ಕೊಳ್ಳೇಗಾಲ ಎಸಿ ನಿಖೀತಾ ಚಿನ್ನಸ್ವಾಮಿ ಅಧಿಕಾರ ಸ್ವೀಕಾರ
Team Udayavani, Feb 3, 2019, 7:20 AM IST
ಕೊಳ್ಳೇಗಾಲ: ಉಪ ವಿಭಾಗಾಧಿಕಾರಿ ಬಿ.ಪೌಜಿಯಾ ತರನ್ನುಮ್ ವರ್ಗಾವಣೆ ಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಉಪವಿಭಾಗ ಅಧಿಕಾರಿ ನಿಖೀತಾ ಎಂ.ಚಿನ್ನಸ್ವಾಮಿ ಅಧಿಕಾರ ಸ್ವೀಕರಿಸಿದರು.
ಉಪವಿಭಾಗಾಧಿಕಾರಿಯಾಗಿದ್ದ ಬಿ.ಪೌಜಿಯಾ ತರನ್ನುಮ್ ಮುಂಬಡ್ತಿ ಹೊಂದಿ ಕಲ್ಬುರ್ಗಿ ಮಹಾನಗರ ಪಾಲಿಕೆ ಆಯುಕ್ತರಾಗಿ ನೇಮಕಗೊಂಡಿದ್ದರು. ತೆರೆವಾದ ಸ್ಥಾನಕ್ಕೆ ಮೈಸೂರು ಮಹಾನಗರ ಪಾಲಿಕೆಯ ಪರೀಕ್ಷಾರ್ಥಿ ಉಪ ಆಯುಕ್ತರಾದ ನಿಖೀತಾ ಎಂ.ಚಿನ್ನಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದ ಮೇರೆಗೆ ಅವರು ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು, ಕಚೇರಿಗೆ ಬರುವ ಸಾರ್ವಜನಿಕರು ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.