ವಿಡಿಯೋ ವೈರಲ್: ಜೀಪ್ ಚಾಲಕನ ಸಮಯಪ್ರಜ್ಞೆ ಆನೆ ದಾಳಿಯಿಂದ ಬಚಾವಾಗಿ ಬಂದ ಪ್ರವಾಸಿಗರು!
Team Udayavani, Mar 15, 2021, 3:22 PM IST
ಯಳಂದೂರು (ಚಾಮರಾಜನಗರ): ಜಿಲ್ಲೆಯ ಪ್ರಸಿದ್ಧ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಕೆ.ಗುಡಿಯಲ್ಲಿ ಸೋಮವಾರ ಸಫಾರಿಗೆ ತೆರಳಿದ ವಾಹನದ ಹಿಂದೆ- ಮುಂದೆ ಎರಡು ಆನೆಗಳು ಹಿಂಬಾಲಿಸಿದ್ದು ವಾಹನ ಚಾಲಕನ ಸಮಯಪ್ರಜ್ಞೆಯಿಂದ ಪ್ರವಾಸಿಗರು ಬಚಾವಾಗಿ ಬಂದಿರುವ ಘಟನೆ ನಡೆದಿದೆ.
ಕೆ.ಗುಡಿಯಲ್ಲಿ ಸಫಾರಿಗೆ ತೆರಳಿದ್ದ ಸಂದರ್ಭದಲ್ಲಿ ಇಲ್ಲಿನ ಭತ್ತದ ಗದ್ದೆ ಕೆರೆಯ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಕಿಡಿಗೇಡಿಗಳ ಕೊಡಲಿ ಏಟಿಗೆ ನಾಶವಾದ ಸಾಧಕ ಬೆಳೆಸಿದ ಸಾಲು ಮರಗಳು
ವಾಹನ ಚಲಿಸುವ ವೇಳೆ ಆನೆಗಳ ಗುಂಪು ಕಾಡಿನ ರಸ್ತೆಯ ಪಕ್ಕದಲ್ಲಿ ನಿಂತಿದೆ. ಆದರೆ ಇದ್ದಕ್ಕಿದ್ದಂತೆ ಒಂದು ಆನೆ ಸಫಾರಿಯ ಜೀಪ್ ನ ಹಿಂಭಾಗದಲ್ಲಿ ಓಡಿಸಿಕೊಂಡು ಬಂದಿದೆ. ಚಾಲಕ ನಾಗರಾಜು ವೇಗವಾಗಿ ವಾಹನ ಚಾಲನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ವಾಹನದ ಮುಂಭಾಗದಲ್ಲಿ ಮತ್ತೊಂದು ಆನೆ ಬಂದಿದೆ, ಆದರೂ ಕೂಡ ಜೀಪ್ ಚಾಲಕ ಧೈರ್ಯದಿಂದ ವಾಹನ ಚಲಾಯಿಸಿದ್ದಾರೆ. ವಾಹನ ಜೋರಾಗಿ ಚಲಾಯಿಸಿದ್ದರಿಂದ ಆನೆ ವೇಗವಾಗಿ ಓಡಿ ರಸ್ತೆಯಿಂದ ಸರಿದು ಕಾಡಿಗೆ ಓಡಿದೆ.
ಇದನ್ನೂ ಓದಿ: ಮತ್ತೆ ಲಯಕ್ಕೆ ಮರಳಿದ ವಿರಾಟ್: ಒಂದು ಪಂದ್ಯ- ಹಲವು ದಾಖಲೆಗಳು
ಜೀಪ್ ನಲ್ಲಿದ್ದ ಪ್ರವಾಸಿಗರೊಬ್ಬರು ಈ ವೀಡಿಯೊವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಸಿಗರನ್ನು ಆನೆ ದಾಳಿಯಿಂದ ಕಾಪಾಡಿದ ಚಾಲಕನಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ