ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆಗೆ ಮನವಿ
Team Udayavani, Jul 2, 2021, 7:05 PM IST
ಚಾಮರಾಜನಗರ: ವೈದ್ಯಕೀಯ ವಲಯದಲ್ಲಿ ಕನ್ನಡಬಳಸಲು ವೈದ್ಯರ ದಿನದ ಪ್ರಯುಕ್ತ ಕನ್ನಡ ಅಭಿವೃದ್ಧಿಪ್ರಾಧಿಕಾರವು ನಗರದ ಜಿಲ್ಲಾ ಆರೋಗ್ಯಾಧಿಕಾರಿಕಚೇರಿಗೆ ಗುರುವಾರ ಭೇಟಿ ನೀಡಿ ಹಕ್ಕೊತ್ತಾಯ ಹಾಗೂಮನವಿ ಪತ್ರ ಸಲ್ಲಿಸಿತು.
ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಜಾಗೃತಿಅಭಿಯಾನ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಕನ್ನಡಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಆರೋಗ್ಯ ಇಲಾಖೆಗೆ ಭೇಟಿ ನೀಡಿ ಕನ್ನಡ ಬಳಕೆಯನ್ನುಸಂಪೂರ್ಣವಾಗಿ ಅನುಷ್ಠಾನ ಮಾಡುವಂತೆ ಮನವಿಸಲ್ಲಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಪರವಾಗಿ ಡಾ. ಅಂಕಪ್ಪ ಅವರಿಗೆ ಕನ್ನಡ ಅಭಿವೃದ್ಧಿಪ್ರಾಧಿಕಾರದ ಜಿಲ್ಲಾ ಸಮಿತಿ ಸದಸ್ಯರು ಹಕ್ಕೊತ್ತಾಯಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಸಮಿತಿಯ ಸದಸ್ಯಸಿ.ಎಂ. ನರಸಿಂಹಮೂರ್ತಿ, ಆರೋಗ್ಯಾಧಿಕಾರಿ ಡಾ.ಅಂಕಪ್ಪ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕನಿರ್ದೇಶಕ ಎಚ್.ಕೆ ಗಿರೀಶ್, ಕನ್ನಡ ಜಾಗೃತಿ ಸಮಿತಿಸದಸ್ಯರಾದ ಮಹೇಶ್ ಚಿಕ್ಕಲೂರು, ದುಗ್ಗಟ್ಟಿಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಮತ್ತಿತರರಿದ್ದರು.