ಕೇರಳ ಲಾಟರಿ ಅಕ್ರಮ ಮಾರಾಟ: ಓರ್ವ ಬಂಧನ
Team Udayavani, May 24, 2022, 4:47 PM IST
ಯಳಂದೂರು: ಸಮೀಪದ ಗೂಳೀಪುರ ಗ್ರಾಮದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಗೂಳೀಪುರ ಗ್ರಾಮದ ನಂಜುಂಡಸ್ವಾಮಿಅಲಿಯಾಸ್ ಜುಟ್ಟು ಎಂಬಾತನೇ ಬಂಧಿತಆರೋಪಿ. ಲಾಟರಿ ಮಾರಾಟ ಮಾಡುತ್ತಿದ್ದ ಖಚಿತಮಾಹಿತಿ ಪಡೆದುಕೊಂಡ ಸಂತೆಮರಹಳ್ಳಿ ಠಾಣೆಯ ಪಿಎಸ್ಐ ತಾಜುದ್ದೀನ್ ನೇತೃತ್ವದ ಪೊಲೀಸರ ತಂಡದಾಳಿ ನಡೆಸಿದೆ. ಈತನಿಂದ ಕೇರಳ ರಾಜ್ಯದ 1,676 ಲಾಟರಿ ಟಿಕೆಟ್ಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 67,040 ರೂ. ಎಂದುಅಂದಾಜಿಸಲಾಗಿದೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೇರಳದಿಂದ ನಿತ್ಯ ಸ್ಥಳೀಯವಾಗಿ ಲಾಟರಿ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಅಲ್ಲಿಂದ ಬರುವ ಬಸ್, ಇತರೆ ವಾಹನಗಳನ್ನು ಚೆಕ್ಪೋಸ್ಟ್ ನಲ್ಲಿ ತಪಾಸಣೆ ಮಾಡಬೇಕಿದೆ.
ದಾಳಿಯಲ್ಲಿ ಪಿಎಸ್ಐ ತಾಜುದ್ದೀನ್, ಪೇದೆಗಳಾದ ರಮೇಶ್,ಮಾದೇಶ್, ಸಿದ್ದರಾಜು, ಪ್ರಭುಸ್ವಾಮಿ, ಯಶ್ವಂತ್,ಸುಂದ್ರಪ್ಪ, ರಾಜು, ಸುರೇಶ್, ಚಾಲಕರಾದ ಉಮೇಶ್, ಮಹಾದೇವ್ ಭಾಗವಹಿಸಿದ್ದರು.