ದಸರಾ ಮೆರುಗು ಹೆಚ್ಚಿಸಲು ಆಯ್ಕೆಯಾದ ಬಂಡೀಪುರದ ಲಕ್ಷ್ಮೀ, ಚೈತ್ರಾ ಆನೆ
Team Udayavani, Sep 8, 2021, 5:53 PM IST
ಗುಂಡ್ಲುಪೇಟೆ: ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ಸರಳ ದಸರಾಕ್ಕೆ ಬಂಡೀಪುರದ ರಾಂಪುರ ಆನೆ ಶಿಬಿರದಿಂದ ಚೈತ್ರ ಮತ್ತು ಲಕ್ಷ್ಮೀ ಎರಡು ಸಾಕಾನೆಗಳು ಆಯ್ಕೆಯಾಗಿವೆ.
ಈ ಕುರಿತು ಮಾಹಿತಿ ನೀಡಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್, ಮೈಸೂರು ಸರಳ ದಸರಾಕ್ಕೆ ಒಟ್ಟು 8 ಆನೆಗಳು ಆಯ್ಕೆಯಾಗಿದ್ದು, ಅದರಲ್ಲಿ ಬಂಡೀಪುರದ 2 ಆನೆ ಎಂಬುದು ವಿಶೇಷವಾಗಿದೆ. ಮೊದಲ ಬಾರಿಗೆ ಚೈತ್ರ ಮತ್ತು ಲಕ್ಷ್ಮೀ ಆನೆಗಳು ಆಯ್ಕೆಯಾಗಿರುವ ಹಿನ್ನೆಲೆ ಸೆ.11ಕ್ಕೆ ಮದ್ದೂರು ವಲಯದಿಂದ ಗಜ ಪಯಣ ಆರಂಭಕ್ಕೆ ಚಾಲನೆ ನೀಡಲಾಗುವುದು. ಆ ವೇಳೆ ಶಾಸಕ ಸಿ.ಎಸ್.ನಿರಂಜನಕುಮಾರ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳಿಗೆ ಪೂಜೆ ಸಲ್ಲಿಸಿ ದಸರಾ ಕಾರ್ಯಕ್ರಮಕ್ಕೆ ಕಳುಹಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಬೆಂಗಳೂರು ವಿಶೇಷ ಕೋರ್ಟ್ ಆದೇಶದಂತೆ ವಿಕೆ ಶಶಿಕಲಾ 100 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಕಳೆದ ಕೆಲ ದಿನಗಳ ಹಿಂದೆ ಬಂಡೀಪುರದ ರಾಂಪುರ ಸಾಕಾನೆ ಶಿಬಿರಕ್ಕೆ ಡಿಸಿಎಫ್ ಕರಿಕಾಳನ್ ಭೇಟಿ ನೀಡಿ ಪಾರ್ಥ ಸಾರಥಿ, ಲಕ್ಷ್ಮಿ ಮತ್ತು ಚೈತ್ರ ಮೂರು ಆನೆಗಳನ್ನು ಗುರುತಿಸಿದ್ದರು. ಅವುಗಳ ಪೈಕಿ ದಸರಾಕ್ಕೆ ಚೈತ್ರ ಮತ್ತು ಲಕ್ಷ್ಮೀ ಆಯ್ಕೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ