ಚಾ.ನಗರ ಜಿಲ್ಲೆಯಲ್ಲಿಂದು ಆರು ಹೊಸ ಸೋಂಕು ಪ್ರಕರಣ ದೃಢ: 7 ಮಂದಿ ಗುಣಮುಖ
Team Udayavani, Jul 7, 2020, 5:57 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ ಆರು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಂದು ಏಳು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 89 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಒಟ್ಟು ದೃಢೀಕೃತ ಪ್ರಕರಣಗಳು 120. ಆದರೆ ಇದರಲ್ಲಿ ಒಟ್ಟಾರೆ 31 ಮಂದಿ ಗುಣಮುಖರಾಗಿರುವುದರಿಂದ 89 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ 257 ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಆರು ಪಾಸಿಟಿವ್ ವರದಿಯಾಗಿದೆ. ಉಳಿದ 251 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ.
ಇಂದಿನ ಪ್ರಕರಣಗಳಲ್ಲಿ ಐದು ಪ್ರಕರಣಗಳು ಗುಂಡ್ಲುಪೇಟೆ ಪಟ್ಟಣಕ್ಕೆ ಸೇರಿವೆ. ಒಂದು ಪ್ರಕರಣ ಕೊಳ್ಳೇಗಾಲ ತಾಲೂಕಿನದ್ದಾಗಿವೆ. ವಿವರ ಇಂತಿದೆ:
ರೋಗಿ ಸಂಖ್ಯೆ 116: 14 ವರ್ಷದ ಬಾಲಕ ಗುಂಡ್ಲುಪೇಟೆ, ಸಂಖ್ಯೆ: 117: 45 ವರ್ಷದ ಮಹಿಳೆ, ಗುಂಡ್ಲುಪೇಟೆ, ಸಂಖ್ಯೆ 118: 20 ವರ್ಷದ ಯುವತಿ, ಗುಂಡ್ಲುಪೇಟೆ, ಸಂಖ್ಯೆ 119: 12 ವರ್ಷದ ಬಾಲಕಿ, ಗುಂಡ್ಲುಪೇಟೆ. ಸಂಖ್ಯೆ 120: 25 ವರ್ಷದ ಯುವಕ, ಗುಂಡ್ಲುಪೇಟೆ. ಸಂಖ್ಯೆ 121: 45 ವರ್ಷದ ಮಹಿಳೆ (ಇವರೆಲ್ಲರೂ ಪಿ.18544 ರೋಗಿಯ ಸಂಪರ್ಕಿತರು) ಕೊಳ್ಳೇಗಾಲ ತಾಲೂಕಿನ ನಂಜಯ್ಯನಕಟ್ಟೆ. (ಬೆಂಗಳೂರಿನಿಂದ ಬಂದವರು).
ಇಂದು ಗುಣಮುಖರಾಗಿ ಬಿಡುಗಡೆಯಾದವರು: 24 ವರ್ಷದ ಯುವತಿ, ಬದನಗುಪ್ಪೆ, ಚಾ.ನಗರ ತಾ. 55 ವರ್ಷದ ಪುರುಷ ಗೌಡಹಳ್ಳಿ ಯಳಂದೂರು ತಾ., 45 ವರ್ಷದ ಮಹಿಳೆ ಗೌಡಹಳ್ಳಿ, 41 ವರ್ಷದ ಮಹಿಳೆ ಬರಗಿ, ಗುಂಡ್ಲುಪೇಟೆ ತಾ., 50 ವರ್ಷದ ಮಹಿಳೆ ಗುಂಡ್ಲುಪೇಟೆ ಪಟ್ಟಣ, 25 ವರ್ಷದ ಯುವತಿ, ಗುಂಡ್ಲುಪೇಟೆ ಪಟ್ಟಣ, 17 ವರ್ಷದ ಯುವತಿ, ಕೊಳ್ಳೇಗಾಲ ಪಟ್ಟಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ