ಕಾನನದ ಪ್ರಾಕೃತಿಕ ರುದ್ರನಿಗೆ ಕಾಡಿನ ಮಕ್ಕಳ ವಿಶಿಷ್ಟ ಪೂಜೆ


Team Udayavani, Mar 12, 2021, 7:25 PM IST

Chamaraj nagara

ಯಳಂದೂರು: ಶಿವ ಸರ್ವ ಸ್ವರೂಪಿ ಇವನಿಗೆ ಆರಾಧಿಸದ ಭಕ್ತರಿಲ್ಲ.ಕಾಡುಮೇಡುಗಳಲ್ಲಿ, ದಟ್ಟ ಕಾನನದಲ್ಲಿ ಲಿಂಗಸ್ವರೂಪಿಯಾಗಿ ಈತಎಲ್ಲೆಲ್ಲೂ ಪೂಜಿಸಲ್ಪಡುವ ದೈವನಾಗಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಬಿಳಿಗಿರಿರಂಗನಬೆಟ್ಟದ ದಟ್ಟ ಕಾನನದ ಮಧ್ಯ ಗಿರಿಜನರಾದ ಸೋಲಿಗರು ಈತನನ್ನು ಪೂಜಿಸುವ ಪರಿ ವಿಭಿನ್ನ, ವಿಶಿಷ್ಟ.

ಈ ಕಾಡಿನಲ್ಲಿ ಹರಿಯುವ ಭಾರ್ಗವಿ ನದಿ ದಡದಲ್ಲಿ 500ಕ್ಕೂ ಹೆಚ್ಚು ವರ್ಷಗಳ ಇತಿಹಾವುಳ್ಳ ದೊಡ್ಡ ಸಂಪಿಗೆ ಮರವಿದ್ದು ಇದರ ಕೆಳಗೆ ಅನೇಕ ಲಿಂಗದಾಕಾರದ ಕಲ್ಲುಗಳು ಇವೆ. ಅನಾದಿ ಕಾಲದಿಂದಲೂ ಇಲ್ಲಿನ ಮೂಲ ನಿವಾಸಿಗಳಾದ ಸೋಲಿಗರು ಇದನ್ನು ಪೂಜಿಸುವ ವಾಡಿಕೆ ಇದೆ. ಪ್ರತಿ ವರ್ಷವೂ ಶಿವರಾತ್ರಿಯಂದು ಇಲ್ಲಿ ಇವರು ವಿಶೇಷ ಪೂಜೆ ಮಾಡುವ ಮೂಲಕ ಭಕ್ತಿ ಮೆರೆಯುತ್ತಾರೆ.

ದೊಡ್ಡ ಸಂಪಿಗೆ ಕಾಡು: ಪೂರ್ವ ಹಾಗೂ ಪಶ್ಚಿಮ ಘಟ್ಟಗಳ ಸಂಗಮ ಸ್ಥಾನವಾಗಿರುವ ಬಿಳಿಗಿರಿರಂಗನಬೆಟ್ಟ ವಿಭಿನ್ನ ಪರಿಸರವನ್ನು ಹೊಂದಿದೆ. ಒಂದೇ ಅರಣ್ಯದಲ್ಲಿ 6 ಕಾಡು ಪ್ರಬೇಧಗಳನ್ನು ಒಳಗೊಂಡ ಸ್ಥಳ ಇದು. ಸ್ಥಳಕ್ಕೂ ತನ್ನ ಪ್ರಾಕೃತಿಕ ಸೌಂದರ್ಯವನ್ನು ಭಿನ್ನ ಮಾಡಿಕೊಳ್ಳುತ್ತದೆ. ದಟ್ಟ ಅಡವಿಯ ನಡುವೆ ಇರುವ ನಿತ್ಯಹರಿದ್ವರ್ಣ ಕಾಡುಗಳ ಮಧ್ಯ ಭಾರ್ಗವಿ ನದಿ ಹರಿಯುತ್ತದೆ. ಮಾತೃಹತ್ಯೆಯ ಶಾಪ ವಿಮೋಚನೆಗಾಗಿ ಇಲ್ಲಿಗೆ ಪರಶುರಾಮ ಬಂದು ಸ್ನಾನ ಮಾಡಿ ದೋಷ ಪರಿಹಾರ ಮಾಡಿಕೊಂಡು ಶಿವನನ್ನು ಜಪಿಸಿದ ಎಂದು ಪೌರಾಣಿಕ ಹಿನ್ನೆಲೆ ಇರುವ ಸ್ಥಳವೇ ದೊಡ್ಡ ಸಂಪಿಗೆ ಕಾಡು.

ಹರಿ-ಹರರ ಆವಾಸ ಸ್ಥಾನ: ಸಾಮಾನ್ಯವಾಗಿ ಶೈವ ಅಥವಾ ವೈಷ್ಣವ ಪರಂಪರೆ ಒಂದೆಡೆ ಕಾಣುವುದು ಅಪರೂಪ. ಆದರೆ, ಬಿಳಿಗಿರಿ ರಂಗನ ಬೆಟ್ಟದಲ್ಲಿ ಇವೆರಡು ಪರಂಪರೆಯನ್ನು ಆರಾಧಿಸುವ ಜನರಿದ್ದಾರೆ. ಸೋಲಿಗರು ಬಿಳಿಗಿರಿರಂಗನಾಥಸ್ವಾಮಿಯನ್ನು ತಮ್ಮ ಜನಾಂಗದ ಕುಸುಮಾಲೆಯನ್ನು ವರಿಸಿದ ಹಿನ್ನೆಲೆಯಲ್ಲಿ ರಂಗಭಾವನೆಂದು ಪೂಜಿಸುತ್ತಾರೆ. ಅದರಂತೆ ಇಲ್ಲಿರುವ ದೊಡ್ಡ ಸಂಪಿಗೆಯ ಮರದ ಕೆಳಗಿನ ಲಿಂಗಗಳು ಹಾಗೂ ಗಂಗಾಧರೇಶ್ವರನ ತೇರನ್ನು ಸಿಂಗರಿಸಿ ಎಳೆಯುವ ಕೆಲಸವನ್ನು ಮಾಡುವ ಮೂಲಕ ಶಿವನ ಆರಾಧಕರೂ ಆಗುತ್ತಾರೆ.

ಪ್ರತಿ ಶಿವರಾತ್ರಿ ಜಾಗರಣೆ: ದೊಡ್ಡ ಸಂಪಿಗೆ ಮರದ ಬುಡದಲ್ಲಿರುವ ಲಿಂಗಗಳಿಗೆ ಶಿವರಾತ್ರಿಯಂದು ಅಭಿಷೇಕ ಮಾಡಿ ಪೂಜಿಸುವ ಸೋಲಿಗರು, ಇಡೀ ರಾತ್ರಿ ಇಲ್ಲೇ ತಂಗುತ್ತಾರೆ. ದೇವರಿಗೆ ಪೂಜೆ ಮಾಡಿ ತಮ್ಮ ಸಾಂಪ್ರದಾಯಿಕ ಗೊರುಕನ ನೃತ್ಯ, ದೇವರ ಕುಣಿತ ಹಾಗೂ ಮಹದೇಶ್ವರ ಜನಪದ ಗೀತೆಗಳ ಗಾಯನ  ಮಾಡುತ್ತಾರೆ. ಇದರೊಂ ದಿಗೆ ಅಲ್ಲೇ ಅಡುಗೆ ಮಾಡಿ ಸಾಮೂಹಿಕ ಪ್ರಸಾದ ಸ್ವೀಕರಿಸುವ ಪದ್ಧತಿಯೂ ರೂಢಿಯಲ್ಲಿದೆ. ನಂತರ ಮಾರನೇ ದಿನ ಬೆಟ್ಟದಲ್ಲಿರುವಗಂಗಾಧರೇಶ್ವರ ತೇರಿನಲ್ಲೂ ಭಾಗವಹಿಸಿ ಈ ಹಬ್ಬಕ್ಕೆ ಸಂಭ್ರಮದತೆರೆಯನ್ನು ಎಳೆಯುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ ಎನ್ನುತ್ತಾರೆ ಸ್ಥಳೀಯ ಸೋಲಿಗ ಮುಖಂಡ ಪುಟ್ಟರಂಗೇಗೌಡ.

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.