ಸೋಮಣ್ಣ ಪೂಜಾ ಕೈಂಕರ್ಯದ ತರಬೇತಿ ಪಡೆಯಲಿ: ಇಬ್ರಾಹಿಂ ವ್ಯಂಗ್ಯ
Team Udayavani, Apr 6, 2017, 3:45 AM IST
ಚಾಮರಾಜನಗರ: ಬಿಜೆಪಿಯವರಿಗೆ ವಿರಕ್ತ ಮಠ , ಲಿಂಗ ಪೂಜೆ , ಇದೆಲ್ಲ ಏನು ಎಂದು ಗೊತ್ತಿಲ್ಲ. ಹಾಗಾಗಿ ಸೋಮಣ್ಣ ಸುತ್ತೂರು ಮಠದಲ್ಲಿ ಮೂರು ತಿಂಗಳು ಪೂಜಾ ಕೈಂಕರ್ಯ ತರಬೇತಿ ಪಡೆಯಲಿ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹರವೆಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಅವರ ಚುನಾವಣಾ ಪ್ರಚಾರ ಹಾಗೂ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸುತ್ತೂರು ಶ್ರೀ, ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ಚುನಾವಣೆಗೆ ಗೀತಾ ಮಹದೇವಪ್ರಸಾದ್ ಸ್ಪರ್ಧಿಸಿದ್ದಾರೆ. ಅವರಿಗೆ ಮತ ಕೊಟ್ಟರೆ ಸಂತೋಷ. ಜೋಳಿಗೆ ಹಿಡಿದು ಹೋಗುತ್ತಿದ್ದೇವೆ. ಮತ ಭಿಕ್ಷೆ ನೀಡಿ ಎಂದು ಇಬ್ರಾಹಿಂ ಕೋರಿದರು.