ತರಕಾರಿ ತುಂಬಿಕೊಂಡು ಅತಿ ವೇಗದಲ್ಲಿ ಈ ಮಾರ್ಗವಾಗಿ ಚಲಿಸುತ್ತವೆ. ರಸ್ತೆಯಲ್ಲಿ ಹಂಪ್ಸ್‌ ಇಲ್ಲದಕಾರಣ ಅಕ್ಕಪಕ್ಕ ತೆರಳುವ ಸಣ್ಣ ವಾಹನಗಳು ದೊಡ್ಡ ವಾಹನ ಸವಾರರಿಗೆ ಕಾಣುವುದಿಲ್ಲ. ಜೊತೆಗೆ ಕೆರೆಗಳಿಗೆ ನೀರು ಹರಿಸುವ ನಿಲುಗಡೆ ಗೇಟ್‌ ಈ ರಸ್ತೆ ಬಳಿ ಇರುವುದರಿಂದ ಹೆಚ್ಚಿನ ಮಂದಿ ಮಹಿಳೆಯರು ಬಟ್ಟೆಹೊಗೆಯಲು ಇಲ್ಲಿಗೆ ಆಗಮಿಸುತ್ತಾರೆ. ಇವರೊಂದಿಗೆಸಣ್ಣ ಮಕ್ಕಳು ಕೂಡ ಬರುತ್ತಾರೆ. ಮಕ್ಕಳು ಆಟ ಆಡುವಾಗ ಮತ್ತು ರಸ್ತೆ ದಾಟುವ ವೇಳೆ ಆಕಸ್ಮಿಕವಾಗಿ ಅಪಘಾತ ಸಂಭವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದರ ಹೊಣೆಯನ್ನು ಅಧಿಕಾರಿಗಳೇ ಹೊತ್ತುಕೊಳ್ಳಬೇಕಿದೆ.ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಸಕರೇ, ಬಸ್‌ ನಿಲುಗಡೆಗೆ ಕ್ರಮವಹಿಸಿ :

ಗುಂಡ್ಲುಪೇಟೆಯಿಂದ ಚಾ.ನಗರಕ್ಕೆ ತೆರಳುವ ಲಕ್ಕೂರು ಗೇಟ್‌ ರಸ್ತೆಯು ಅಪಾಯಕಾರಿಯಾಗಿದೆ.ರಸ್ತೆಯ ಎರಡು ಬದಿಯಲ್ಲೂ ಇಳಿಜಾರುಇರುವುದರಿಂದ ಅತೀವೇಗವಾಗಿ ವಾಹನಗಳುಸಂಚರಿಸಿ ಆಯತಪ್ಪುವ ಸಂಭವ ಇದೆ.ಪಾದಚಾರಿಗಳು ರಸ್ತೆದಾಟಲು ಹರಸಾಹಸ ಪಡಬೇಕಾಗುತ್ತದೆ. ಇದರ ಜೊತೆಗೆ ಇಲ್ಲಿ ಬಸ್‌ ನಿಲ್ಲಿಸಲು ಅವಕಾಶವಿದ್ದರೂಚಾಲಕರು ಬಸ್‌ಗಳನ್ನು ನಿಲ್ಲುಸುವುದಿಲ್ಲ. ಒಟ್ಟಾರೆ ಈ ರಸ್ತೆ ಅವ್ಯವಸ್ಥೆ ಯಿಂದ ಕೂಡಿದೆ. ಕ್ಷೇತ್ರದಶಾಸಕರಾದ ನಿರಂಜನ್‌ ಕುಮಾರ್‌ ಈ ಬಗ್ಗೆ ಸ್ಥಳಪರಿಶೀಲನೆ ನಡೆಸಿ, ರಸ್ತೆಗೆ ಹಂಪ್‌ ನಿರ್ಮಿಸುವುದರಜೊತೆಗೆ ಬಸ್‌ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಲಕ್ಕೂರು ಗೇಟ್‌ ಬಳಿ ಇಳಿಜಾರು ಇರುವುದರಿಂದ ವಾಹನಗಳು ಅತಿವೇಗದಲ್ಲಿ ಚಲಿಸುತ್ತದೆ. ಹೀಗಾಗಿ ವೇಗದಮಿತಿ ಕಡಿಮೆ ಮಾಡಲು ಹಂಪ್ಸ್‌ನಿರ್ಮಿಸಬೇಕಿದೆ. ಈ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಮುಂದೆ ಸಂಭವಿಸುವ ಅನಾಹುತಗಳಿಗೆ ಅಧಿಕಾರಗಳೇ ನೇರ ಹೊಣೆ.  ●ಗಿರೀಶ್‌, ಲಕ್ಕೂರು

 

-ಬಸವರಾಜು ಎಸ್‌.ಹಂಗಳ

ಟಾಪ್ ನ್ಯೂಸ್

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

Tiger attack; ಹೊನ್ನೇಗೌಡನಹಳ್ಳಿ: ಹುಲಿ ದಾಳಿ; ಯುವಕನಿಗೆ ಗಾಯ

Tiger attack; ಹೊನ್ನೇಗೌಡನಹಳ್ಳಿ: ಹುಲಿ ದಾಳಿ; ಯುವಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.