ಹಣ ಹೊಂದಿಸಲಾಗದೇ ಸ್ಥಗಿತಗೊಳ್ಳಲಿದ್ದ ಮದುವೆಗೆ ಸಹಾಯ ಮಾಡಿದ ಆರಕ್ಷಕರು
Team Udayavani, Nov 10, 2018, 6:20 AM IST
ಚಾಮರಾಜನಗರ: ಖರ್ಚು, ವೆಚ್ಚಗಳಿಗೆ ಹಣವನ್ನು ಹೊಂದಿಸಲಾಗದೇ ಮದುವೆಯನ್ನೇ ನಿಲ್ಲಿಸಲು ವಧುವಿನ ಕಡೆಯವರು
ಮುಂದಾಗಿದ್ದಾಗ ನಗರದ ಪೂರ್ವ ಠಾಣೆ ಪೊಲೀಸರು ಹಣದ ನೆರವು ನೀಡಿ ಮದುವೆ ನಡೆಯಲು ಸಹಕರಿಸಿದ ಪ್ರಸಂಗ ನಡೆದಿದೆ.
ತಾಲೂಕಿನ ಜ್ಯೋತಿಗೌಡನಪುರದ ಸಿದ್ದರಾಜಶೆಟ್ಟಿ ಪುತ್ರಿ ಅಂಬಿಕಾ ಹಾಗೂ ತಮಿಳುನಾಡಿನ ತಾಳವಾಡಿ ಪಿರ್ಕಾದ ಪಾಳ್ಯ ಗ್ರಾಮದ ರಾಜಣ್ಣನ ಪುತ್ರ ರವೀಂದ್ರನಿಗೆ ನ.8 ಮತ್ತು 9ರಂದು ವಿವಾಹ ನಿಶ್ಚಯ ವಾಗಿತ್ತು.
ತೆರಕಣಾಂಬಿಯ ವೆಂಕಟೇಶ್ವರ ಭವನದಲ್ಲಿ ವಿವಾಹ ನಡೆಸಲು ನಿಶ್ಚಯಿಸಿ ಲಗ್ನ ಪತ್ರಿಕೆ ಮುದ್ರಿಸಿ ನೆಂಟರಿಷ್ಟರಿಗೆ ಆಹ್ವಾನಿಸಲಾಗಿತ್ತು.
ಮದುವೆ ಹತ್ತಿರ ಬರುತ್ತಿದ್ದಂತೆ 2 ಲಕ್ಷ ರೂ. ಸಾಲ ಕೊಡುತ್ತೇನೆಂದು ಹೇಳಿದ್ದ ವ್ಯಕ್ತಿ ಕೊನೇ ಘಳಿಗೆಯಲ್ಲಿ ಕೈಕೊಟ್ಟಿದ್ದ. ಸಾಲದ ಹಣ ದೊರೆಯದ ಹಿನ್ನೆಲೆಯಲ್ಲಿ ನಿಗದಿತ ದಿನದಂದು ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಸಿದ್ದರಾಜಶೆಟ್ಟಿ ಕೈಚೆಲ್ಲಿದ್ದರು ಎನ್ನಲಾಗಿದೆ.
ದಿಢೀರ್ ಬೆಳವಣಿಗೆಯಿಂದ ಕಂಗಾಲಾದ ವರ ರವೀಂದ್ರ ನಗರದ ಪೂರ್ವ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ.
ಸಬ್ಇನ್ಸ್ಪೆಕ್ಟರ್ ಪುಟ್ಟಸ್ವಾಮಿ, ವಧುವಿನ ಪಾಲಕರು ಹಾಗೂ ಬಂಧುಗಳನ್ನು ಕರೆಸಿ ವಿಚಾರಿಸಿದರು. ಕೇವಲ ಮದುವೆ ದಿನದ
ಊಟದ ಖರ್ಚಿಗೆ ಹಣ ಇಲ್ಲ ಎಂಬ ಕಾರಣಕ್ಕೆ ಮದುವೆ ನಿಲ್ಲಿಸುವುದು ಬೇಡ. ಹಣ ಹೊಂದಿಸಿ ಕೊಡುತ್ತೇವೆ, ಅದೇ ಛತ್ರದಲ್ಲಿ ನಿಗದಿತ ದಿನವೇ ಮದುವೆ ಮಾಡಿಕೊಳ್ಳಬೇಕು ಎಂದು ತಮ್ಮ ಸ್ವಂತ ಖರ್ಚಿನಲ್ಲಿ 20 ಸಾವಿರ ರೂ.ಗಳನ್ನು ವಧುವಿನ ತಂದೆಗೆ ನೀಡಿದರು.
ಬಳಿಕ ತಮ್ಮ ಸಿಬ್ಬಂದಿಗಳಿಂದ ಕೈಲಾದಷ್ಟು ಹಣ ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು. ಇದರಿಂದ ಠಾಣೆಯಲ್ಲಿಯೇ ಸುಮಾರು ಅಡುಗೆ ಸಾಮಗ್ರಿಗಳಿಗೆ ಆಗುವಷ್ಟು ಹಣ ಹೊಂದಿಕೆಯಾಯಿತು. ಅಲ್ಲದೇ ಮದುವೆ ದಿನವಾದ ಶುಕ್ರವಾರ ಸಬ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ತೆರಕಣಾಂಬಿಗೆ ತೆರಳಿ ನೂತನ ವಧು ವರರಿಗೆ ಶುಭ ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್