ತಿದ್ದುಪಡಿ ಕಾಯ್ದೆಗೆ ಕಿಸಾನ್ ಸಂಘ ವಿರೋಧ
Team Udayavani, Aug 4, 2020, 8:20 AM IST
ಯಳಂದೂರು: ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರ ಮರಣ ಶಾಸನವಾಗಿದೆ. ಇದನ್ನು ಕೂಡಲೇ ರದ್ದುಮಾಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಸದಸ್ಯರು ಉಪತಹಶೀಲ್ದಾರ್ ವೈ.ಎಂ. ನಂಜಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, 1961ರ ಭೂ ಸುಧಾರಣಾ ಕಾಯ್ದೆಯಲ್ಲಿರುವ 79 ಎಸಿಬಿ ಮತ್ತು 80ನೇ ಕಾಲಂಗಳನ್ನು ರದ್ದುಗೊಳಿಸಿ, ಕೃಷಿ ಭೂಮಿಯ ಖರೀದಿ ಮಿತಿಯನ್ನು ಹೆಚ್ಚುಗೊಳಿಸುವ ಕಲಂ 63ಕ್ಕೆ ಬದಲಾವಣೆಯನ್ನು ತರುತ್ತಿರುವ ಕ್ರಮ ಸರಿಯಾಗಿಲ್ಲ. ಈ ನಿರ್ಧಾರದಿಂದ ಕೃಷಿ ಕ್ಷೇತ್ರ ಸರ್ವನಾಶವಾಗುತ್ತದೆ ಎಂದರು.
ರೈತರಿಗೆ ಕೋವಿಡ್ ಸಂಕಷ್ಟ: ಕೋವಿಡ್ ಸಂಕಷ್ಟದಿಂದ ರೈತರು ಪರದಾಡುತ್ತಿದ್ದಾರೆ. ಮಾನವ ಕುಲವೇ ತತ್ತರಿಸಿರುವ ಇಂತಹ ಸಂದರ್ಭದಲ್ಲಿ ರೈತರ ಮರಣ ಶಾಸಕನವಾಗಿರುವ ಈ ಕಾನೂನು ಜಾರಿಯಾದರೆ, ಗ್ರಾಮೀಣ ಭಾಗದ ರೈತರು ಬೀದಿಗೆ ಬೀಳಲಿದ್ದಾರೆ. ಉಳ್ಳವರ ಪಾಲಿಗೆ ಜಮೀನು ಸೇರಲಿದೆ. ಈ ಬಗ್ಗೆ ಸರ್ಕಾರ ಕೃಷಿ ಪರಿಣಿತರ ರೈತರ ಸಲಹೆಗಳನ್ನು ಪಾಲಿಸದೆ ಏಕಾಏಕಿ ನಿರ್ಧಾರ ಮಾಡಿರುವುದು ಸರಿಯಲ್ಲ. ಇದಕ್ಕೆ ಸದನದ ಕಲಾಪಗಳೂ ಇಲ್ಲದ ಕಾಲದಲ್ಲಿ ವಿಷಯ ಚರ್ಚೆಗೊಳ್ಳದೆ ನಿರ್ಧಾರ ಮಾಡಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಇದನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಉಪ ತಹಶೀಲ್ದಾರ್ ವೈ.ಎಂ.ನಂಜಯ್ಯರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಹೋಬಳಿ ಅಧ್ಯಕ್ಷ ನಾಗಪ್ಪ, ಶಾಂತರಾಜು, ಚೇತನ್, ಸೋಮಣ್ಣ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ