ಸಿ.ಪಿ.ಯೋಗೇಶ್ವರ್ ಗೆ ಡಿ.ಕೆ.ಶಿವಕುಮಾರ್ ಟಾಂಗ್
Team Udayavani, Aug 25, 2019, 7:27 PM IST
ರಾಮನಗರ: ಡಿ.ಕೆ.ಶಿವಕುಮಾರ್ ಫೋನ್ ಕದ್ದಾಲಿಕೆ ಮಷಿನ್ ಖರೀದಿ ಮಾಡಿದ್ದಾರೆ ಅದರಿಂದಲೇ ಫೋನ್ ಟ್ಯಾಪಿಂಗ್ ಮಾಡಿಸುತ್ತಿದ್ದಾರೆಂದು ಹೇಳಿದ್ದ ಯೋಗೇಶ್ವರ್ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಯೋಗೇಶ್ವರ್ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಈಗ ಸಿಬಿಐ ಅವರ ಕೈಯಲ್ಲಿದೆ ಹಾಗಾಗಿ ಅವರದ್ದು, ನಮ್ಮದು ಎಲ್ಲವನ್ನು ಸಿಬಿಐ ತನಿಖೆಗೆ ಕೊಡಲಿ ಎಂದು ಹೇಳಿಕೆ ನೀಡಿದ್ದಾರೆ.
ಕನಕಪುರದ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಆಗಿರುವ ವಿಚಾರ ಆ ವಿಚಾರ ನನಗೆ ಸರಿಯಾಗಿ ಗೊತ್ತಿಲ್ಲ ಆರ್ಡರ್ ಕಾಪಿ ನನ್ನ ಕೈಗೆ ಇನ್ನು ಬಂದಿಲ್ಲ ಗೊತ್ತಿಲ್ಲದೆ ನಾನು ಆ ವಿಚಾರದ ಬಗ್ಗೆ ಮಾತನಾಡಲ್ಲ.
ಕೆ.ಪಿ.ಸಿ.ಸಿ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಮಾಡಿರುವ ವಿಚಾರ ನಾನು ಯಾವ ಸ್ಥಾನಕ್ಕೂ ಲಾಭಿ ಮಾಡುತ್ತಿಲ್ಲ ಸುಮ್ಮನೆ ಇವನು ಕೆ.ಪಿ.ಸಿ.ಸಿ ಸ್ಥಾನಕ್ಕೆ ಲಾಭಿ ಮಾಡ್ತಿದ್ದಾನೆಂದು ಮಾಧ್ಯಮಗಳಲ್ಲಿ ತೋರಿಸ್ತಿದ್ದಾರೆ ಆದರೆ ನನಗೆ ಯಾವ ಸ್ಥಾನವೂ ಬೇಕಿಲ್ಲ, ಸದ್ಯಕ್ಕೆ ನನ್ನನ್ನ ಫ್ರೀಯಾಗಿ ಬಿಟ್ರೆ ಸಾಕು, ಜನರೇ ನನ್ನ ಆಸ್ತಿ.
ಚನ್ನಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಹೇಳಿಕೆ