ಹೊರ ರೋಗಿಗಳಿಗೆ ಚಿಕಿತ್ಸೆ ಏಕಿಲ್ಲ?
Team Udayavani, May 8, 2021, 5:37 PM IST
ಯಳಂದೂರು: ತಾಲೂಕು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿಮಾರ್ಪಡಿಸಲಾಗಿದೆ. ಆದರೆ ಇಲ್ಲಿ ಹೊರರೋಗಿಗಳಿಗೆ ಚಿಕಿತ್ಸೆ ಏಕೆ ನೀಡುತ್ತಿಲ್ಲ. ಇಲ್ಲೇ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ಇದ್ದು ಇಲ್ಲಿಂದಲೇಕೋವಿಡ್ ರೋಗಿಗಳೂ ಓಡಾಡುತ್ತಿದ್ದಾರೆ.
ಇದು ಸರಿಯಾದ ಕ್ರಮವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತರಾಟೆಗೆ ತೆಗೆದುಕೊಂಡರು ಪಟ್ಟಣದ ತಾಲೂಕು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಇದೆಲ್ಲವನ್ನೂ ಜಿಲ್ಲಾಧಿಕಾರಿಗಳು ಹೇಳಬೇಕೇ? ಇದಕಲ್ಲಾ ಇನ್ನೂ ನಾಮಫಲಕ ಏಕೆ ಹಾಕಿಲ್ಲ.
ಸ್ವಾಬ್ ಕಲೆಕ್ಷನ್,ಕೋವಿಡ್ ರೋಗಿಗಳ ಕೊಠಡಿ, ನೋಂದಣಿ ಕೇಂದ್ರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಹೇಗೆ ಸಿಗುತ್ತದೆ ಎಂದು ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗೆ ತರಾಟೆ ತೆಗೆದುಕೊಂಡರು.ಕೂಡಲೇ ಕೋವಿಡ್ ರೋಗಿಗಳು ಓಡಾಡಲು ಬೇರೆ ದಾರಿಮಾಡಬೇಕು.
ಬ್ಯಾರಿಕೇಡ್ ಹಾಕಿ ಇತರರಿಗೆ ಪ್ರವೇಶ ನೀಡಬಾರದು.ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.