ಸೋಲಿಗರು ಲಸಿಕೆ ಪಡೆಯಲು ಮನವೊಲಿಕೆ
Team Udayavani, May 16, 2021, 3:48 PM IST
ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ಸೋಲಿಗರು ಲಸಿಕೆಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು,ಅವರ ಮನವೊಲಿಸಲಾಗುವುದು ಎಂದುಶಾಸಕ ಎನ್. ಮಹೇಶ್ ತಿಳಿಸಿದರು.
ಬಿಳಿಗಿರಿರಂಗನಬೆಟ್ಟದ ವಿಜಿಕೆಕೆ ಆಸ್ಪತ್ರೆಗೆಶನಿವಾರ ಭೇಟಿ ನೀಡಿ ವೈದ್ಯರೊಂದಿಗೆಸಮಾಲೋಚನೆ ನಡೆಸಿದ ಅವರು, ಬೆಟ್ಟದಲ್ಲಿಇದುವರೆಗೆ 8 ಪಾಸಿಟಿವ್ ಕೇಸ್ಗಳುಬಂದಿದ್ದು ಇದರಲ್ಲಿ ಕೇವಲ ಒಬ್ಬರು ಮಾತ್ರಸೋಲಿಗರಾಗಿದ್ದಾರೆ. ಎಲ್ಲರೂ ಕೂಡ ಹೋಂಐಸೋಲೇಷನ್ನಲ್ಲೇ ಇದ್ದಾರೆ ಎಂದರು.
ನರೇಗಾದಡಿ ಬೆಟ್ಟದಲ್ಲಿ ಕೆಲಸ ಮಾಡಲುಅನುಕೂಲವಾಗುವಂತೆ ಕ್ರಮ ವಹಿಸಲಾಗುವುದು. ಇಲ್ಲಿ ಒಟ್ಟು 13 ಸಣ್ಣಪುಟ್ಟಕೆರೆಗಳಿದ್ದು ಈ ಕಾಮಗಾರಿ ಕೈಗೊಳ್ಳಲು ಸಲಹೆನೀಡಲಾಗುವುದು ಎಂದರು. ಗ್ರಾಮೀಣಹಾಗೂ ನಗರ ಭಾಗದ ಪತ್ರಕರ್ತರನ್ನುಕೋವಿಡ್ ವಾರಿಯಾರ್ಸ್ ಎಂದುಘೋಷಿಸಬೇಕು. ಇವರಿಗೂ ಸರ್ಕಾರದಸೌಲಭ್ಯ ತಲಪಿಸಬೇಕು.
ಈ ಬಗ್ಗೆ ಸಚಿವರಸಭೆಯಲ್ಲಿ ಮಾತನಾಡುತ್ತೇನೆ ಎಂದರು. ಈವೇಳೆ ತಹಶೀಲ್ದಾರ್ ಜಯಪ್ರಕಾಶ್, ಇಒಉಮೇಶ್ ಮತ್ತಿತರರು ಹಾಜರಿದ್ದರು.