ಅರಿಶಿಣ ಬೆಳೆಯ ಮಧ್ಯೆ ಗಾಂಜಾ ಬೆಳೆದಿದ್ದ ವ್ಯಕ್ತಿ ಬಂಧನ
Team Udayavani, Nov 8, 2020, 7:36 AM IST
ಹನೂರು (ಚಾಮರಾಜನಗರ): ಜಮೀನಿನ ಅರಿಶಿಣ ಬೆಳೆಯ ಮಧ್ಯೆ ಗಾಂಜಾ ಬೆಳೆದಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ
ತಾಲೂಕು ವ್ಯಾಪ್ತಿಯ ನಾಗನಕಟ್ಟೆ ದೊಡ್ಡಿ ಗ್ರಾಮದ ಒಡಿವೇಲು ಎಂಬಾತನೇ ಬಂಧಿತ ಆರೋಪಿಯಾಗಿದ್ದು ಈತ ಜಮೀನಿನಲ್ಲಿ ಗಾಂಜಾ ಬೆಳೆದಿದ್ದಾನೆ ಎಂಬ ಮಾಹಿತಿ ದೊರೆತ ಕೂಡಲೇ ಕಾರ್ಯಪ್ರವೃತ್ತರಾದ ಡಿವೈಎಸ್ಪಿ ನಾಗರಾಜು ಮತ್ತು ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು 290 ಕೆಜಿ ತೂಕದ 120 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಫ್ಯಾಶನ್ ಗೋಲ್ಡ್ ಜುವೆಲರಿ ವಂಚನೆ ಪ್ರಕರಣ! ಮಂಜೇಶ್ವರ ಶಾಸಕ ಖಮರುದ್ದೀನ್ ಬಂಧನ
ದಾಳಿಯಲ್ಲಿ ಹನೂರು ವೃತ್ತನಿರೀಕ್ಷಕ ರವಿ ನಾಯಕ್ ಸಬ್ಇನ್ಸ್ಪೆಕ್ಟರ್ ನಾಗೇಶ್ ಸಿಬ್ಬಂದಿಗಳಾದ ರಾಘವೇಂದ್ರ ಚಂದ್ರು ಸೋಮಣ್ಣ ರಾಮಶೆಟ್ಟಿ ಇನ್ನಿತರರು ಭಾಗವಹಿಸಿದ್ದರು