ಸಚಿವರ ವಿರುದ್ಧ ರೈತರ ಪ್ರತಿಭಟನೆ
Team Udayavani, May 22, 2020, 5:06 AM IST
ಕೊಳ್ಳೇಗಾಲ: ಕಾನೂನು ಸಚಿವ ಮಾಧುಸ್ವಾಮಿ ರೈತ ಮಹಿಳೆಯನ್ನು ಅವಾಚ್ಯ ಶಬ್ಧ ಬಳಸಿ ನಿಂದಿಸಿರುವುದನ್ನು ಖಂಡಿಸಿ ಸಚಿವರ ಪ್ರತಿಕೃತಿ ದಹಿಸಲು ಮುಂದಾದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರನ್ನು ಪೊಲೀಸರು ಬಂಧಿಸಿದರು.
ಪಟ್ಟಣದಲ್ಲಿ ಸೇರಿದ ರೈತ ಮುಖಂಡರು ಸಚಿವ ಮಾಧುಸ್ವಾಮಿ ವಿರುದ್ಧ ಘೋಷಣೆ ಕೂಗುತ್ತಾ ರೈತ ಮಹಿಳೆಯನ್ನು ಅಪಮಾನ ಮಾಡಿದ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಘೋಷಣೆಗಳನ್ನು ಕೂಗುತ್ತಾ ಇಂದಿರಾ ಕ್ಯಾಂಟೀನ್ ಮುಂದೆ ಸಚಿವರ ಪ್ರತಿಕೃತಿ ದಹಿಸಲು ಪ್ರಯತ್ನಿಸುತ್ತಿದ್ದಂತೆ ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಸಚಿವರ ಪ್ರತಿಕೃತಿ ದಹಿಸಲು ಮುಂದಾದ ರೈತ ಮುಖಂಡರನ್ನು ಬಂಧಿಸಿ ಪಟ್ಟಣ ಠಾಣೆಗೆ ಕರೆತರುತ್ತಿದ್ದಂತೆ ರೈತ ಮುಖಂಡ ಮಹದೇವಶೆಟ್ಟಿ ಕುಸಿದು ಬಿದ್ದ ಪರಿಣಾಮ ಅವರ ನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವರಾಮು, ತಾಲೂಕು ಅಧ್ಯಕ್ಷ ಗೌಡೇಗೌಡ, ಉಪಾಧ್ಯಕ್ಷ ಜುವೇಲ್, ಕಾರ್ಯದರ್ಶಿ ರವಿನಾಯ್ಡು, ಅಖೀಲ ಭಾರತ ಛಲವಾದಿ ಮಹಾಸಭಾ ಜಿಲ್ಲಾ ಧ್ಯಕ್ಷ ಬಸವರಾಜು, ರೈತ ಮುಖಂಡರಾದ ಬಸವಣ್ಣ, ನಟೇಶ್, ಜಯರಾಜು, ದೊಡ್ಡಯ್ಯ ಇತರರರಿದ್ದರು.