ರಾಮೇಶ್ವರನಿಗೆ ವಿಶೇಷ ಪೂಜ
Team Udayavani, Feb 14, 2018, 4:28 PM IST
ಗುಂಡ್ಲುಪೇಟೆ: ಮಹಾಶಿವರಾತ್ರಿ ಹಬ್ಬವನ್ನು ಪಟ್ಟಣದ ಹಾಗೂ ತಾಲೂಕಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು. ಪಟ್ಟಣದ ರಾಮೇಶ್ವರ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು.
ಹಬ್ಬದ ದಿನವಾದ ಮಂಗಳವಾರ ಮುಂಜಾನೆ 5 ರಿಂದ ಲಿಂಗಸ್ವರೂಪಿಯಾದ ಶಿವನಿಗೆ ಬೆಣ್ಣೆಯ ಅಲಂಕಾರ ಮಾಡಲಾಗಿತ್ತು. ಜೊತೆಗೆ ವಿವಿಧ ಪುಷ್ಪಗಳೊಂದಿಗೆ ವಿದ್ಯುತ್ ದೀಪಾಲಂಕಾರವನ್ನೂ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು.
ಭಕ್ತರಿಗೆ ಗಂಗಾಜಲ ವಿತರಣೆ:ಹಬ್ಬದ ಅಂಗವಾಗಿ ಮುಜರಾಯಿ ಇಲಾಖೆಯಿಂದ ಗಂಗಾಜಲವನ್ನು ದೇವಸ್ಥಾನಕ್ಕೆ ತಲುಪಿಸಲಾಗಿತ್ತು. ಶಿವನ ದರ್ಶನ ಪಡೆದ ಪ್ರತಿ ಭಕ್ತರಿಗೂ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಗಂಗಾಜಲ ವಿತರಣೆ ಮಾಡಿದರು.
ಐದು ಜಾವಗಳು ಏರ್ಪಡಿಸಿದ್ದ ಶಿವರಾತ್ರಿಯ ವಿಶೇಷ ಪೂಜಾ ಕೈಂಕರ್ಯದಲ್ಲಿ ವೆಂಕಟಪತಿ ಜೋಯಿಸ್ ಮತ್ತು ರಂಗನಾಥ ಜೋಯಿಸ್ ಭಾಗವಹಿಸಿದ್ದರು. ಇದರೊಂದಿಗೆ ತಾಲೂಕಿನ ವಿವಿಧ ದೇವಾಲಯಗಳು ಹಾಗೂ ಮಠಮಂದಿರಗಳಲ್ಲಿ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಳು ನಡೆದವು.
ದುಂದಾಸನಪುರದ ಮಹದೇಶ್ವರ ದೇವಸ್ಥಾನ, ಕಂದೇಗಾಲ ಸಮೀಪದ ಸ್ಕಂದಗಿರಿ ಪಾರ್ವತಾಂಬಾ ಸೋಮೇಶ್ವರ ದೇವಸ್ಥಾನ, ತ್ರಿಯಂಭಕಪುರ ತ್ರಿಯಂಭಕೇಶ್ವರ ದೇವಸ್ಥಾನ ಹಾಗೂ ತೆರಕಣಾಂಬಿಯ ಮೂಲಸ್ಥಾನೇಶ್ವರ ದೇವಸ್ಥಾನಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆಗಳು ನಡೆದವು. ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುವುದರೊಂದಿಗೆ ಸ್ವಾಮಿಯ ಕೃಪೆಗೆ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್